ನಟ ಧನ್ವೀರ್ ಅವರ ಮೂರನೇ ಸಿನಿಮಾ ಯಾವುದು ಎಂಬ ಪ್ರಶ್ನೆಗೆ ಫಸ್ಟ್ ಲುಕ್ ಸಮೇತ ಉತ್ತರ ದೊರೆತ್ತಿದೆ.
ಧನ್ವೀರ್ ಅವರ ಮೂರನೇ ಚಿತ್ರಕ್ಕೆ “ವಾಮನ” ಎಂದು ಹೆಸರಿಡಲಾಗಿದ್ದು, ಸಂಕ್ರಾತಿ ಹಬ್ಬದಂದು ಹೊಸ ಸಿನಿಮಾ ಅನೌನ್ಸ್ ಮಾಡಿರುವ ಧನ್ವೀರ್, ಚಿತ್ರದಲ್ಲಿ ಮಾಸ್ ಲುಕ್ ನಲ್ಲಿ ಖಡಕ್ ಆಗಿ ಕಾಣಿಸಿಕೊಂಡಿದ್ದಾರೆ.
ಬಜಾರ್ ಸಿನಿಮಾ ಮೂಲಕ ಗೆಲುವು ಕಂಡು ಭರವಸೆ ಮೂಡಿಸಿರುವ ನಟ ಧನ್ವೀರ್ ,ವಾಮನನ ಅವತಾರ ತಾಳಲು ಸಜ್ಜಾಗಿದ್ದಾರೆ. ಈಕ್ವಿನಾಕ್ಸ್ ಗ್ಲೋಬಲ್ ಎಂಟರ್ ಟೈನ್ಮೆಂಟ್ ಪ್ರೊಡಕ್ಷನ್ ಅಡಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಚೇತನ್ ಕುಮಾರ್ ಗೌಡ ಬಂಡವಾಳ ಹೂಡುತ್ತಿದ್ದಾರೆ. ನಿರ್ದೇಶಕ ಶಂಕರ್ ರಾಮನ್ ಎಸ್ ಜೊತೆಗೆ ಧನ್ವೀರ್ ಕೈಜೋಡಿಸಿದ್ದು
ಸದ್ಯ ಧನ್ವೀರ್ ಅಭಿನಯದ ಎರಡನೇ ಸಿನಿಮಾ ಬೈಟು ಲವ್ ಬಿಡುಗಡೆಗೆ ರೆಡಿಯಾಗಿದೆ. ಆದರೆ, ಕೊರೊನಾ ಸಾಂಕ್ರಾಮಿಕದ ಕಾರಣದಿಂದ ಸಿನಿಮಾ ಬಿಡುಗಡೆ ಮುಂದೂಡಿಕೆಯಾಗಿದೆ. ಹೀಗಾಗಿ ವಾಮನ ಅಡ್ಡಾ ಸೇರಲು ಧನ್ವೀರ್ ಮುಂದಾಗಿದ್ದಾರೆ.
ವಾಮನ ಚಿತ್ರವನ್ನು ನಿರ್ದೇಶಿಸುತ್ತಿರುವ ಶಂಕರ್ ಅವರು, ಕೋಟಿಗೊಬ್ಬ 2, ದಿ ವಿಲನ್, ರಿಲ್ಯಾಕ್ಸ್ ಸತ್ಯ, ಡಾ.56, ರಾಮಾರ್ಜುನ, ಮತ್ತು ಮದಗಜ ಮುಂತಾದ ಚಿತ್ರಗಳಲ್ಲಿ ಚಿತ್ರಕಥೆ ಮತ್ತು ಸಂಭಾಷಣೆ ಬರಹಗಾರರಾಗಿ ಕೆಲಸ ಮಾಡಿದ್ದಾರೆ. ಇದೀಗ ಮಾಸ್ ಎಂಟರ್ಟೈನರ್ ವಾಮನ ಚಿತ್ರದ ಮೂಲಕ ಇದೇ ಮೊದಲ ಬಾರಿಗೆ ನಿರ್ದೇಶನಕ್ಕೆ ಇಳಿಯುತ್ತಿದ್ದಾರೆ.
ಬೈ2 ಲವ್ ಚಿತ್ರದಲ್ಲಿ ಧನ್ವೀರ್ ಜೊತೆ ಕೆಲಸ ಮಾಡಿದ್ದ ಸಂಗೀತ ನಿರ್ದೇಶಕ ಅಜನೀಶ್ ಬಿ ಲೋಕನಾಥ್ ಮತ್ತು ಛಾಯಾಗ್ರಾಹಕ ಮಹೇಂದ್ರ ಸಿಂಹ ಅವರು ವಾಮನ ಚಿತ್ರದಲ್ಲೂ ಮತ್ತೆ ಒಂದಾಗುತ್ತಿದ್ದಾರೆ. ಜನವರಿ 22 ರಿಂದ ಚಿತ್ರದ ಚಿತ್ರೀಕರಣ ಆರಂಭಿಸಲಿದ್ದಾರೆ
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada