ಚಾಮರಾಜನಗರದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಹೊರಗುತ್ತಿಗೆ ಕಾರ್ಮಿಕರ ಸಮಸ್ಯೆಗಳನ್ನು ಬಗೆಹರಿಸುವಂತೆ ಆಗ್ರಹಿಸಿ ಯುಟಿಯುಸಿ ಮತ್ತು ಸಿಮ್ಸ್ ಕಾರ್ಮಿಕರ ಸಂಘದಿಂದ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿರುವುದು….
ವೈದ್ಯಕೀಯ ಸಂಸ್ಥೆಯ ಅಧಿಕಾರಿ ಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಪಡಿಸಿದರು….
ಎರಡು ವರ್ಷ ಕೆಲಸ ಮಾಡಿಸಿಕೊಂಡು ಮತ್ತೆ ಕೆಲಸದಲ್ಲಿ ಮುಂದುವರೆಯಲು ಹದಿನೈದು ಸಾವಿರ ಲಂಚ ಕೇಳುತ್ತಿದ್ದಾರೆ,
ವಿಜ್ಞೇಶ್ವರ ಸೆಕ್ಯುರಿಟಿ ಏಜೆನ್ಸಿ ಇಂದ ಹಣ ಬೇಡಿಕೆ ಇಟ್ಟಿರುವುದು,ಕಾರ್ಮಿಕರು ಮತ್ತೆ ಕೆಲಸದಲ್ಲಿ ಮುಂದುವರಿಯಲು 15000 ಹಣ ಬೇಡಿಕೆಯನ್ನು ಇಟ್ಟಿರುವುದಾಗಿ ಹೇಳುತ್ತಿರುವುದು..
ನಗರದ ಹೊರವಲಯದಲ್ಲಿರುವ ಮೆಡಿಕಲ್ ಕಾಲೇಜು ಮುಖ್ಯದ್ವಾರದ ಬಳಿ ಕಾರ್ಮಿಕರು ಪ್ರತಿಭಟನೆ ನಡೆಸುತ್ತಿದ್ದು..
ಕಳೆದ ನಾಲ್ಕು ವರ್ಷಗಳಿಂದ ಕೆಲಸ ಮಾಡಿರುವ ಎಲ್ಲಾ ಹೊರ ಗುತ್ತಿಗೆ ಕಾರ್ಮಿಕರಿಗೂ ನೇಮಕಾತಿ ಪತ್ರಗಳನ್ನು ನೀಡುವಂತೆ ಗುತ್ತಿಗೆದಾರನಿಗೆ ತಿಳಿಸಬೇಕು, ಕಾರ್ಮಿಕರಿಂದ ಹಣ ವಸೂಲಿ
ಮಾಡುತ್ತಿರುವವರನ್ನು ತಡೆಯಬೇಕು ಅಲ್ಲಿಯವರೆಗೂ ನಮ್ಮ ಪ್ರತಿಭಟನೆ ನಡೆಯುತ್ತದೆ ಎಂದು ಒತ್ತಾಯಿಸಿದರು…
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: