ಬರವಣಿಗೆಯಿರುವ ಕರೆನ್ಸಿ ನೋಟುಗಳು ಮಾನ್ಯವಲ್ಲ:

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ರೆನ್ಸಿ ನೋಟುಗಳ ಮೇಲೆ ಯಾವುದೇ ಬರಹಗಳು ಅಥವಾ ಗೀರುಗಳು ಇರಬಾರದು. ಹಣದ ನೋಟುಗಳ ಮೇಲೆ ಏನಾದರೂ ಬರೆದಿದ್ದರೆ ಅದು ಅಮಾನ್ಯ. ಅವುಗಳ ಮೇಲೆ ಯಾವುದೇ ಬರಹಗಳು ಅಥವಾ ಹುಚ್ಚು ಗೀರುಗಳಿದ್ದರೆ ಅಂತಹ ಕರೆನ್ಸಿ ನೋಟುಗಳನ್ನು ಸ್ವೀಕರಿಸುವುದಿಲ್ಲ.ಈ ಕುರಿತು ಆರ್‌ಬಿಐ ನಿರ್ಧಾರ ಏನು ಮುಂತಾದ ವಿಚಾರಗಳ ಬಗ್ಗೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ.ಪ್ರೆಸ್ ಬ್ಯೂರೋ ಆಫ್ ಇಂಡಿಯಾ (ಪಿಐಬಿ) ಫ್ಯಾಕ್ಟ್ ಚೆಕ್ ಕರೆನ್ಸಿ ನೋಟುಗಳ ಮೇಲೆ ಏನು ಬರೆಯಲಾಗಿದೆಯೋ ಅದು ಮಾನ್ಯವಾಗಿದೆ ಎಂದು ನಡೆಯುತ್ತಿರುವ ಅಭಿಯಾನಕ್ಕೆ ಪ್ರತಿಕ್ರಿಯಿಸಿದೆ. ಹರಿದಾಡುತ್ತಿರುವ ಮಾಹಿತಿಯಲ್ಲಿ ಯಾವುದೇ ಸತ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.ಇತ್ತೀಚೆಗೆ, ಬರಹಗಳಿರುವ ನೋಟುಗಳು ಅಮಾನ್ಯವಾಗಿದೆ ಎಂದು ಆರ್‌ಬಿಐ ಮಾರ್ಗಸೂಚಿಗಳನ್ನು ನೀಡಿದೆ ಎಂದು ಸುಳ್ಳು ಸುದ್ದಿ ವೈರಲ್ ಆಗಿದೆ. ಇದು ಸಾಕಷ್ಟು ಗೊಂದಲಗಳಿಗೆ ದಾರಿಮಾಡಿಕೊಟ್ಟಿತ್ತು. ಈ ಕ್ರಮದಲ್ಲಿ ಪಿ.ಐ.ಬಿ ಫ್ಯಾಕ್ಟ್ ಚೆಕ್ ಮಾಡಿದೆ. ಅಂತಹ ಯಾವುದೇ ಮಾರ್ಗಸೂಚಿಗಳನ್ನು ಆರ್‌ಬಿಐ ನೀಡಿಲ್ಲ ಆದರೆ, ನೋಟುಗಳು ಬೇಗ ಹಾಳಾಗದಂತೆ ಇರಲು ಯಾವುದೇ ನೋಟುಗಳ ಮೇಲೆ ಬರೆಯಬೇಡಿ ಎಂದು ಮನವಿ ಮಾಡಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಈಶಾನ್ಯ ರಾಜ್ಯಗಳು ಅಷ್ಟಲಕ್ಷ್ಮೀಯರು:

Sat Feb 25 , 2023
ದಿಮಾಪುರ್‌: ಕಾಂಗ್ರೆಸ್‌ ಈಶಾನ್ಯ ರಾಜ್ಯಗಳನ್ನು ಎಟಿಎಂ ಆಗಿ ಬಳಸಿ ಕೊಂಡಿತ್ತು. ಆದರೆ ಬಿಜೆಪಿಯು ಈ ಪ್ರದೇಶದ ಎಂಟು ರಾಜ್ಯಗಳನ್ನು ಅಷ್ಟ ಲಕ್ಷ್ಮೀಯರು ಎಂದು ಪರಿಗಣಿಸಿದೆ. ಇಲ್ಲಿನ ಶಾಂತಿ ಮತ್ತು ಅಭಿವೃದ್ಧಿಗಾಗಿ ಸರ್ಕಾರ ಕೆಲಸ ಮಾಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.ನಾಗಾಲ್ಯಾಂಡ್‌ನ‌ ದಿಮಾಪುರದಲ್ಲಿ ಚುನಾವಣಾ ರ್ಯಾಲಿ ಉದ್ದೇಶಿಸಿ ಶುಕ್ರ ವಾರ ಮಾತನಾಡಿದ ಅವರು, “ನಾಗಾ ಲ್ಯಾಂಡ್‌ನ‌ಲ್ಲಿ ಶಾಶ್ವತ ಶಾಂತಿ ಸ್ಥಾಪನೆಗೆ ಎನ್‌ಡಿಎ ಸರ್ಕಾರ ಶ್ರಮಿಸುತ್ತಿದೆ. ಹೀಗಾಗಿ 1958ರ ಸಶಸ್ತ್ರ ಪಡೆಗಳ (ವಿಶೇಷ ಅಧಿಕಾರ) ಕಾಯಿದೆ ರದ್ದು ಗೊಳಿ ಸಲಾಗಿದೆ,’ ಎಂದರು.“ಕಾಂಗ್ರೆಸ್‌ […]

Advertisement

Wordpress Social Share Plugin powered by Ultimatelysocial