ಹನೂರು : ಮರ ತುಂಬಿಕೊಂಡು ಹೋಗುತ್ತಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ 4 ಹಸುಗಳು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತಾಲೂಕಿನ ಬೋರದೊಡ್ಡಿ ಗ್ರಾಮದ ಸಮೀಪ ಜರುಗಿದೆ.ಬೋರೆದೊಡ್ಡಿ ಗ್ರಾಮದ ರಂಗಸ್ವಾಮಿ ರವಿ ಮಾದಯ್ಯ ಎಂಬುವರಿಗೆ ಸೇರಿದ ನಾಲ್ಕು ಹಸುಗಳು ಮೃತಪಟ್ಟರೆ, ನಾಗ ಎಂಬುವರಿಗೆ ಸೇರಿದ ಹಸು ಕಾಲು ಮುರಿದಿದೆ.
ಘಟನೆಯ ವಿವರ : ಒಡೆಯರ ಪಾಳ್ಯ ಗ್ರಾಮದಿಂದ ತುಮಕೂರು ನಗರಕ್ಕೆ ಮರ ತುಂಬಿಕೊಂಡು ಹೋಗುತ್ತಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಬೋರೆದೊಡ್ಡಿ ಗ್ರಾಮದ ಸಮೀಪ ಪಲ್ಟಿ ಹೊಡೆದಿದೆ. ಪರಿಣಾಮ ಜಮೀನಿನಲ್ಲಿ ಮೇವು ಮೇಯುತಿದ್ದ ನಾಲ್ಕು ಹಸುಗಳು ಸ್ಥಳದಲ್ಲೇ ಮತ ಪಟ್ಟಿವೆ.ಪರಿಹಾರ ವಿತರಿಸಿದ ಜನ ಧ್ವನಿ ಬಿ ವೆಂಕಟೇಶ್ : ಚಾಲಕನ ನಿಯಂತ್ರಣ ತಪ್ಪಿ ಲಾರಿಯೊಂದು ಪಾರ್ಟಿಯಾಗಿ ಸ್ಥಳದಲ್ಲೇ ನಾಲ್ಕು ಹಸು ಮೃತಪಟ್ಟಿರುವ ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಒಬಿಸಿ ಕಾರ್ಯಕಾರಿಣಿ ರಾಜ್ಯ ಸಮಿತಿ ಸದಸ್ಯ ಜನದ್ವನಿ ಬಿ ವೆಂಕಟೇಶ್ ತಡರಾತ್ರಿ ಗ್ರಾಮಕ್ಕೆ ಭೇಟಿ ನೀಡಿ ರೈತರಿಗೆ ಸಾಂತ್ವನ ತಿಳಿಸಿ ಹಸುಗಳ ಮಾಲೀಕರಿಗೆ ತಲಾ ಐದು ಸಾವಿರ ವೈಯಕ್ತಿಕ ಪರಿಹಾರ ವಿತರಿಸಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada