ಶಿವಮೊಗ್ಗ: ಸ್ಮಾರ್ಟ್ ಸಿಟಿ ಕಾಮಗಾರಿ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ದಿನಾಂಕ 04-02-2022ರಂದು ಬೆಳಿಗ್ಗೆ 10 ರಿಂದ 6 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.ಈ ಕುರಿತಂತೆ ಮೆಸ್ಕಾಂ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಮೆಗ್ಗಾನ್ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ಸ್ಮಾರ್ಟ್ಸಿಟಿ ಕಾಮಗಾರಿ ಹಮ್ಮಿಕೊಂಡಿರುವುದರಿಂದ ದಿ: 04/02/2022 ರಂದು ಬೆಳಗ್ಗೆ 10.00 ರಿಂದ ಸಂಜೆ 6.00 ರವರೆಗೆ ಕುವೆಂಪು ರಸ್ತೆ, ಮಿಷನ್ ಕಾಂಪೌಂಡ್, ಜೆ.ಪಿ.ಎನ್.ರಸ್ತೆ, ಎಲ್.ಎಲ್.ಆರ್.ರಸ್ತೆ, ಜ್ಯೋತಿ ಗಾರ್ಡನ್, ಬಿ.ಜೆ.ಪಿ.ಕಚೇರಿ, ಹೊಸಮನೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.ಇಲ್ಲಿ ಅಲ್ಲದೇ, ದೈವಜ್ಞ ಕಲ್ಯಾಣ ಮಂದಿರ, ಜಂಬಣ್ಣ ರೈಸ್ಮಿಲ್, ಸುಬ್ಬಯ್ಯ ಆಸ್ಪತ್ರೆ, ಜೈಲ್ ರೋಡ್, ದೊಡ್ಡಮ್ಮ ದೇವಸ್ಥಾನ, ಗೊಮ್ಮಟೇಶ್ವರ ದೇವಸ್ಥಾನನ ಮತ್ತು ಆಲ್ಕೋಳ ವಿವಿ ಕೇಂದ್ರ ವ್ಯಾಪ್ತಿಗೊಳಪಡುವ ಎಸ್.ವಿ.ಬಡಾವಣೆ ಡಿ ಬ್ಲಾಕ್, ವಾಟರ್ ಟ್ಯಾಂಕ್ ಹತ್ತಿರ, ವೃದ್ಧಾಶ್ರಮ ರಸ್ತೆ, ಅಯ್ಯಪ್ಪಸ್ವಾಮಿ ದೇವಸ್ಥಾನ, ಗಾಡಿಕೊಪ್ಪ, ಪೊಲೀಸ್ ಲೇಔಟ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸಬೇಕೆಂದು ಮೆಸ್ಕಾಂ ನ.ಉ.ವಿ-3ರ ಸಹಾಯಕ ಕಾರ್ಯನಿರ್ವಾಃಕ ಇಂಜಿನಿಯರ್ ತಿಳಿಸಿರುತ್ತಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada