ಚಾಮರಾಜನಗರ: ನಿನ್ನೆ ಕಲ್ಲುಕ್ವಾರಿ ಕುಸಿತದು ಅವಘಡ ಉಂಟಾದ ಪರಿಣಾಮ, ಚಾಮರಾಜನಗರ ಜಿಲ್ಲೆಯಾಧ್ಯಂತ ಒಂದು ತಿಂಗಳು ಕಾಲ ಎಲ್ಲಾ ಕಲ್ಲುಕ್ವಾರಿಯನ್ನು ಬಂದು ಮಾಡುವುದಾಗಿ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.
ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದಂತ ಅವರು, ಜಿಲ್ಲೆಯಲ್ಲಿ ಗಣಿಗಾರಿಕೆ ಸಂಬಂಧ ತನಿಖೆ ನಡೆಸುವ ಉದ್ದೇಶದಿಂದ ಡಿಸಿ ಚಾರುಲತಾ ಸೋಮಲ್ ನೇತೃತ್ವದಲ್ಲಿ ತಂಡವನ್ನು ರಚಿಸಲಾಗಿದೆ.
ಅವರು ಎಲ್ಲಾ ಗಣಿಗಾರಿಕೆಗೆ ತೆರಳಿ, ಸ್ಥಳ ಪರಿಶೀಲನೆ ನಡೆಸಲಿದ್ದಾರೆ ಎಂದು ಹೇಳಿದರು.
ನಾಳೆ ಬೆಳಿಗ್ಗೆಯಿಂದ ಡಿಸಿ ನೇತೃತ್ವದ ತಂಡ ಗಣಿಗಳ ದಾಖಲೆ ಪರಿಶೀಲನೆಗಾಗಿ ತೆರಳೋದಕ್ಕೆ ಕಾರ್ಯಾರಂಭ ಮಾಡಲಿದೆ. ಅಕ್ರಮ, ಕಾನೂನು ವಿರುದ್ಧಧ ಗಣಿಗಾರಿಕೆಗಳನ್ನು ಯಾವುದೇ ಪ್ರಭಾವಿಗಳು ನಡೆಸುತ್ತಿದ್ದರೂ, ಕಾನೂನಿನಡಿ ಕ್ರಮ ಡಿಸಿ ಕ್ರಮ ಕೈಗೊಳ್ಳಲಿದ್ದಾರೆ ಎಂದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskannada