ರಾಜ್ಯದಲ್ಲಿ ಕೋವಿಡ್ ಸಕ್ರಿಯ ಪ್ರಕರಣಗಳ ಸಂಖ್ಯೆ ಮತ್ತಷ್ಟು ಇಳಿಕೆಯಾಗಿದೆ

 

ಬೆಂಗಳೂರು: ರಾಜ್ದದಲ್ಲಿ ಕೋವಿಡ್ ಸಕ್ರಿಯ ಪ್ರಕರಣಗಳ ಸಂಖ್ಯೆ ಮತ್ತಷ್ಟು ಇಳಿಕೆಯಾಗಿದ್ದು, ಸದ್ಯ 19,761 ಸೋಂಕಿತರು ಇದ್ದಾರೆ.

ಸೋಂಕು ದೃಢ ಪ್ರಮಾಣ ಸಹ ಶೇ 1.74ಕ್ಕೆ ಇಳಿಕೆಯಾಗಿದ್ದು, 1,579 ಮಂದಿ ಕೋವಿಡ್ ಪೀಡಿತರಾಗಿರುವುದು ಗುರುವಾರ ದೃಢಪಟ್ಟಿದೆ.

ಬೆಂಗಳೂರಿನಲ್ಲಿ 769 ಮಂದಿ ಸೋಂಕಿತರಾಗಿದ್ದಾರೆ.

ತುಮಕೂರಿನಲ್ಲಿ 84, ಮೈಸೂರಿನಲ್ಲಿ 83, ಬೆಳಗಾವಿಯಲ್ಲಿ 73, ಬಳ್ಳಾರಿಯಲ್ಲಿ 55 ಮಂದಿ ಕೋವಿಡ್ ಪೀಡಿತರಾಗಿದ್ದಾರೆ. ರಾಮನಗರದಲ್ಲಿ ಒಂದು ಪ್ರಕರಣ ಮಾತ್ರ ದೃಢಪ‍ಟ್ಟಿದೆ. ಈವರೆಗೆ ವರದಿಯಾದ ಒಟ್ಟು ಪ್ರಕರಣಗಳ ಸಂಖ್ಯೆ 39.33 ಲಕ್ಷಕ್ಕೆ ಏರಿಕೆಯಾಗಿದೆ.

ಕೊರೊನಾ ಸೋಂಕಿತರಲ್ಲಿ 23 ಮಂದಿ ಮೃತಪಟ್ಟಿದ್ದಾರೆ. ಬೆಂಗಳೂರಿನಲ್ಲೇ ಏಳು ಮಂದಿ ಸಾವಿಗೀಡಾಗಿದ್ದಾರೆ. ರಾಜ್ಯದಲ್ಲಿ ಮರಣ ಪ್ರಮಾಣ ದರವು ಶೇ 1.45 ರಷ್ಟು ವರದಿಯಾಗಿದೆ. ಈವರೆಗೆ ಸಾವಿಗೀಡಾದವರ ಒಟ್ಟು ಸಂಖ್ಯೆ 39,738ಕ್ಕೆ ತಲುಪಿದೆ.

ಸೋಂಕಿತರಲ್ಲಿ ಬೆಂಗಳೂರಿನಲ್ಲಿ 1,889 ಮಂದಿ ಸೇರಿದಂತೆ ರಾಜ್ಯದಲ್ಲಿ 5,079 ಮಂದಿ ಚೇತರಿಸಿಕೊಂಡಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮುಂಬೈನಲ್ಲಿ ಭಾರತದ ಮೊದಲ ವಾಟರ್ ಟ್ಯಾಕ್ಸಿ ಸೇವೆಯನ್ನು ಪ್ರಾರಂಭ!!

Fri Feb 18 , 2022
ಮುಂಬೈ ನಿವಾಸಿಗಳಿಗೆ ಇಲ್ಲಿದೆ ಸಿಹಿ ಸುದ್ದಿ! ಬಹುನಿರೀಕ್ಷಿತ ಮತ್ತು ಭಾರತದ ಮೊದಲ ವಾಟರ್ ಟ್ಯಾಕ್ಸಿ ಸೇವೆಯು ಮುಂಬೈನ ಪೂರ್ವ ಕರಾವಳಿಯನ್ನು ನವಿ ಮುಂಬೈ ಮುಖ್ಯಭೂಮಿಗೆ ಮತ್ತು ನಗರದ ಇತರ ಸ್ಥಳಗಳಿಗೆ ಸಂಪರ್ಕಿಸುತ್ತದೆ, ಇದು ಗುರುವಾರ ಹೆಚ್ಚಿನ ಸಂಭ್ರಮದ ನಡುವೆ ಉದ್ಘಾಟನೆಯಾಯಿತು. ಈ ಸೇವೆಯ ಬಗ್ಗೆ ನಮಗೆ ತಿಳಿದಿರುವ ಎಲ್ಲಾ ಇಲ್ಲಿದೆ – ವಾಟರ್ ಟ್ಯಾಕ್ಸಿ ನಿಖರವಾಗಿ ಏನು, ಅದು ಚಲಿಸುವ ಮಾರ್ಗ ಮತ್ತು ಅದರ ಬೆಲೆ ಎಷ್ಟು.   ವಾಟರ್ […]

Advertisement

Wordpress Social Share Plugin powered by Ultimatelysocial