ಧಾರವಾಡ ಜಿಲ್ಲೆಯಲ್ಲಿ ಜೋರಾದ ಬಣಗಳ ಮತ್ತು ಜಾತಿ ರಾಜಕಾರಣ.

ನವಲಗುಂದ ಕ್ಷೇತ್ರದಲ್ಲಿ ಮೂಲ ಕಾಂಗ್ರೆಸ್ಸಿಗರಿಗೆ ಟಿಕೆಟ್ ನೀಡಿ.

ಕಾಂಗ್ರೆಸ್ ಹೈಕಮಾಂಡ್ ಮೇಲೆ ಒತ್ತಡ,

ಟ್ರ್ಯಾಕ್ಟರ್ ಮೂಲಕ ಆಕಾಂಕ್ಷಿಗಳ ಒಗ್ಗಟ್ಟಿನ ಪ್ರಚಾರ ನಡೆಸಿದ ಮೂಲ ಕಾಂಗ್ರೆಸಿಗರು.

ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ರಂಗು ಪಡೆಯುತ್ತಿದೆ.

ಅದರಂತೆ ನವಲಗುಂದ ವಿಧಾನಸಭಾ ಕ್ಷೇತ್ರದಲ್ಲಿ ಟಿಕೆಟ್‌ ಆಕಾಂಕ್ಷಿಗಳ ಕಸರತ್ತು ಜೋರಾಗಿದೆ.

ಈ ಮಧ್ಯೆ ನವಲಗುಂದದಲ್ಲಿ ಮೂಲ ಕಾಂಗ್ರೆಸ್ ಹಾಗೂ ಹೊರಗಿನಿಂದ ಬಂದವರು, ಈಗ ಬಂದವರು ಎಂಬ ಬಣ ರಾಜಕೀಯ ಹುಟ್ಟಿಕೊಂಡಿದೆ.

ಇತ್ತೀಚೆಗೆ ಎಪಿಎಂಸಿ ಮಾಜಿ ಸದಸ್ಯ ರಾಜಶೇಖರ್ ಮೆಣಸಿನಕಾಯಿ, ಮಾಜಿ ಸಚಿವ ಕೆ.ಎನ್. ಗಡ್ಡಿ, ಕೆಸಿಸಿ ಬ್ಯಾಂಕ್ ನಿರ್ದೇಶಕ ಬಾಪುಗೌಡ ಪಾಟೀಲ್, ಜಿಲ್ಲಾ ಪಂಚಾಯತಿ ಮಾಜಿ ಉಪಾಧ್ಯಕ್ಷ ಶಿವಾನಂದ ಕರಿಗಾರ ತಂಡ ಹಿರಿಯ ನಾಯಕರನ್ನು ಭೇಟಿ ಮಾಡಿದೆ.

ನೀವು ಮೂಲ ಕಾಂಗ್ರೆಸ್‌ನವರಾದ ನಮ್ಮಲ್ಲಿ ಯಾರಿಗಾದರೂ ಟಿಕೆಟ್ ಕೊಡಿ.

ಆದ್ರೆ ಹೊರಗಿನಿಂದ ಬಂದವರಿಗೆ ಟಿಕೆಟ್‌ ಕೊಡಬೇಡಿ ಎಂದು ನೇರವಾಗಿ ಮಾಜಿ ಶಾಸಕ ಕೋನರೆಡ್ಡಿ ಅವರಿಗೆ ಟಿಕೆಟ್ ಕೊಡಬಾರದು ಎಂದು ಒತ್ತಡ ಹೇರಿದ್ದಾರೆ.

ಕಾಂಗ್ರೆಸ್ ಕಾರ್ಯಕರ್ತರು ಕಳೆದ 30 ವರ್ಷಗಳಿಂದ ಕೋನರಡ್ಡಿ ಅವರ ವಿರುದ್ಧ ಕಾರ್ಯ ನಿರ್ವಹಿಸಿದ್ದಾರೆ.

ಈಗ ಅವರಿಗೆ ಟಿಕೆಟ್ ಕೊಟ್ಟರೆ ಹತಾಶರಾಗುತ್ತಾರೆ.

ಹೀಗಾಗಿ ಮೂಲ ಕಾಂಗ್ರೆಸ್‌ನವರಿಗೆ ಟಿಕೆಟ್‌ ನೀಡಬೇಕು ಎಂದು ಮೂಲ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳು ಹಾಗೂ ಕೆಲ ಮುಖಂಡರ ನೇತೃತ್ವದ ಮೂಲ ಕಾಂಗ್ರೆಸ್ ನಿಯೋಗ ಬೆಂಗಳೂರಿಗೆ ತೆರಳಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಸೇರಿ ಹಲವು ಮುಖಂಡರಿಗೆ ಒತ್ತಡ ಹಾಕಿದ್ದಾರೆ.

ನವಲಗುಂದ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್‌ಗಾಗಿ 8 ಜನ ಅರ್ಜಿ ಸಲ್ಲಿಸಿದ್ದೇವೆ.

ಮಾಜಿ ಶಾಸಕ ಕೋನರೆಡ್ಡಿ ಇತ್ತೀಚೆಗೆ ಸೇರಿದವರು.

ಅವರ ವಿರುದ್ಧ ನಿರಂತರವಾಗಿ ಹೋರಾಟ ಮಾಡಿಕೊಂಡು ಬಂದಿದ್ದೇವೆ.

ಅವರನ್ನು ಬಿಟ್ಟು ನಮ್ಮಲ್ಲಿ ಯಾರಿಗೆ ಟಿಕೆಟ್ ಕೊಟ್ಟರೂ ಬೆಂಬಲ ನೀಡುತ್ತೇವೆಂದು ಮುಕ್ತವಾಗಿ ಹೇಳಿದ್ದಾರಂತೆ.

ಕಳೆದ ಬಾರಿ ಕೋನರೆಡ್ಡಿ ಅವರ ವಿರುದ್ಧ ಸ್ಪರ್ಧಿಸಿ ಸೋತಿದ್ದ ವಿನೋದ ಅಸೂಟಿ ಅವರು ತಮಗೂ ಟಿಕೆಟ್ ನೀಡಬೇಕೆಂದು ಪಟ್ಟು ಹಿಡಿದಿದ್ದಾರೆ.

ಜೊತೆಗೆ ಈ ಬಣ ಮತ್ತು ಕೋನರೆಡ್ಡಿ ಅವರೊಂದಿಗೂ ಗುರುತಿಸಿಕೊಳ್ಳದೆ ಅಸೂಟಿ ತಟಸ್ಥ ಉಳಿದಿದ್ದಾರೆ.

ಮಾಜಿ ಸಚಿವ ಕೆ.ಎನ್.ಗಡ್ಡಿ ಎರಡು ಬಾರಿ ಆಯ್ಕೆಯಾಗಿ, ಸಚಿವರಾಗಿದ್ದಾರೆ.

ಮೂರು ಬಾರಿ ಸೋತಿದ್ದು, ಈಗ ಮತ್ತೊಮ್ಮೆ ಟಿಕೆಟ್ ಬಯಸಿದ್ದಾರೆ.

ಲಿಂಗಾಯತ ಸಮುದಾಯದ ಟ್ರಂಪ್‌ ಕಾರ್ಡ್ ಆಗಿರುವ
ಹಾಗೂ ಎಪಿಎಂಸಿ ಮಾಜಿ ಸದಸ್ಯರಾಗಿರುವ ರಾಜಶೇಖರ ಮೆಣಸಿನಕಾಯಿ ಕಳೆದ 30 ವರ್ಷದಿಂದ ಕಾಂಗ್ರೆಸ್‌ನ ಸಂಘಟನೆಯಲ್ಲಿ ತೊಡಗಿದ್ದು, ಟಿಕೆಟ್ ಬಯಸಿದ್ದಾರೆ.

ಕಳೆದ ಬಾರಿ ಕೂಡ ಚುನಾವಣೆಗೆ ಟಿಕೆಟ್‌ಗೆ ಅರ್ಜಿ ಸಲ್ಲಿಸಿದ್ದ ಮೆಣಸಿನಕಾಯಿ ಯುಥ್ ಕಾಂಗ್ರೆಸ್‌ಗೆ ಆದ್ಯತೆ ನೀಡಬೇಕು ಎಂಬ ಹಿನ್ನೆಲೆಯಲ್ಲಿ ಟಿಕೆಟ್ ವಂಚಿತರಾಗಿದ್ದರು.

ರಾಜಶೇಖರ ಮೆಣಸಿನಕಾಯಿ ಪಂಚಮಸಾಲಿ ಮೀಸಲಾತಿಯಲ್ಲಿಯೂ ಗುರಿತಿಸಿಕೊಂಡಿದ್ದಾರೆ.

ಸಚಿವ ಶಂಕರ್ ಪಾಟೀಲ ಮುನೇನಕೊಪ್ಪ ಕೂಡ ಪಂಚಮಸಾಲಿ ಸಮುದಾಯದವರು

ಈಗಾಗಿ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪರನ್ನ ಸೋಲಿಸಬೇಕಾದ್ರೆ ಪಂಚಮಸಾಲಿ ಸಮುಯದವರೆಗೆ ಟಿಕೆಟ್‌ ನೀಡಬೇಕೆಂಬುದು ಒಂದು ಬಣದ ಒತ್ತಡಅದೇ ಕಾರಣಕ್ಕಾಗಿ ‌ಜಾತಿ ಲೆಕ್ಕಾಚಾರದ ಮೇಲೆ ರಾಜಶೇಖರ ಮೆಣಸಿನಕಾಯಿಗೆ ಟಿಕೆಟ್‌ ನೀಡಬೇಕೆಂದು ಕಾಂಗ್ರೆಸ್ ಮುಖಂಡರು ಕೈ ಹೈಕಮಾಂಡಗೆ ಮನವಿ ಸಹ ಸಲ್ಲಿಸಿದ್ದಾರೆ ಇನ್ನು ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದವರಲ್ಲಿ ಉಳಿದವರು ಕುರುಬ ಸಮುದಾಯದವರಿದ್ದು, ಅವರು ಸಹ ಕೊಟ್ಟರೇ ಟಿಕೆಟ್ ನಮಗೆ ಕೊಡಿ ಇಲ್ಲವೇ ರಾಜಶೇಖರ ಮೆಣಸಿನಕಾಯಿ ಗೆ ಕೊಡಿ ಎಂದಿದ್ದಾರಂತೆ.ಕೆಲ ಕಾಂಗ್ರೆಸ್‌ ಮುಖಂಡರು ಕೂಡ ಪಕ್ಷದ ಹಿರಿಯ ನಾಯಕರಿಗೆ ದುಡುಕಿನ ನಿರ್ಧಾರ ತೆಗೆದುಕೊಂಡಲ್ಲಿ ನವಲಗುಂದ ಕ್ಷೇತ್ರದ ಯಾವೊಬ್ಬ ನಾಯಕರು ಕೋನರಡ್ಡಿ ಪರ ನಿಲ್ಲುವುದಿಲ್ಲ ಎಂಬ ಮಾತುಗಳನ್ನಾಡಿದ್ದಾರಂತೆ.ಈ ಹಿನ್ನೆಲೆಯಲ್ಲಿ ಗೊಂದಲದ ಗೂಡಾಗಿರುವ ನವಲಗುಂದ ಕ್ಷೇತ್ರದಲ್ಲಿ ಮೂಲ ಕಾಂಗ್ರೆಸ್ಸಿಗರು ಮತ್ತು ವಲಸಿಗರು ಎಂಬ ಗುಂಪುಗಳಾಗಿದ್ದು ಯಾರ ಕೈ ಮೇಲಾಗುವದೆಂದು ಕಾದು ನೋಡಬೇಕಿದೆ.ಹೆಚ್ಚಿನ ಜನಸಂಖ್ಯೆಯನ್ನು ಹೊಂದಿರುವ ಕುರುಬ ಅಥವಾ ಲಿಂಗಾಯತ ಸಮುದಾಯದ ಮೂಲ ಕಾಂಗ್ರೆಸ್‌ನವರಿಗೆ ಅವಕಾಶ ಕಲ್ಪಿಸಿಕೊಡಬೇಕು ಎಂಬುದು ಕಾರ್ಯಕರ್ತರ ಹಾಗೂ ಮೂಲ ಕಾಂಗ್ರೆಸ್‌ನವರ ಒತ್ತಾಯವಾಗಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಆಸ್ತಿ ವಿಚಾರಕ್ಕೆ ಮಾವನನ್ನೇ ಭೀಕರ ಕೊಲೆ ಮಾಡಿದ ಅಳಿಯಂದಿರು.

Fri Jan 20 , 2023
ಆಸ್ತಿ ವಿಚಾರಕ್ಕೇ ಅಳಿಯ ಹಾಗೂ ಮಾವನ ನಡುವೆ ಜಗಳ ಆರಂಭವಾಗಿ ಮವನನ್ನೇ ಅಳಿಯ ಭೀಕರವಾಗಿ ಕೊಲೆ ಮಾಡಿದ ಘಟನೆ ಹುಬ್ಬಳ್ಳಿ ತಾಲ್ಲೂಕಿನ ಸುಳ್ಳ ಗ್ರಾಮದಲ್ಲಿ ಈಗಷ್ಟೇ ನಡೆದಿದೆ. ಸುಳ್ಳ ಗ್ರಾಮದ 56 ವರ್ಷದ ಶಿವಪ್ಪ ಅಡಿವೆಪ್ಪ ಮಳ್ಳೊಳ್ಳಿ ಎಂಬಾತನೇ ಕೊಲೆಯಾದ ವ್ಯಕ್ತಿಯಾಗಿದ್ದಾನೆ,ಕಳೆದ ಕೆಲವು ವರ್ಷಗಳಿಂದ ಸುಳ್ಳ ಗ್ರಾಮದಲ್ಲಿನ ಆಸ್ತಿಯ ವಿಚಾರಕ್ಕೇ ಅಳಿಯಂದಿರಾದ ಗುರಪ್ಪ,ಷಣ್ಮುಕಪ್ಪಾ,ಗಂಗಪ್ಪಾ, ಹಾಗೂ ಸಿದ್ರಾಮಪ್ಪರ ನಡುವೆ ಜಗಳ ನಡೆಯುತ್ತಲೇ ಇತ್ತು. ಆದ್ರೆ ಇದೆ ಜಗಳ ಅತಿರೇಕಕ್ಕೆ ಹೋಗುತ್ತಿದ್ದ ಹಾಗೆ […]

Advertisement

Wordpress Social Share Plugin powered by Ultimatelysocial