ಲಕ್ಷ್ಮೇಶ್ವರ: ಕ್ಯಾಲೆಂಡರ್ ಪ್ರತಿಯೊಬ್ಬನ ಅಗತ್ಯದ ಸಾಧನಗಳಲ್ಲೊಂದು, ಲಕ್ಷ್ಮೇಶ್ವರ ತಾಲೂಕಿನ ಖ್ಯಾತ ವೈದ್ಯರಾದ ಡಾ|| ಚಂದ್ರು ಲಮಾಣಿ ಅಭಿಮಾನಿ ಬಳಗ ಹೊರತಂದಿರುವ 2023ನೇ ಸಾಲಿನ ಕ್ಯಾಲೆಂಡರ್ ಜನತೆಗೆ ಅಗತ್ಯವಾದ ಎಲ್ಲಾ ಶೈಕ್ಷಣಿಕ ವಿವರಗಳನ್ನು ಒಳಗೊಂಡಿದ್ದು ಸಂಗ್ರಹ ಯೋಗ್ಯ ದಿನದರ್ಶಿಯಾಗಿದೆ ಎಂದು ಮಾಜಿ ಶಾಸಕ ಗಂಗಣ್ಣ ಮಹಾಂತಶೇಟ್ಟರ್ ಹೇಳಿದರು.ತಾಲೂಕಿನ ಮುಕ್ತಿಮಂದಿರ ಧರ್ಮ ಕ್ಷೇತ್ರದಲ್ಲಿ ಡಾ|| ಚಂದ್ರು ಲಮಾಣಿ ಅಭಿಮಾನಿ ಬಳಗದ ವತಿಯಿಂದ 2023 ನೇ ಸಾಲಿನ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಿಹಿಸಿ ಮಾತನಾಡಿದರು.ಡಾ|| ಚಂದ್ರು ಲಮಾಣಿ ಅವರು ಹಲವಾರು ರೀತಿ ಜನ ಸೇವೆ ಮಾಡಿದ್ದಾರೆ, ಕೋರೋನಾ ಸಂದರ್ಭದಲ್ಲಿ, ವಿದ್ಯಾರ್ಥಿಗಳಿಗೆ ಉಚಿತ ಬೇಸಿಗೆ ಸಿಬಿರ್, ವೃದ್ದರಿಗೆ ಸಹಾಯ, ಅನಾಥರಿಗೆ ಸಹಾಯ ಹಾಗೂ ಕ್ಷೇತ್ರದ ಮನೆಮನೆಗೆ ಸಸಿ ವಿತರಣೆ ಒಳಗೊಂಡ ಅನೇಕ ರೀತಿ ಜನ ಸ್ಪಂದನೆಯ ಕಾರ್ಯಗಳು ಮಾಡಿದ್ದು, ಈ ಒಂದು ವಿಶೇಷ ಕ್ಯಾಲೆಂಡರ್ ನಲ್ಲಿ ಇರುವುದು, ಎಲ್ಲರಿಗೂ ಮಾದರಿ, ಮತ್ತು ಎಲ್ಲಾ ಇಲಾಖೆಯ ಎಲ್ಲಾ ಮಾಹಿತಿಗಳನ್ನು ಒಳಗೊಂಡ ಕ್ಯಾಲೆಂಡರ್ ಬಿಡುಗಡೆಗೊಳಿಸಿದ ಚಂದ್ರು ಲಮಾಣಿ ಅಭಿಮಾನಿ ಬಳಗ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿದ್ದು, ಇಂತಹ ಕಾರ್ಯನಿರ್ವಹಿಸಿದ ಸಂಘದ ಕಾರ್ಯ ಅಭಿನಂದನಾರ್ಹ ಎಂದು ಹೇಳಿದರು.ನಂತರ ಆರ್ಶಿರವಚನ ನೀಡಿದ ಮುಕ್ತಿಮಂದಿರ ಶ್ರೀಗಳಾದ ವೀಮಲ ರೇಣುಕಾಚಾರ್ಯ ಮಹಾಸ್ವಾಮಿಗಳು, ಡಾ|| ಚಂದ್ರು ಲಮಾಣಿ ಅಭಿಮಾನಿ ಬಳಗದ ೨೦೨೩ನೇ ಸಾಲಿನ ಆಕರ್ಷಕ ಮುದ್ರಣದ ವಿನೂತನ ವಿನ್ಯಾಸದ ಕ್ಯಾಲೆಂಡರ್ ಬಿಡುಗಡೆಗೊಳಿಸಿದ್ದು ಖುಷಿ ತಂದಿದೆ, ಚಂದ್ರು ಲಮಾಣಿ ಅವರ ಸಮಾಜ ಸೇವೆ, ಜನಪರ ಕಾಲಜಿಯನ್ನು ಕ್ಯಾಲೆಂಡರ್ ನಲ್ಲಿ ಸೇರಿಸಿದ್ದಿರಿ, ಅದು ಯುವಕರಿಗೆ ಮಾದರಿಯಾಗಲಿ, ಚಂದ್ರು ಲಮಾಣಿ ಅವರು ಒಬ್ಬ ಸಾಮಜ ಸೇವಕ ಅಲ್ಲದೇ, ಕೋರೋನ ಮಾಹಾಮಾರಿ ಹಬ್ಬಿದ್ದಾಗ , ಬಡವರಿಗೆ ಅವರು ಮಾಡಿದ ಸಹಾಯಗಳು, ರೋಗಿಗಳಿಗೆ ನೋಡಿಕೊಂಡ ಅವರ ಕಾಳಜಿಗೆ ನಾವೇಲ್ಲರೂ ಶ್ಲಾಘನೀಯ ವ್ಯಕ್ತಪಡಿಸಬೇಕು ಎಂದರಲ್ಲದೇಕ್ಯಾಲೆಂಡರಿನ ವಿಶೇಷತೆಗಳನ್ನು ಪ್ರಶಂಸಿಸಿ ಎಲ್ಲರಿಗೂ ಈ ಕ್ಯಾಲೆಂಡರ್ ಕೈಗನ್ನಡಿ ಇವರ ಸಾಮಾಜಿಕ ಕಾರ್ಯಗಳು ಹೀಗೆ ಸಾಗಲಿ ಮುಂದಿನ ದಿನಗಳಲ್ಲಿ ದೊಡ್ಡವ್ಯಕ್ತಿಯಾಗಿ ಬೆಳೆಯಲಿ ಎಂದು ಆರ್ಶಿರವಚಿಸಿದರು.ಮುಕ್ತಿಮಂದಿರ ಶ್ರೀಗಳಾದ ವೀಮಲ ರೇಣುಕಾಚಾರ್ಯ ಮಹಾಸ್ವಾಮಿಗಳು, ಮಾಜಿ ಶಾಸಕ ಗಂಗಣ್ಣ ಮಹಾಂತಶೇಟ್ಟರ್, ಡಿ.ಬಿ.ಬಳಿಗಾರ, ಸೋಮನಗೌಡ ಪಾಟೀಲ್, ಶರಣು ಕೋರಿಶೇಟ್ಟರ್, ಎಮ್.ಆರ್.ಪಾಟೀಲ್, ಬಿ.ಡಿ.ಪಲ್ಲೇದ, ಅನೀಲ ಮುಳಗುಂದ,ಗುರು ಮೇಡ್ಲೇರಿ,ಶಿವಣಪ್ಪ, ನಾಗರಾಜ ಬಟಕುರ್ಕಿ, ಶಕ್ತಿ ಕತ್ತಿ, ಶಂಕರ ಲಮಾಣಿ, ನೀಲಪ್ಪ ಶೇರಶೂರಿ,ಡಾ.ಚಂದ್ರು ಲಮಾಣಿ, ಬಸನಗೌಡ ಪಾಟೀಲ್, ಮಂಜುನಾಥ ಗೋರವರ್, ಹಾಗೂ ಡಾ|| ಚಂದ್ರು ಲಮಾಣಿ ಅಭಿಮಾನಿ ಬಳಗದ ಅಧ್ಯಕ್ಷರು, ಸರ್ವ ಸದಸ್ಯರು ಇದ್ದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/de…