ಡಿಕೆ ಶಿವಕುಮಾರ್ ಮತ್ತು ‘ಸಿದ್ದರಾಮಯ್ಯ ನಡುವೆ ಜಗಳವಿರಬಹುದು ̤

ಚಿತ್ರದುರ್ಗಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನಡುವೆ ಜಗಳ ಇರಬಹುದು, ಆದರೆ ಅದರಿಂದ ಪಕ್ಷಕ್ಕೆ ಯಾವುದೇ ನಷ್ಟವಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.ಚಿತ್ರದುರ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಡಿಕೆಶಿ, ಸಿದ್ದರಾಮಯ್ಯ ನಡುವೆ ಜಗಳ ಇರಬಹುದು, ಅದನ್ನು ನಾನು ಇಲ್ಲ ಎಂದು ಹೇಳುವುದಿಲ್ಲ. ಜಗಳ ಇದ್ದರೂ ಕೂಡ ನಮ್ಮ ಕಾರ್ಯಕರ್ತರು ನಮ್ಮ ಪಕ್ಷದ ಚಿಹ್ನೆಗೆ ಮತ ಹಾಕುವುದು. ಇದರಿಂದ ಪಕ್ಷಕ್ಕೆ ಯಾವುದೇ ನಷ್ಟ ಇಲ್ಲ ಎಂದು ಹೇಳಿದರು.ಕಾಂಗ್ರೆಸ್‌ ಪಕ್ಷ ಮಾತ್ರವಲ್ಲ ಎಲ್ಲಾ ಪಕ್ಷಗಳಲ್ಲೂ ಗುಂಪುಗಳಿವೆ. ಒಳ ಜಗಳಗಳಿವೆ. ಬಿಜೆಪಿಯಲ್ಲಿ ಬಿ.ಎಸ್‍ವೈ, ಆರ್.ಎಸ್.ಎಸ್ ಗುಂಪುಗಳಿವೆ. ಜೆಡಿಎಸ್ ಪಕ್ಷದಲ್ಲೂ ಗುಂಪುಗಾರಿಕೆ ಇದೆ ಹೀಗಾಗಿ ಬಣಗಳ ಸಮಸ್ಯೆ ಇದ್ದರೆ ಹೈಕಮಾಂಡ್ ಬಗೆಹರಿಸಲಿದೆ. ನಮ್ಮಲ್ಲಿ ಗುಂಪುಗಾರಿಕೆಯಿಲ್ಲ, ಇಬ್ಬರ ಅಧೀನದಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಅಡುಗೆಮನೆಯಲ್ಲಿ ಈ ವಸ್ತುಗಳು ಖಾಲಿ ಆಗಬಾರದು..!

Thu Feb 3 , 2022
ನಮಸ್ಕಾರ ಸ್ನೇಹಿತರೆ ಅಡುಗೆಮನೆಯಲ್ಲಿ ಇರುವಂತಹ ವಸ್ತುಗಳು ನಾವು ಪ್ರತಿದಿನ ಬಳಸುವಂತಹ ಕೆಲವೊಂದು ವಸ್ತುಗಳು ಲಕ್ಷ್ಮೀದೇವಿಯ ಪ್ರಧಾನವಾದ ವಸ್ತುಗಳಾಗಿರುತ್ತವೆ, ಇಂತಹ ಲಕ್ಷ್ಮೀದೇವಿಯ ಪ್ರಧಾನ ವಸ್ತುಗಳು ಮನೆಯಲ್ಲಿ ಯಾವಾಗಲೂ ಇರುವುದರಿಂದ ಮನೆಯೂ ಸಮೃದ್ಧಿ ಗೊಳ್ಳುತ್ತದೆ ಆಹಾರದ ಕೊರತೆ ಬರುವುದಿಲ್ಲ ಎಂದು ಹೇಳಲಾಗುತ್ತದೆ.ಒಂದು ವೇಳೆ ಅಡುಗೆಮನೆಯಲ್ಲಿ ಸಂಪೂರ್ಣವಾಗಿ ಇಂತಹ ವಸ್ತುಗಳು ಖಾಲಿಯಾದರೆ ದಾರಿದ್ರ್ಯ ಬರುತ್ತದೆ, ಇದು ಬಡತನಕ್ಕೆ ಕಾರಣವಾಗುತ್ತದೆ. ಇದರಿಂದ ಆಹಾರದ ಕೊರತೆ ಉಂಟಾಗುತ್ತದೆ ಎಂದು ಹೇಳಲಾಗುತ್ತದೆ, ಹಾಗಾದರೆ ಅಡುಗೆಮನೆಯಲ್ಲಿ ಯಾವ ವಸ್ತುಗಳು ಖಾಲಿಯಾಗದಂತೆ […]

Advertisement

Wordpress Social Share Plugin powered by Ultimatelysocial