ಬೆಂಗಳೂರು : ಬೆಂಗಳೂರಿನ ಜೆ.ಜೆ.ನಗರದಲ್ಲಿ ಚಂದ್ರು ಹತ್ಯೆ ಪ್ರಕರಣಕ್ಕೆ ಮತ್ತೊಂದು ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಉರ್ದು ಮಾತನಾಡಿನಲ್ಲ ಅನ್ನೋ ಕಾರಣಕ್ಕೆ ಚಂದ್ರು ಹತ್ಯೆ ಮಾಡಲಾಗಿದೆ ಎಂದು ಹತ್ಯೆಯಾದ ಚಂದ್ರು ಕುಟುಂಬಸ್ಥರು ಆರೋಪಿಸಿದ್ದಾರೆ.
ಚಂದ್ರು ಬೈಕ್ ಅಪಘಾತವಾಗೇ ಇಲ್ಲ. ಬೈಕ್ ನಿಲ್ಲಿಸಿದ್ದ ವೇಳೆ ಮುಸ್ಲಿಮ್ ಯುವಕರೇ ಜಗಳ ತೆಗೆದಿದ್ದಾರೆ. ಈ ವೇಳೆ ಮಾತಿಗೆ ಮಾತುಬೆಳೆದು ಚಂದ್ರು ಹತ್ಯೆ ಮಾಡಲಾಗಿದೆ. ಯಾರನ್ನೋ ಕಾಪಾಡುವ ಸಲುವಾಗಿ ಚಂದು ಹತ್ಯೆ ಪ್ರಕರಣವನ್ನು ದಾರಿ ತಪ್ಪಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಇನ್ನು ಯಾರೂ ಒಂದೂ ರೂಪಾಯಿನೂ ಕೊಟ್ಟಿಲ್ಲ. ಶಾಸಕ ಜಮೀರ್ ಅಹ್ಮದ್ ಸುಳ್ಳು ಹೇಳುತ್ತಿದ್ದಾರೆ. ನಾವು ಪೊಲೀಸ್ ಠಾಣೆಗೆ ಹೋಗಿ ಬರುತ್ತಿದ್ದೇವೆ. ಠಾಣೆಯ ಒಳಗೆ ಏನು ನಡೆಯುತ್ತಿದೆ ಎಂದು ನಮಗೆ ಗೊತ್ತಿಲ್ಲ. ನಾವು ಯಾರಿಂದಲೂ ಒಂದೂ ರೂಪಾಯಿ ಸಹ ಪಡೆದಿಲ್ಲ ಎಂದು ಹತ್ಯೆಯಾದ ಚಂದ್ರು ಸಹೋದರ ಸ್ಯಾಮುಯೆಲ್ ಹೇಳಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskannada