ಕನಕಪುರ ಗ್ರಾಮಾಂತರ ಪೊಲೀಸರ ಭರ್ಜರಿ ಕಾರ್ಯಾಚರಣೆಯನ್ನು ಮಾಡಿ ಜಿಂಕೆ ಬೇಟೆಗಾರರನ್ನು ಬಂಧಿಸಿದ್ದಾರೆ. ರಾಮನಗರ ಜಿಲ್ಲೆಯ, ಕನಕಪುರ ತಾಲೂಕಿನ, ತಿಗಳರ ಹೊಸಳ್ಳಿಯ ಬೈಪಾಸ್ ಬಳಿ ಘಟನೆ ನಡೆದಿದೆ. ತಿಗಳರ ಹೊಸಳ್ಳಿಯ ಬೈಪಾಸ್ ಬಳಿ ಒಂದು ಚೀಲ ಹಿಡಿದುಕೊಂಡು ಅನುಮಾನಸ್ಪದವಾಗಿ ನಿಂತಿದ್ದ ಜಿಂಕೆ ಬೇಟೆಗಾರರು…ಮಾಹಿತಿ ತಿಳಿದು ರಹಸ್ಯವಾಗಿ ಸ್ಥಳಕ್ಕೆ ಆಗಮಿಸಿದ ಪೊಲೀಸರು ಕಾರ್ಯಾಚರಣೆ ನಡೆಸಿ 5 ಜಿಂಕೆ ಚರ್ಮಗಳು ಸೇರಿದಂತೆ ಒಂದು ಡಿಯೋ ಬೈಕ್ ನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು. ಆರೋಪಿಗಳದ ರೆಹಮಾನ್, ವೀರಭದ್ರಸ್ವಾಮಿ, ಅಭಿಷೇಕ್ ಆರೋಪಿಗಳನ್ನು ಬಂಧಿಸಲಾಗಿದೆ.
ಇದನ್ನೂ ಓದಿ:ಕೊಳೆತ ಸ್ಥಿತಿಯಲ್ಲಿ ಅಪರಿಚಿತ ಶವ ಪತ್ತೆ