ಕಾಡು ಜೇನು ಸಿಕ್ಕಿದರೆ ಬಿಡಬೇಡಿ!

ಸಾಮಾನ್ಯವಾಗಿ ಸಿಗುವ ಜೇನಿಗಿಂತ ಕಾಡುಜೇನು ಬಹಳಷ್ಟುವ ಆರೋಗ್ಯಕರ. ಕಾಡು ಜೇನು ನೊಣಗಳಿಗೆ ಕಾಡಿನಲ್ಲಿ ಹಲವಾರು ಔಷಧೀಯ ಗಿಡಗಳ ಹೂವಿನ ರಸ ಸಿಗುತ್ತದೆ, ಅವುಗಳನ್ನು ಸಂಗ್ರಹಿಸಿ ಜೇನು ತಯಾರಿಸುತ್ತದೆ, ಹೀಗಾಗಿ ಕಾಡಿನ ಜೇನಿನಲ್ಲಿ ಪೋಷಕಾಂಶಗಳು ಅಧಿಕವಾಗಿರುತ್ತದೆ.ಕಾಡುಜೇನಿನಲ್ಲಿ ಸಾಮಾನ್ಯವಾಗಿ 22 ಅಮೈನೋ ಆಮ್ಲ, 31 ಭಿನ್ನ ಖನಿಜಾಂಶಗಳು ಹಾಗೂ ಅನೇಕ ಬಗೆಯ ವಿಟಮಿನ್ಸ್ ಇರುತ್ತವೆ. 30 ಬಗೆಯ ಬಯೋಆಕ್ಟಿವ್ ಸಸ್ಯಗಳ ಅಂಶಗಳಿರುತ್ತದೆ. ಇದರಲ್ಲಿ ಪಾಲಿಫೀನೋಲ್ಸ್ ಎಂಬ ಆಯಂಟಿಆಕ್ಸಿಡೆಂಟ್ ಇರುತ್ತದೆ. ಇದು ಹೃದಯಾಘಾತ, ಕ್ಯಾನ್ಸರ್ ತಡೆಗಟ್ಟುವ ಔಷಧೀಯ ಗುಣವನ್ನು ಹೊಂದಿದೆ.ಕ್ಯಾಲ್ಸಿಯಂ, ಮೆಗ್ನಿಷಿಯಂ,ಮ್ಯಾಂಗನೀಸ್,ನಿಯಾಸಿನ್, ಪ್ಯಾಂಥೋನಿಕ್ ಆಮ್ಲ, ರಂಜಕ,ಪೊಟಾಷ್ಯಿಯಂ, ಸತು, ರಿಬೋಫ್ಲೇವಿನ್ ಕಾಡುಜೇನಿನಲ್ಲಿರುತ್ತದೆ. ಲಿವರ್‌ ಆರೋಗ್ಯಕ್ಕೆ ಪೂರಕವಾದ ಪಾಲಿಫೀನೋಲ್ಸ್ ಸಾಮಾನ್ಯ ಜೇನಿನಲ್ಲಿ ಇರಲ್ಲ, ಕಾಡು ಜೇನಿನಲ್ಲಿ ಇರುತ್ತದೆ.ಕಾಡು ಜೇನು ಶೀಘ್ರ ಗಾಯವನ್ನು ಒಣಗಿಸುತ್ತದೆ. ಸುಟ್ಟ ಗಾಯದ ಚಿಕಿತ್ಸೆಯಲ್ಲಿ ಜೇನು ಬಳಸಲಾಗುವುದು. ಜೀರ್ಣಕ್ರಿಯೆಗೆ ಒಳ್ಳೆಯದು, ಕೆಮ್ಮು, ಶೀತಕ್ಕೆ ಅತ್ಯುತ್ತಮ ಮನೆಮದ್ದು, ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಮೆದುಳಿನ ಆರೋಗ್ಯಕ್ಕೆ ಒಳ್ಳೆಯದು.ಕಾಡು ಜೇನು ನೊಣಗಳಿಗೆ ಸಿಗುವಷ್ಟು ಬಗೆ ಬಗೆಯ ಹೂಗಳ ರಸ ಸಿಗುವುದಿಲ್ಲ ಸಾಮಾನ್ಯ ಜೇನಿನಲ್ಲಿ ಇರಲು ಸಾಧ್ಯವಿಲ್ಲ. ಕಾಡುಜೇನನ್ನು ಒಂದು ವರ್ಷದ ಕೆಳಗಿನ ಮಕ್ಕಳಿಗೆ ಕೊಡಬಾರದು ಎಂದು ಹೇಳಲಾಗುವುದು. ಏಕೆಂದರೆ ಇದರಲ್ಲಿ (ಕ್ಲೋಸ್ಟ್ರಿಡಿಯಮ್ ಬೊಟುಲಿನಮ್) ಎಂಬ ಬ್ಯಾಕ್ಟಿರಿಯಾ ಇರುತ್ತದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de….

Please follow and like us:

Leave a Reply

Your email address will not be published. Required fields are marked *

Next Post

‘ಬಿಗ್ ಬಾಸ್ ಕನ್ನಡ 9’ ಕಾರ್ಯಕ್ರಮದಲ್ಲಿ 9ನೇ ವಾರ ‘ಬೆಸ್ಟ್ ಪರ್ಫಾಮೆನ್ಸ್’ ಮೆಡೆಲ್ ಪಡೆದಿದ್ದಾರೆ ಅನುಪಮಾ ಗೌಡ.

Sat Dec 24 , 2022
  ಬಿಗ್ ಬಾಸ್ ಕನ್ನಡ 9’ ಕಾರ್ಯಕ್ರಮದಲ್ಲಿ 9ನೇ ವಾರ ‘ಬೆಸ್ಟ್ ಪರ್ಫಾಮೆನ್ಸ್’ ಮೆಡೆಲ್ ಪಡೆದಿದ್ದಾರೆ ಅನುಪಮಾ ಗೌಡ. ಇನ್ನೂ ‘ಕಳಪೆ’ ಪಟ್ಟ ಆರ್ಯವರ್ಧನ್ ಗುರೂಜಿ ಪಾಲಾಗಿದೆ. ಆರ್ಯವರ್ಧನ್ ಗುರೂಜಿ ಆರೋಗ್ಯದಲ್ಲಿ ಕೊಂಚ ಏರುಪೇರು ಉಂಟಾಗಿರುವ ಕಾರಣ ಇಂದು ಅವರು ಜೈಲುವಾಸ ಅನುಭವಿಸಿಲ್ಲ.ಅನುಪಮಾ ಗೌಡ ಈ ವಾರ ಬೆಸ್ಟ್ ಪರ್ಫಾಮೆನ್ಸ್ ಕೊಟ್ಟಿದ್ದಾರೆ ಎಂದು ಅಮೂಲ್ಯ ಗೌಡ, ವಿನೋದ್ ಗೊಬ್ಬರಗಾಲ, ದಿವ್ಯಾ ಉರುಡುಗ, ಕಾವ್ಯಶ್ರೀ ಗೌಡ, ಅರುಣ್ ಸಾಗರ್, ರಾಕೇಶ್ ಅಡಿಗ […]

Advertisement

Wordpress Social Share Plugin powered by Ultimatelysocial