ದೇಶದಲ್ಲಿ ಪ್ರತಿದಿನ ಕೊರೊನಾ ಸೋಂಕಿತರ ಸಂಖ್ಯೆ 13 ಸಾವಿರಕ್ಕೆ ಇಳಿಕೆ

ನವದೆಹಲಿ,ಫೆ.22- ದೇಶದಲ್ಲಿ ಕೊರೊನಾ ಪಾಸಿವಿಟಿ ದರ ಶೇ.0.42ಕ್ಕೆ ಇಳಿದಿದೆ. ನಿನ್ನೆ 16 ಸಾವಿರದಷ್ಟಿದ್ದ ಸೋಂಕಿನ ಪ್ರಕರಣಗಳು ಇಂದು 13 ಸಾವಿರಕ್ಕೆ ಇಳಿಕೆಯಾಗುವ ಮೂಲಕ ಸೋಂಕಿನ ಪ್ರಮಾಣ ಗಣನೀಯವಾಗಿ ಕ್ಷೀಣಿಸುತ್ತಿದೆ. ಕಳೆದ 24 ಗಂಟೆಯಲ್ಲಿ ಸೋಂಕಿನಿಂದ 235 ಮಂದಿ ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.ಒಂದೇ ದಿನದಲ್ಲಿ 34,226 ಜನ ಈ ಸೋಂಕಿನಿಂದ ಗುಣಮುಖರಾಗಿದ್ದು, ಒಟ್ಟಾರೆ 4,21,58,510 ಮಂದಿ ಪೂರ್ಣ ಚೇತರಿಕೆ ಕಂಡಿದ್ದು, ಗುಣಮುಖರಾಗುವವರ ಪ್ರಮಾಣ ಶೇ.98.33ರಷ್ಟಿದೆ.ನಿನ್ನೆ ಮೃತಪಟ್ಟ 235 ಮಂದಿ ಸೇರಿದಂತೆ ಒಟ್ಟಾರೆ ಕೊರೊನಾ ಸೋಂಕಿಗೆ 5,12,344 ಮಂದಿ ಬಲಿಯಾಗಿದ್ದಾರೆ. ದೇಶದಲ್ಲಿ ಸಕ್ರಿಯ ಸೋಂಕಿತರ ಸಂಖ್ಯೆ 1,81,075 ಮಾತ್ರ ಇದೆ. ಸೋಂಕು ನಿಯಂತ್ರಣಕ್ಕೆ ವ್ಯಾಕ್ಸಿನೇಷನ್ ನೀಡಲಾಗುತ್ತಿದ್ದು, ಈವರೆಗೆ ಸುಮಾರು 1,75,83,27,441 ಕೋಟಿ ಡೋಸ್ ವ್ಯಾಕ್ಸಿನೇಷನ್ ನೀಡಲಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕ್ಯಾಚ್​ ಬಿಟ್ಟಿದ್ದಕ್ಕೆ ಸಹ ಆಟಗಾರನ ಕೆನ್ನೆಗೆ ಬಾರಿಸಿದ ಪಾಕಿಸ್ತಾನ ವೇಗಿ ಹ್ಯಾರೀಸ್​ ರೌಫ್!​

Tue Feb 22 , 2022
ಇಸ್ಲಮಾಬಾದ್​: ಪ್ರಸ್ತುತ ನಡೆಯುತ್ತಿರುವ ಪಾಕಿಸ್ತಾನ ಸೂಪರ್​ ಲೀಗ್​ (ಪಿಎಸ್​ಎಲ್​) 2022 ಟೂರ್ನಿಯಲ್ಲಿ ಕ್ರೀಡಾಸ್ಫೂರ್ತಿಗೆ ವಿರುದ್ಧವಾದ ಘಟನೆ ನಡೆದಿದೆ. ಲಾಹೋರ್ ಖಲಂದರ್ಸ್​ ತಂಡದ ವೇಗಿ ಹ್ಯಾರೀಸ್​ ರೌಫ್​, ಸಹ ಆಟಗಾರ ಕಮ್ರಾನ್​ ಗುಲಾಮ್​​ ಕಪಾಳಕ್ಕೆ ಬಾರಿಸಿರುವುದು ಇದೀಗ ತೀವ್ರ ಚರ್ಚೆಗೆ ಕಾರಣವಾಗಿದೆ.ಸೋಮವಾರ (ಫೆ.22) ಪೇಶಾವರ್​ ಜಲ್ಮಿ ತಂಡದ ವಿರುದ್ಧ ನಡೆದ ಮಹತ್ವದ ಪಂದ್ಯದಲ್ಲಿ ಕಮ್ರಾನ್​ ಗುಲಾಮ್​ ಕ್ಯಾಚ್​ ಬಿಟ್ಟಿದ್ದಕ್ಕೆ ಕೋಪಗೊಂಡ ಹ್ಯಾರೀಸ್​ ರೌಫ್​ ಕಪಾಳಕ್ಕೆ ಬಾರಿಸಿದರು.ರೌಫ್​ ಎಸೆದ ಓವರ್​ನಲ್ಲಿ ಪೇಶಾವರ ಜಲ್ಮಿ […]

Advertisement

Wordpress Social Share Plugin powered by Ultimatelysocial