‘ಪಠಾಣ್​’ ಚಿತ್ರದಿಂದ ದೀಪಿಕಾ ಗೆದ್ದು ಬೀಗಿದ್ದಾರೆ.

‘ಪಠಾಣ್​’ ಚಿತ್ರದಿಂದ ದೀಪಿಕಾ ಗೆದ್ದು ಬೀಗಿದ್ದಾರೆ. ಈ ಸಿನಿಮಾದಿಂದ ಅವರ ಜನಪ್ರಿಯತೆ ಹೆಚ್ಚಿದೆ. ಹೀಗಿದ್ದರೂ ಅವರು ಜನಸಾಮಾನ್ಯರ ಜತೆ ವಿಮಾನದಲ್ಲಿ ಪ್ರಯಾಣ ಬೆಳೆಸಿದ್ದಾರೆ.ನಟಿ ದೀಪಿಕಾ ಪಡುಕೋಣೆಅವರು ‘ಪಠಾಣ್’ ಸಿನಿಮಾ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ.

ಇತ್ತೀಚೆಗೆ ಸಾಲು ಸಾಲು ಸೋಲು ಕಂಡಿದ್ದ ಅವರು ಈಗ ‘ಪಠಾಣ್’ ಚಿತ್ರದಿಂದ ಗೆಲುವಿನ ನಗೆ ಬೀರಿದ್ದಾರೆ. ಈ ಮಧ್ಯೆ ದೀಪಿಕಾ ಪಡುಕೋಣೆ ಅವರು ವಿಮಾನದಲ್ಲಿ ಬಿಸ್ನೆಸ್​ ಕ್ಲಾಸ್​ನಲ್ಲಿ ಪ್ರಯಾಣಿಸುವ ಬದಲು ಎಕಾನಮಿ ಕ್ಲಾಸ್​ನಲ್ಲಿ ಪ್ರಯಾಣ ಮಾಡಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಯಾರಿಗೂ ಗೊತ್ತಾಗಬಾರದು ಎನ್ನುವ ಕಾರಣಕ್ಕೆ ದೀಪಿಕಾಹ್ಯಾಟ್ ಹಾಗೂ ಕಪ್ಪು ಗ್ಲಾಸ್ ಹಾಕಿದ್ದರು. ಆದರೂ ಫ್ಯಾನ್ಸ್ ಅವರ ಗುರುತು ಹಿಡಿದಿದ್ದಾರೆ.

ದೀಪಿಕಾ ಪಡುಕೋಣೆ ಅವರು ಬಾಲಿವುಡ್​ನ ಬಹುಬೇಡಿಕೆಯ ನಟಿ ಆಗಿದ್ದಾರೆ. 2018ರಲ್ಲಿ ತೆರೆಗೆ ಬಂದ ‘ಪದ್ಮಾವತ್’ ಚಿತ್ರವೇ ಕೊನೆ. ಅದಾದ ಬಳಿಕ ಅವರಿಗೆ ಸಾಲು ಸಾಲು ಸೋಲುಗಳು ಉಂಟಾದವು. ಜೆಎನ್​ಯು ಪ್ರತಿಭಟನೆಗೆ ಅವರು ಬೆಂಬಲ ನೀಡಿದ್ದರಿಂದ ಕೆಲವರ ವಿರೋಧ ಕಟ್ಟಿಕೊಂಡರು. ಈಗ ‘ಪಠಾಣ್​’ ಚಿತ್ರದಿಂದ ದೀಪಿಕಾ ಗೆದ್ದು ಬೀಗಿದ್ದಾರೆ. ಅವರು ಈ ಚಿತ್ರದಲ್ಲಿ ಸಖತ್ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದಿಂದ ಅವರ ಜನಪ್ರಿಯತೆ ಹೆಚ್ಚಿದೆ. ಹೀಗಿದ್ದರೂ ಅವರು ಜನಸಾಮಾನ್ಯರ ಜತೆ ವಿಮಾನದಲ್ಲಿ ಪ್ರಯಾಣ ಬೆಳೆಸಿದ್ದಾರೆ.

ದೀಪಿಕಾ ಅವರು ಕಿತ್ತಳೆ ಬಣ್ಣದ ಡ್ರೆಸ್ ಹಾಕಿದ್ದರು. ತಲೆಗೆ ಕ್ಯಾಪ್ ಹಾಕಿ, ಗ್ಲಾಸ್ ಹಾಕಿದ್ದರಿಂದ ಅವರನ್ನು ಗುರುತಿಸೋದು ಕಷ್ಟ ಆಗಿದೆ. ಆದಾಗ್ಯೂ ಕೆಲವರು ದೀಪಿಕಾ ಅವರನ್ನು ಪತ್ತೆ ಹಚ್ಚಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡಲಾಗಿದೆ. ಸದ್ಯ ಈ ವಿಡಿಯೋಗೆ ಫ್ಯಾನ್ಸ್ ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ‘ದೀಪಿಕಾ ಎಷ್ಟು ಸಿಂಪಲ್’ ಎಂದು ಅನೇಕರು ಕಮೆಂಟ್ ಮಾಡುತ್ತಿದ್ದಾರೆ.

ದೀಪಿಕಾ ಪಡುಕೋಣೆ ‘ಜವಾನ್’ ಸಿನಿಮಾದಲ್ಲಿ ಅತಿಥಿ ಪಾತ್ರ ಮಾಡುತ್ತಿದ್ದಾರೆ. ಇದು ಶಾರುಖ್ ಖಾನ್ ನಟನೆಯ ಸಿನಿಮಾ. ಈ ಚಿತ್ರಕ್ಕೆ ತಮಿಳಿನ ಅಟ್ಲಿ ನಿರ್ದೇಶನ ಮಾಡುತ್ತಿದ್ದಾರೆ. ‘ಫೈಟರ್​’, ‘ಪ್ರಾಜೆಕ್ಟ್​ ಕೆ’ ಸಿನಿಮಾದಲ್ಲೂ ಅವರು ನಟಿಸುತ್ತಿದ್ದಾರೆ. ಪ್ರಭಾಸ್ ನಟನೆಯ ‘ಪ್ರಾಜೆಕ್ಟ್ ಕೆ’ 2024ರಲ್ಲಿ ರಿಲೀಸ್ ಆಗಲಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮೂತ್ರಪಿಂಡದ ಸಮಸ್ಯೆ ಎದುರಿಸುವ ಅನೇಕ ಮಂದಿ ನಮ್ಮ ನಡುವೆ ಇದ್ದಾರೆ.

Thu Feb 16 , 2023
ಬೆಂಗಳೂರು :ಮೂತ್ರಪಿಂಡವು ರಕ್ತವನ್ನು ಸ್ವಚ್ಛಗೊಳಿಸಲು ಮತ್ತು ದೇಹದಿಂದ ವಿಷವನ್ನು ತೆಗೆದುಹಾಕುವ ಕೆಲಸ ಮಾಡುತ್ತದೆ. ಆದರೆ ಅನೇಕ ಬಾರಿ ಕಿಡ್ನಿಯ ಸಮಸ್ಯೆಗಳು ತಲೆದೋರುತ್ತವೆ. ಮೂತ್ರಪಿಂಡಡ ಸಮಸ್ಯೆ ಎದುರಿಸುವ ಅನೇಕ ಮಂದಿ ನಮ್ಮ ನಡುವೆ ಇದ್ದಾರೆ. ಪ್ರತಿದಿನ ನಿಂಬೆ ಹಣ್ಣಿನ ಪಾನೀಯವನ್ನು ಮೂರು ರೀತಿಯಲ್ಲಿ ಸೇವಿಸುವುದರಿಂದ ಕಿಡ್ನಿಯನ್ನು ಸ್ವಚ್ಚಗೊಳಿಸುವುದು ಸಾಧ್ಯವಾಗುತ್ತದೆ. ಕಿಡ್ನಿ ಶುಚಿಗೊಳಿಸುವ ಈ ಪಾನೀಯವನ್ನು ಯಾವಾಗ ಮತ್ತು ಹೇಗೆ ಕುಡಿಯಬೇಕು ನೋಡೋಣ. ದೇಹದಲ್ಲಿ ಮೂತ್ರಪಿಂಡದ ಪ್ರಾಮುಖ್ಯತೆ ಏನು? ಮೂತ್ರಪಿಂಡದ ಮುಖ್ಯ ಕಾರ್ಯವೆಂದರೆ […]

Advertisement

Wordpress Social Share Plugin powered by Ultimatelysocial