ಜಿಲ್ಲೆಯ ಯಳಂದೂರು ತಾಲ್ಲೂಕಿನ ಗುಂಬಳ್ಳಿ ಗ್ರಾಮದ ಅರುಣಾ ಮಾರಮ್ಮ ದೇವಸ್ಥಾನ ಆವರಣದಲ್ಲಿ ಜಾನಪದ ಜಾತ್ರೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತುಪ್ರತಿಧ್ವನಿ ಸಾಂಸ್ಕೃತಿಕ ಕಲಾ ವೇದಿಕೆ ಯಳಂದೂರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಜಾನಪದ ಜಾತ್ರೆ ಸುಗ್ಗಿ ಸಂಕ್ರಾಂತಿಯ ಸಾಂಸ್ಕೃತಿಕ ಕಾರ್ಯಕ್ರಮವನ್ನು ಶಾಸಕ ಎನ್.ಮಹೇಶ್ ರವರ ಅಧ್ಯಕ್ಷತೆಯಲ್ಲಿ ಜಾನಪದ ವಿದ್ವಾಂಸಕರಾದ ಜನಾರ್ದನ್ ಜನ್ನಿರವರು ಉದ್ಘಾಟನೆ ಮಾಡಿದರು ನಂತರ ಶಾಸಕ ಎನ್. ಮಹೇಶ್ ರವರು ಜಾನಪದ ಸೊಗಡಿನ ಬಗ್ಗೆ ಮಾತನಾಡಿದರು ಕಾರ್ಯಕ್ರಮದಲ್ಲಿ ಕಲಾವಿದರು ಭಾಗವಹಿಸಿ ಜಾನಪದ ಹಾಡುಗಳನ್ನು ಹಾಡಿದರು.ನಂತರ ಕಲಾವಿದರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರು ಗುರುಲಿಂಗಯ್ಯ ಪ್ರಮಾಣ ಪತ್ರ ವಿತರಿಸಿದರು ಮಾಜಿ ಶಾಸಕ ಎಸ್. ಬಾಲರಾಜುರವರು ಮಾತನಾಡಿ ಸರ್ಕಾರದಿಂದ ಕಲಾವಿದರಿಗೆ ಸಿಗುವ ಸೌಲಭ್ಯ ಸಮರ್ಪಕವಾಗಿ ಸಿಗಬೇಕು ಎಂದರು.
https://play.google.com/store/apps/details?id=com.speed.newskannada