ಆಸ್ತಿ ವಿಚಾರಕ್ಕೆ ಮಾವನನ್ನೇ ಭೀಕರ ಕೊಲೆ ಮಾಡಿದ ಅಳಿಯಂದಿರು.

ಆಸ್ತಿ ವಿಚಾರಕ್ಕೇ ಅಳಿಯ ಹಾಗೂ ಮಾವನ ನಡುವೆ ಜಗಳ ಆರಂಭವಾಗಿ ಮವನನ್ನೇ ಅಳಿಯ ಭೀಕರವಾಗಿ ಕೊಲೆ ಮಾಡಿದ ಘಟನೆ ಹುಬ್ಬಳ್ಳಿ ತಾಲ್ಲೂಕಿನ ಸುಳ್ಳ ಗ್ರಾಮದಲ್ಲಿ ಈಗಷ್ಟೇ ನಡೆದಿದೆ.

ಸುಳ್ಳ ಗ್ರಾಮದ 56 ವರ್ಷದ ಶಿವಪ್ಪ ಅಡಿವೆಪ್ಪ ಮಳ್ಳೊಳ್ಳಿ ಎಂಬಾತನೇ ಕೊಲೆಯಾದ ವ್ಯಕ್ತಿಯಾಗಿದ್ದಾನೆ,ಕಳೆದ ಕೆಲವು ವರ್ಷಗಳಿಂದ ಸುಳ್ಳ ಗ್ರಾಮದಲ್ಲಿನ ಆಸ್ತಿಯ ವಿಚಾರಕ್ಕೇ ಅಳಿಯಂದಿರಾದ ಗುರಪ್ಪ,ಷಣ್ಮುಕಪ್ಪಾ,ಗಂಗಪ್ಪಾ, ಹಾಗೂ ಸಿದ್ರಾಮಪ್ಪರ ನಡುವೆ ಜಗಳ ನಡೆಯುತ್ತಲೇ ಇತ್ತು.

ಆದ್ರೆ ಇದೆ ಜಗಳ ಅತಿರೇಕಕ್ಕೆ ಹೋಗುತ್ತಿದ್ದ ಹಾಗೆ ಇಂದು ಗ್ರಾಮದಲ್ಲಿನ ಕಲ್ಮೇಶ್ವರ ದೇವಸ್ಥಾನದ ಮುಂದೆ ಶಿವಪ್ಪ ನ ಅಳಿಯಂದಿರು ಜಗಳ ತೆಗೆದಿದ್ದಾರೆ,ಇನ್ನು ಜಗಳ ಅತಿರೇಕಕ್ಕೆ ಹೋಗುತ್ತಿದ್ದ ಹಾಗೆ ಅಳಿಯಂದಿರು ತಾವು ತಂದಿದ್ದ ಮಾರಕಾಸ್ತ್ರಗಳಿಂದ ಶಿವಪ್ಪನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಪರಿಣಾಮ ಶಿವಪ್ಪ ಸ್ಥಳದಲ್ಲೇ ಮೃತಪಟ್ಟುದ್ದಾನೆ.

ಇತ್ತ ಶಿವಪ್ಪ ಸಾಯುತ್ತಿದ್ದ ಹಾಗೆ ಅಳಿಯಂದಿರು ಅಲ್ಲಿಂದ ಪರಾರಿಯಾಗಿದ್ದಾರೆ,ಸದ್ಯ ಕೊಲೆ ಮಾಹಿತಿ ತಿಳಿಯುತ್ತಿದ್ದ ಹಾಗೆ ಸ್ಥಳಕ್ಕೆ ಹುಬ್ಬಳ್ಳಿಯ ಗ್ರಾಮೀಣ ಠಾಣೆಯ ಪೊಲೀಸರು ಭೇಟಿಯನ್ನು ನೀಡಿದ್ದು ಪರಿಶೀಲನೆ ನಡೆಸಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಯೋಗರಾಜ್‌ ಭಟ್‌ರ 'ಗರಡಿ' ಮುಕ್ತಾಯ.

Fri Jan 20 , 2023
  ಯೋಗರಾಜ್‌ ಭಟ್ ಹಾಗೂ ರವಿ ಶಾಮನೂರ್‌ ಜಂಟಿಯಾಗಿ ನಿರ್ಮಿಸಿದ್ದ ‘ಪದವಿ ಪೂರ್ವ’. ಈ ಸಿನಿಮಾ ಬಿಡುಗಡೆಗೂ ಮುನ್ನ ಸ್ಯಾಟಲೈಟ್ ಹಾಗೂ ಓಟಿಟಿ ಖರೀದಿ ವಿಚಾರವಾಗಿ ವಿವಾದಕ್ಕೆ ಸಿಲುಕಿತ್ತು. ಇದೇ ವಿಚಾರ ಯೋಗರಾಜ್ ಭಟ್ ಹಾಗೂ ಜೀ ಕನ್ನಡದ ಬ್ಯುಸಿನೆಸ್ ಹೆಡ್‌ ರಾಘವೇಂದ್ರ ಹುಣಸೂರು ನಡುವೆ ವೈಮಸ್ಸಿಗೂ ಕಾರಣವಾಗಿತ್ತು. ಈ ಸಂಬಂಧ ಯೋಗರಾಜ್ ಭಟ್ ಆಡಿಯೋ ಲೀಕ್ ಆಗಿ ವೈರಲ್ ಆಗಿತ್ತು. ಈ ಆಡಿಯೋದಲ್ಲಿ ‘ಪದವಿ ಪೂರ್ವ’ ಸಿನಿಮಾದ ಸ್ಯಾಟಲೈಟ್ […]

Advertisement

Wordpress Social Share Plugin powered by Ultimatelysocial