ಕೊರಟಗೆರೆ ತಾಲೂಕಿನ ಕೋಳಾಲ ಹೋಬಳಿಯ ಇರಕಸಂದ್ರ ಕಾಲೋನಿಯಲ್ಲಿ ಈ ದುರ್ಘಟನೆ ಜರುಗಿದೆ.ಇರಕಸಂದ್ರ ಕಾಲೋನಿಯ ಕೆಂಪರಾಜು ಮಕ್ಕಳಾದ ಧನುಷ್ ಹಾಗೂ ಚೇತನ್ ಎನ್ನುವ ಬಾಲಕರು ಮನೆ ಇತ್ತಲಿನಲ್ಲಿ ಹಸು ಕಟ್ಟಿ ಹಾಲು ಕರೆಯಲು ಹೋಗಿದ್ದಾಗ ಏಕಾಏಕಿ ಬಂದ ಚಿರತೆಯೊಂದು ಇಬ್ಬರು ಬಾಲಕರು ಸೇರಿ ಓರ್ವ ವೃದ್ಧನಿಗೆ ಕಡಿದು ಪರಾರಿಯಾಗಿದೆ..ನಂತರ ಸಾರ್ವಜನಿಕರಿಂದ 108 ಆಂಬುಲೆನ್ಸ್ ಗೆ ಕರೆ ಮಾಡಿದಾಗ ಸಮಯಕ್ಕೆ ಸರಿಯಾಗಿ ಬಾರದೆ ಬಾಲಕರಿಗೆ ತೀವ್ರ ರಕ್ತಸ್ರಾವವಾಗಿದೆ. ನಂತರ ಖಾಸಗಿ ವಾಹನದಲ್ಲಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದೆ.ಇರಕ ಸಂದ್ರ ಕಾಲೋನಿ ಸುತ್ತಮುತ್ತ ಚಿರತೆ ಪ್ರತ್ಯಕ್ಷವಾಗಿದ್ದು ತಕ್ಷಣ ಅರಣ್ಯ ಇಲಾಖೆ ಚಿಂತೆಯನ್ನು ಸರಿ ಹಿಡಿಯುವಂತೆ ಸಾರ್ವಜನಿಕರು ಒತ್ತಾಯ ಮಾಡಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada