ಚಾಮರಾಜನಗರ ತಾಲ್ಲೂಕಿನ ಸಂತೇಮರಹಳ್ಳಿಸುತ್ತಲಿನ ಗ್ರಾಮಗಳಿಗೆ ಸಮರ್ಪಕವಾಗಿ ವಿದ್ಯುತ್ ಪೂರೈಸಬೇಕೆಂದು ಆಗ್ರಹಿಸಿ ರೈತ ಸಂಘದ ಮುಖಂಡರುಸಂತೇಮರಹಳ್ಳಿ ಸೆಸ್ಕ್ ಕಚೇರಿ ಎದುರು ಧರಣಿ ನಡೆಸಿದರುಸಂತೇಮರಹಳ್ಳಿಯ ಪ್ರವಾಸಿಮಂದಿರದಿಂದ ರೈತ ಮುಖಂಡರು ಅಧಿಕಾರಿಗಳ ವಿರುದ್ಧಘೋಷಣೆಗಳನ್ನು ಕೂಗಿದರು.ಮೆರವಣಿಗೆಯಲ್ಲಿ ಸೆಸ್ಟ್ ಕಚೇರಿಗೆ ತೆರಳಿದರುನಂತರ ರೈತ ಸಂಘದ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್ ರವರು ಮಾತನಾಡಿ ಸೆಸ್ಕ್ ನವರು ಇತ್ತೀಚೆಗೆ ಬೆಳಗಿನ ಸಮಯ 4 ಗಂಟೆತ್ರಿಪಿಜ್ ವಿದ್ಯುತ್ ನೀಡಿದರೂ ಪದೇ ಪದೇ ಸ್ಥಗಿತ ಮಾಡುತ್ತಿದ್ದಾರೆ.ರಾತ್ರಿ ವೇಳೆ 3 ಗಂಟೆ ತ್ರಿಫೇಸ್ನೀಡುತ್ತಿದ್ದು ಯಾವಾಗ ವಿದ್ಯುತ್ ಬರುತ್ತದೆ ಎಂಬುದೇ
ಗೊತ್ತಾಗುತ್ತಿಲ್ಲ ಎಂದು ದೂರಿದರು ಸಂತೇಮರಳ್ಳಿಯ ವಿವಿಧ ಗ್ರಾಮಗಳ ವ್ಯಾಪ್ತಿಯಲ್ಲಿ ಚಿರತೆ ಕಾಟವಿದ್ದು ರಾತ್ರಿ ವೇಳೆ ರೈತರು ಪಂಪ್ ಸೆಟ್ ಜಮೀನುಗಳಿಗೆ ತೆರಳಲು ಭಯ ಪಡುತ್ತಿದ್ದಾರೆ ಸರಿಯಾಗಿ ವಿದ್ಯುತ್ ನೀಡದೆ ಫಸಲಿಗೆ ನೀರು ಹಾಯಿಸಲು ಸಮಸ್ಯೆಯಾಗುತ್ತಿದೆ. ವಿದ್ಯುತ್ ನೀಡಿದರೆ ಪದೇ ಪದೇ ಕಡಿತ ಮಾಡುವುದು ಸರಿಯಲ್ಲ. ರೈತರ ಹಿತದೃಷ್ಟಿಯಿಂದ ಬೆಳಗಿನ ಸಮಯವೇ 7 ಗಂಟೆ ತ್ರಿಫೇಸ್ ವಿದ್ಯುತ್ ನೀಡಬೇಕು ಸಂಬಂಧಪಟ್ಟವರು ಸ್ಥಳಕ್ಕೆ ಆಗಮಿಸಿ ಖಚಿತ ಭರವಸೆ ನೀಡಬೇಕು. ಇಲ್ಲದಿದ್ದರೆ ಹೋರಾಟ ಮುಂದುವರಿಸಲಾಗುವುದು ಎಂದು ಎಚ್ಚರಿಸಿದರು.
https://play.google.com/store/apps/details?id=com.speed.newskannada