ಗಂಗಾಮಾತೆಗೆ ಪೂಜೆ ಸಲ್ಲಿಸಿದ ‘ಸಾಮ್ರಾಟ್ ಪೃಥ್ವಿರಾಜ್’ ತಂಡ

 

ಬಾಲಿವುಡ್ ತಾರೆ ಅಕ್ಷಯ್ ಕುಮಾರ್ ನೇತೃತ್ವದಲ್ಲಿ ಸಾಮ್ರಾಟ್ ಪೃಥ್ವಿರಾಜ್ ತಂಡ ವಾರಣಾಸಿಯಲ್ಲಿ ಗಂಗಾ ಪೂಜೆಯನ್ನು ನಡೆಸಿದ್ದು, ಪೂಜೆಯ ಚಿತ್ರಗಳು, ವಿಡಿಯೊ ವೈರಲ್ ಆಗಿವೆ.

ಸಾಮ್ರಾಟ್ ಪೃಥ್ವಿರಾಜ್ ತಂಡವು ಚಿತ್ರ ಬಿಡುಗಡೆಗೆ ಮುನ್ನ ಪ್ರಚಾರಕ್ಕಾಗಿ ವಿವಿಧ ನಗರಗಳಿಗೆ ಭೇಟಿ ನೀಡುತ್ತಿದೆ.

ಮೇ 30 ರಂದು ಅವರು ವಾರಣಾಸಿಗೆ ಭೇಟಿ ನೀಡಿದರು.‌

ಸಾಮ್ರಾಟ್ ಪೃಥ್ವಿರಾಜ್ ಧ್ವಜದೊಂದಿಗೆ ಗಂಗಾ ಪೂಜೆಯನ್ನು ಮಾಡಿದ್ದು ವಿಶೇಷವಾಗಿತ್ತು. ನಟ ಅಕ್ಷಯ್ ಕೂಡ ಪೂಜೆಗೆ ಮುನ್ನ ಗಂಗೆಯಲ್ಲಿ ಸ್ನಾನ ಮಾಡಿದರು. ಅಕ್ಷಯ್ ಗಂಗಾನದಿಯಲ್ಲಿ ಪೂಜೆ ಮಾಡುತ್ತಿರುವ ಫೋಟೋಗಳು ಮತ್ತು ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಸಾಮ್ರಾಟ್ ಪೃಥ್ವಿರಾಜ್‌ ಚಿತ್ರದ ಪ್ರಚಾರದಲ್ಲಿ ನಿರತರಾಗಿರುವ ತಂಡವು ಮಹಾ ನಾಯಕನಿಗೆ ಗೌರವ ಸಲ್ಲಿಸಲು ಅವರ ಆಳ್ವಿಕೆಯ ಕಾಲದಲ್ಲಿದ್ದ ಧ್ವಜವನ್ನು ವಿವಿಧ ನಗರಗಳಿಗೆ ಕೊಂಡೊಯ್ಯುತ್ತಿದೆ.

ಅಕ್ಷಯ್ ಕುಮಾರ್ ಜೊತೆಗೆ ನಟಿ ಮಾನುಷಿ ಚಿಲ್ಲರ್, ನಿರ್ದೇಶಕ ಡಾ ಚಂದ್ರಪ್ರಕಾಶ್ ದ್ವಿವೇದಿ ಗಂಗಾ ಪೂಜೆಯನ್ನು ನೆರವೇರಿಸಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕೈ ತಪ್ಪಿದ ಕಾಂಗ್ರೆಸ್​ ಟಿಕೆಟ್​: ಸೋನಿಯಾ ಗಾಂಧಿ ವಿರುದ್ಧ ಆಕ್ರೋಶ ಹೊರಹಾಕಿದ ನಟಿ ನಗ್ಮಾ!

Tue May 31 , 2022
ಮುಂಬೈ: ರಾಜ್ಯಸಭಾ ಚುನಾವಣೆಗೆ ಕಾಂಗ್ರೆಸ್​ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಘೋಷಣೆ ಮಾಡಿದ ಬೆನ್ನಲ್ಲೇ ಟಿಕೆಟ್​ ಸಿಗದಿದ್ದಕ್ಕೆ ಅಸಮಾಧಾನಗೊಂಡಿರುವ ನಟಿ ಕಂ ರಾಜಕಾರಣಿ ನಗ್ಮಾ ಸೋಮವಾರ ಟ್ವೀಟ್​ ಮೂಲಕ ಆಕ್ರೋಶ ಹೊರಹಾಕಿದ್ದಾರೆ. ಕಾಂಗ್ರೆಸ್​ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಉದ್ದೇಶಿಸಿ ನಗ್ಮಾ ಟ್ವೀಟ್​ ಮಾಡಿದ್ದಾರೆ. ನಮ್ಮ ಕಾಂಗ್ರೆಸ್​ ಅಧ್ಯಕ್ಷೆ ಸೋನಿಯಾ ಜೀ ಅವರ ಇಚ್ಛೆಯಂತೆ ನಾನು 2003-04ರಲ್ಲಿ ಕಾಂಗ್ರೆಸ್​ಗೆ ಸೇರಿದಾಗ ರಾಜ್ಯಸಭೆಯಲ್ಲಿ ಟಿಕೆಟ್​ ನೀಡುವುದಾಗಿ ವೈಯಕ್ತಿಕವಾಗಿ ಬದ್ಧವಾಗಿದ್ದರು. ಆವಾಗ ನಾವು ಅಧಿಕಾರದಲ್ಲಿ ಇರಲಿಲ್ಲ. […]

Advertisement

Wordpress Social Share Plugin powered by Ultimatelysocial