ಉದ್ಧವ್​ ಠಾಕ್ರೆ ವಿರುದ್ಧ ಮಾಜಿ ಸಚಿವ ಕೆ.ಎಸ್​.ಈಶ್ವರಪ್ಪ ಲೇವಡಿ

ಕಲಬುರಗಿ: ನೀವು ನೆಟ್ಟಗೆ ಇಟ್ಟುಕೊಂಡು ಕಂಟ್ರೋಲ್​ ಮಾಡದೆ ಹೋದ್ರೆ ನಿನ್​ ಹೆಂಡ್ತೀನೂ ಓಡಿ ಹೋಗ್ತಾಳೆ ಎಂದು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್​ ಠಾಕ್ರೆ ವಿರುದ್ಧ ಮಾಜಿ ಸಚಿವ ಕೆ.ಎಸ್​.ಈಶ್ವರಪ್ಪ ಲೇವಡಿ ಮಾಡಿದ್ದಾರೆ. ಠಾಕ್ರೆ ವಿರುದ್ಧ ಕೆಂಡಕಾರುವ ಭರದಲ್ಲಿ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರಪ್ಪ, ಯಾವ ಪಕ್ಷದಲ್ಲಿ ಶಿಸ್ತು, ನಾಯಕತ್ವ ಇರುವುದಿಲ್ಲವೋ ಆ ಪಕ್ಷ ಪ್ರಜಾಪ್ರಭುತ್ವದಲ್ಲಿ ಉಳಿಯುವುದಿಲ್ಲ ಎಂದು ಮಹಾರಾಷ್ಟ್ರದಲ್ಲಿನ ರಾಜಕೀಯ ವಿದ್ಯಮಾನಗಳ ಕುರಿತು ವಿಶ್ಲೇಷಿಸಿದರು. ಸಿಎಂ ಸ್ಥಾನಕ್ಕಾಗಿ ಬಾಳಾಸಾಹೇಬ್​ ಠಾಕ್ರೆ ಮಗ ಉದ್ಧವ್​ ಹಿಂದುತ್ವವನ್ನೇ ಮಾರಾಟ ಮಾಡಿದರು. ಈಗ ನೋಡಿದರೆ ಶಿವಸೇನೆ ಶಾಸಕರನ್ನು ಹೈಜಾಕ್​ ಮಾಡಲಾಗಿದೆ ಎಂದು ಹೇಳುತ್ತಿದ್ದಾರೆ. ಕೇವಲ ಶಾಸಕರಷ್ಟೇ ಅಲ್ಲ, ನಿನ್ನ ಹೆಂಡತಿಯನ್ನೂ ಕಂಟ್ರೋಲ್​ ಮಾಡೋಕೆ ಆಗದಿದ್ದರೆ ಓಡಿಹೋಗ್ತಾಳೆ ಎಂದು ಠಾಕ್ರೆಗೆ ಲೇವಡಿ ಮಾಡಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://plಇay.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಎನ್ ಪಿ ಎ ಲಿಸ್ಟ್ ನಲ್ಲಿರುವ ಬ್ಯಾಂಕ್ ಖಾತೆಗಳನ್ನು ಟಾರ್ಗೆಟ್ ಮಾಡಿ ವಂಚನೆ !

Wed Jul 6 , 2022
  ಬೆಂಗಳೂರು: ಎನ್ ಪಿ ಎ ಲಿಸ್ಟ್ ನಲ್ಲಿರುವ ಬ್ಯಾಂಕ್ ಖಾತೆಗಳನ್ನು ಟಾರ್ಗೆಟ್ ಮಾಡಿ ವಂಚನೆ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಕೇರಳ ಮೂಲದ ರಾಘವ್ ಲಾಲ್ ಹಾಗೂ ಪಿಳ್ಳೆ ಬಂಧಿತ ಆರೋಪಿಗಳು. ತಮ್ಮದೇ ಬ್ಯಾಂಕ್ ನ ಕೆಲ ವ್ಯಕ್ತಿಗಳ ಜತೆ ಸಂಪರ್ಕ ಹೊಂದಿದ್ದ ಆರೋಪಿಗಳು ಎನ್ ಪಿ ಲಿಸ್ಟ್ ನಲ್ಲಿರುವ ಅಕೌಂಟ್ ಗಳನ್ನು ಪತ್ತೆ ಮಾಡಿ, 5 ಕೋಟಿ ರೂಪಾಯಿಗೂ ಹೆಚ್ಚು ಲೋನ್ ಪಡೆದ ಖಾತೆಗಳನ್ನು ಟಾರ್ಗೆಟ್ ಮಾಡುತ್ತಿದ್ದರು. […]

Advertisement

Wordpress Social Share Plugin powered by Ultimatelysocial