ಕಂದನನ್ನು ಮುದ್ದಿಸುವ ಚಿಂಪಾಂಜಿಯ ದೃಶ್ಯವೇ ಹೃದಯಸ್ಪರ್ಶಿ

ಆ ತಾಯಿ ತನ್ನ ಕರುಳಬಳ್ಳಿಯನ್ನು ಕಾಣದೆ ಪರಿತಪಿಸಿದ್ದಳು. ಕಂದನಿಂದ ದೂರ ಇದ್ದು ಎರಡು ದಿನ ನೊಂದಿದ್ದಳು. ಆದರೆ, ಎರಡು ದಿನಗಳ ಬಳಿಕ ತನ್ನ ಮರಿಯನ್ನು ಕೈಯಲ್ಲಿ ಹಿಡಿಯುವ ಕ್ಷಣ ಬಂದಾಗ ಅವಳು ತೋರಿದ ಪ್ರೀತಿ ನಿಜಕ್ಕೂ ಹೃದಯಸ್ಪರ್ಶಿ. ತಾಯಿ ಮಮತೆಯ ಈ ದೃಶ್ಯ ಒಂದು ಕ್ಷಣ ಎಲ್ಲರ ಕಣ್ಣಾಲಿಗಳು ತುಂಬಿ ಬರುವಂತೆ ಮಾಡಿವೆ.ತಾಯಿ ಮಮತೆ ಎಂಬುದು ಅದ್ಭುತ. ಮನುಷ್ಯರಾಗಲಿ, ಪ್ರಾಣಿಗಳಾಗಲಿ ತಾಯಿ ಪ್ರೀತಿಯಲ್ಲಿ ಯಾವುದೇ ವ್ಯತ್ಯಾಸ ಇಲ್ಲ. ಅದಕ್ಕೆ ಬೇಕಾದಷ್ಟು ಸಾಕ್ಷಿಗಳಿವೆ. ಇದು ಕೂಡಾ ಅಂತಹದ್ದೇ ಒಂದು ಭಾವನಾತ್ಮಕ ದೃಶ್ಯ. ತಾಯಿ ಚಿಂಪಾಂಜಿ ಮತ್ತು ಮರಿಯ ಪುನರ್ಮಿಲನದ ಈ ದೃಶ್ಯ ಈಗ ಎಲ್ಲರ ಹೃದಯ ಗೆದ್ದಿದೆ. ಈ ತಾಯಿಯ ಪ್ರೀತಿಯನ್ನು ಕಂಡಾಗ ಮಾತೇ ಹೊರಡದಂತಾಗುತ್ತದೆ.ಸೆಡ್ಗ್ವಿಕ್ ಕೌಂಟಿ ಮೃಗಾಲಯ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದೆ. ಮಹಾಲೆ ಎಂಬ ತಾಯಿ ಚಿಂಪಾಂಜಿಯ ಹೃದಯಸ್ಪರ್ಶಿ ದೃಶ್ಯವಿದು. ಈ ಚಿಂಪಾಂಜಿ ಮೊನ್ನೆ ಗಂಡು ಮರಿಗೆ ಜನ್ಮ ನೀಡಿತ್ತು. ಆದರೆ, ನವಜಾತ ಮರಿ ಉಸಿರಾಡುತ್ತಿರಲಿಲ್ಲ. ಹೀಗಾಗಿ, ಮೃಗಾಲಯದ ಸಿಬ್ಬಂದಿ ಮತ್ತು ವೈದ್ಯಕೀಯ ಸಿಬ್ಬಂದಿ ಈ ಮರಿಯನ್ನು ಪ್ರತ್ಯೇಕವಾಗಿ ಇರಿಸಿ ಆರೈಕೆ ಮಾಡಿದ್ದರು. ಎರಡು ದಿನಗಳ ಕಾಲ ಇವರು ಕಂದನನ್ನು ಆರೈಕೆ ಮಾಡಿದ್ದರು. ಇದಾದ ಬಳಿಕ ಪುಟಾಣಿ ಚೇತರಿಕೆ ಕಂಡಿತ್ತು. ಹೀಗೆ ಮರಿ ಚೇತರಿಕೆ ಕಂಡ ತಕ್ಷಣ ತಾಯಿ ಚಿಂಪಾಂಜಿಯನ್ನು ಕಂದನಲ್ಲಿಗೆ ಬಿಡಲಾಗಿತ್ತು. ಈ ವೇಳೆ ಓಡೋಡಿ ಬಂದ ಮಹಾಲೆ ತನ್ನ ಮರಿಯನ್ನು ಒಂದಷ್ಟು ಹೊತ್ತು ಸೂಕ್ಷ್ಮವಾಗಿ ನೋಡಿ ಬಳಿಕ ಎತ್ತಿ ಆಡಿಸಿ ಮುದ್ದಾಡಿದ್ದಳು. ಈ ಕ್ಷಣವೇ ಸುಂದರ. ಈ ತಾಯಿಯ ಪ್ರೀತಿಯನ್ನು ಕಂಡಾಗ ಹೃದಯ ತುಂಬಿ ಬರುತ್ತದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮಗುವಿನ ನಿರೀಕ್ಷೆಯಲ್ಲಿ 'ರಾಜಾ ರಾಣಿ' ಖ್ಯಾತಿಯ ಸಮೀರ್ ಆಚಾರ್ಯ ಶ್ರಾವಣಿ ದಂಪತಿ

Mon Jan 9 , 2023
  ‘ರಾಜಾ ರಾಣಿ’ ರಿಯಾಲಿಟಿ ಶೋ ಖ್ಯಾತಿಯ ಸಮೀರ್ ಆಚಾರ್ಯ ಶ್ರಾವಣಿ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಶ್ರಾವಣಿ ಈ ವಿಷಯವನ್ನು ಹಂಚಿಕೊಂಡಿದ್ದಾರೆ.ಬೇಬಿ ಬಂಪ್ ಫೋಟೋದೊಂದಿಗೆ “ಜೀವನದ ಹೊಸ ಹಂತ” ಎಂದು ಶ್ರಾವಣಿ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಸ್ಯಾಂಡಲ್‌ವುಡ್ ಗಣ್ಯರು, ಆತ್ಮೀಯರು ಈ ಜೋಡಿಗೆ ಶುಭಾಶಯ ತಿಳಿಸಿದ್ದಾರೆ.ಶ್ರಾವಣಿಗಾಗಿ ಸೀಮಂತ ಕಾರ್ಯಕ್ರಮ ಮಾಡಲಾಗಿತ್ತು. ಈ ಖಾಸಗಿ ಸಮಾರಂಭದಲ್ಲಿ ಕುಟುಂಬಸ್ಥರ ಜೊತೆ ಆತ್ಮೀಯರು ಭಾಗವಹಿಸಿದ್ದರು. ಕೊನೆ ಕೊನೆಯದಾಗಿ ‘ರಾಜಾ […]

Advertisement

Wordpress Social Share Plugin powered by Ultimatelysocial