ಚಳ್ಳಕೆರೆ ಅಧಿಕಾರಿಗಳ ನಿರ್ಲಕ್ಷೆಯಿಂದ ನಿಲ್ಲದ ಗೋ ಮಾಂಸ ದಂಧೆ. ದೇಶದಲ್ಲಿ ಗೋ ಹತ್ಯೆ ನಿಷೇಧವಿದ್ದರೂ ನಗರದಲ್ಲಿ ದಿನನಿತ್ಯ ಗೋಮಾಂಸ ದಂಧೆ ರಾಜರೋಷವಾಗಿ ನಡೆಯುತ್ತಿದೆ. ಚಳ್ಳಕೆರೆ ನಗರದ ಗಾಂಧಿನಗರ,ಅಜ್ಜಯ್ಯನ ಗುಡಿ ರಸ್ತೆ ಮಾಂಸದಂಗಡಿಯಲ್ಲಿ ಗೋ ಮಾಂಸ ದಂಧೆ ಹೇರಳವಾಗಿ ನಡೆಯುತ್ತಿದ್ದರೂ ಅಧಿಕಾರಿಗಳು ಕಣ್ಣಮುಚ್ಚಿ ಕುಳಿತಿದ್ದಾರೆ .ಈ ಹಿಂದೆ ಹಲವು ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಇದರ ವಿರುದ್ಧ ಕ್ರಮ ಕೈಗೊಳಲ್ಲದಿರುವ ಅಧಿಕಾರಿಗಳ ನಿರ್ಲಕ್ಷವೇ ದಂದೆಗೆ ಮೂಲ ಕಾರಣವಾಗಿದೆ. ದೇಶದಲ್ಲಿ ಗೋ ಹತ್ಯೆ ವಿರೋಧ ವ್ಯಕ್ತ ವಾಗುತ್ತಿದ್ದರೂ ಮಾಂಸದಂದೆ ಕೋರರು ಹಣದ ಆಸೆಗೆ ಬಿದ್ದು ದಂದೆಯನ್ನು ನಿಲ್ಲಿಸುವಂತೆ ಕಾಣುತ್ತಿಲ್ಲ. ಇದರ ವಿರುದ್ದ ನಾಗರೀಕರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಇದನ್ನೂ ಓದಿ :ಬೈಕ್ ಕದಿಯುತ್ತಿದ್ದ ಕಳ್ಳನ ಬಂಧನ