ದೇಶದಲ್ಲಿ ಪ್ರತಿದಿನ ಕೊರೊನಾ ಸೋಂಕಿತರ ಸಂಖ್ಯೆ 13 ಸಾವಿರಕ್ಕೆ ಇಳಿಕೆ

ನವದೆಹಲಿ,ಫೆ.22- ದೇಶದಲ್ಲಿ ಕೊರೊನಾ ಪಾಸಿವಿಟಿ ದರ ಶೇ.0.42ಕ್ಕೆ ಇಳಿದಿದೆ. ನಿನ್ನೆ 16 ಸಾವಿರದಷ್ಟಿದ್ದ ಸೋಂಕಿನ ಪ್ರಕರಣಗಳು ಇಂದು 13 ಸಾವಿರಕ್ಕೆ ಇಳಿಕೆಯಾಗುವ ಮೂಲಕ ಸೋಂಕಿನ ಪ್ರಮಾಣ ಗಣನೀಯವಾಗಿ ಕ್ಷೀಣಿಸುತ್ತಿದೆ. ಕಳೆದ 24 ಗಂಟೆಯಲ್ಲಿ ಸೋಂಕಿನಿಂದ 235 ಮಂದಿ ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.ಒಂದೇ ದಿನದಲ್ಲಿ 34,226 ಜನ ಈ ಸೋಂಕಿನಿಂದ ಗುಣಮುಖರಾಗಿದ್ದು, ಒಟ್ಟಾರೆ 4,21,58,510 ಮಂದಿ ಪೂರ್ಣ ಚೇತರಿಕೆ ಕಂಡಿದ್ದು, ಗುಣಮುಖರಾಗುವವರ ಪ್ರಮಾಣ ಶೇ.98.33ರಷ್ಟಿದೆ.ನಿನ್ನೆ ಮೃತಪಟ್ಟ 235 ಮಂದಿ ಸೇರಿದಂತೆ ಒಟ್ಟಾರೆ ಕೊರೊನಾ ಸೋಂಕಿಗೆ 5,12,344 ಮಂದಿ ಬಲಿಯಾಗಿದ್ದಾರೆ. ದೇಶದಲ್ಲಿ ಸಕ್ರಿಯ ಸೋಂಕಿತರ ಸಂಖ್ಯೆ 1,81,075 ಮಾತ್ರ ಇದೆ. ಸೋಂಕು ನಿಯಂತ್ರಣಕ್ಕೆ ವ್ಯಾಕ್ಸಿನೇಷನ್ ನೀಡಲಾಗುತ್ತಿದ್ದು, ಈವರೆಗೆ ಸುಮಾರು 1,75,83,27,441 ಕೋಟಿ ಡೋಸ್ ವ್ಯಾಕ್ಸಿನೇಷನ್ ನೀಡಲಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಅಲ್ಲು ಅರ್ಜುನ್ ಅವರ 100 ಕೋಟಿ ಬಂಗಲೆಯಿಂದ 7 ಕೋಟಿ ರೂ ವ್ಯಾನಿಟಿ ವ್ಯಾನ್, 5 ದುಬಾರಿ ವಸ್ತುಗಳು!

Tue Feb 22 , 2022
ಅಲ್ಲು ಅರ್ಜುನ್ ದಕ್ಷಿಣ ಭಾರತದ ಅತ್ಯಂತ ಜನಪ್ರಿಯ ನಟರಲ್ಲಿ ಒಬ್ಬರು, ಅವರ ಅಸಾಧಾರಣ ನೃತ್ಯ ಪ್ರದರ್ಶನಗಳು ಮತ್ತು ಅವರು ಹೊರಹಾಕುವ ಅಸಮರ್ಥನೀಯ ಮೋಡಿಗೆ ಧನ್ಯವಾದಗಳು. ಬ್ಯಾಕ್-ಟು-ಬ್ಯಾಕ್ ಯಶಸ್ಸಿನೊಂದಿಗೆ, ಅವರು ಭಾರತೀಯ ಚಿತ್ರರಂಗದಲ್ಲಿ ಹೆಚ್ಚು ಬೇಡಿಕೆಯಿರುವ ನಟರಲ್ಲಿ ಒಬ್ಬರು. ಅಲ್ಲು ಅರ್ಜುನ್ ಎಲ್ಲದರಲ್ಲೂ ಕ್ಲಾಸಿ ಟೇಸ್ಟ್ ತೋರುತ್ತಿದ್ದಾರೆ. ಅದು ಅವರ ಮನೆಯಾಗಿರಲಿ ಅಥವಾ ಅವರ ಸ್ವಂತ ಕಾರುಗಳಾಗಿರಲಿ ಅಥವಾ ಅವರ ವ್ಯಾನಿಟಿ ವ್ಯಾನ್ ಆಗಿರಲಿ, ಅಲ ವೈಕುಂಠಪುರಮುಲೂ ನಟನು ತನ್ನ ಅಭಿರುಚಿಗೆ […]

Advertisement

Wordpress Social Share Plugin powered by Ultimatelysocial