ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಗಳ ಪೈಕಿ ‘ಲಕ್ಷಣ’ ಕೂಡ ಒಂದು. ‘ಲಕ್ಷಣ’ ಧಾರಾವಾಹಿ ಇದೀಗ ಕುತೂಹಲಕಾರಿ ಘಟ್ಟ ತಲುಪಿದೆ. ಇಷ್ಟು ದಿನ ನಕ್ಷತ್ರಳನ್ನ ಸೊಸೆ ಅಂತ ಶಕುಂತಲಾ ದೇವಿ ಪರಿಗಣಿಸುತ್ತಿರಲಿಲ್ಲ. ಅಷ್ಟೇ ಯಾಕೆ.. ಮಯೂರಿ ಹಾಗೂ ಶೆರ್ಲಿ ಅವರುಗಳನ್ನೂ ಶಕುಂತಲಾ ದೇವಿ ‘ಸೊಸೆ’ ಎಂದು ಪರಿಗಣಿಸಿಲ್ಲ. ಇದೀಗ ಚಂದ್ರಶೇಖರ್ ಕೊಟ್ಟಿರುವ ಟಾಸ್ಕ್ನಲ್ಲಿ ನಕ್ಷತ್ರ ಗೆದ್ದುಬಿಟ್ಟರೆ.. ಆಡಿದ ಮಾತಿನಂತೆ ಶಕುಂತಲಾ ದೇವಿ ನಡೆಯಲೇಬೇಕಿದೆ.ನಕ್ಷತ್ರಗೆ ಅವಮಾನ ಮಾಡಿದ್ದ ಶಕುಂತಲಾ ದೇವಿನಕ್ಷತ್ರಗೆ ಇಂಗ್ಲೀಷ್ ಬರಲ್ಲ.. ಕಾಂಟಿನೆಂಟಲ್ ಫುಡ್ ಬಗ್ಗೆ ಅರಿವಿಲ್ಲ ಎಂಬುದು ಗೊತ್ತಿದ್ದರೂ.. ‘’ಮನೆಗೆ ವಿದೇಶದಿಂದ ಡೆಲಿಗೇಟ್ಸ್ ಬರ್ತಾರೆ.. ಅವರಿಗೆ ಬೇಕಾಗಿರುವ ಅಡುಗೆ ಮಾಡು’’ ಎಂದು ನಕ್ಷತ್ರಗೆ ಶಕುಂತಲಾ ದೇವಿ ಸೂಚಿಸಿದ್ದರು. ನಕ್ಷತ್ರ ಸಾಂಪ್ರದಾಯಿಕ ಅಡುಗೆ ಮಾಡಿದ್ದಕ್ಕೆ ಶಕುಂತಲಾ ದೇವಿ ಸಿಡಿಮಿಡಿಗೊಂಡಿದ್ದರು. ‘’ನಕ್ಷತ್ರಗೆ ಕಾಂಟಿನೆಂಟಲ್ ಫುಡ್ ಬಗ್ಗೆ ಅರಿವಿಲ್ಲ. ಶ್ವೇತಾನೇ ನನಗೆ ತಕ್ಕ ಸೊಸೆ’’ ಎಂದು ಶಕುಂತಲಾ ದೇವಿ ಹೇಳಿದ್ದರು.ನಕ್ಷತ್ರಳನ್ನ ಶ್ವೇತಾಗೆ ಹೋಲಿಸಿದ ಕಾರಣಕ್ಕೆ ಚಂದ್ರಶೇಖರ್ ಹಾಗೂ ಆರತಿ ಒಂದು ಟಾಸ್ಕ್ ನೀಡಿದ್ದಾರೆ. ಶ್ವೇತಾ ಮತ್ತು ನಕ್ಷತ್ರ ಮಧ್ಯೆ ಯಾರು ಬೆಸ್ಟ್ ಅಂತ ಶಕುಂತಲಾ ದೇವಿಗೆ ಗೊತ್ತಾಗಬೇಕು ಎಂದು ಚಂದ್ರಶೇಖರ್ – ಆರತಿ ದಂಪತಿ ಇಬ್ಬರಿಗೂ ಒಂದು ಟಾಸ್ಕ್ ನೀಡಿದ್ದಾರೆ. 500 ರೂಪಾಯಿ ದುಡ್ಡಿನಲ್ಲಿ ಒಂದು ದಿನ ಇಡೀ ಮನೆಯನ್ನ ಮ್ಯಾನೇಜ್ ಮಾಡಲು ನಕ್ಷತ್ರ ಹಾಗೂ ಶ್ವೇತಾಗೆ ಚಂದ್ರಶೇಖರ್ ಟಾಸ್ಕ್ ಕೊಟ್ಟಿದ್ದಾರೆ.ಈ ಟಾಸ್ಕ್ನಲ್ಲಿ ನಕ್ಷತ್ರ ಗೆದ್ದೇ ಗೆಲ್ಲುತ್ತಾಳೆ ಎಂಬ ನಂಬಿಕೆ ಚಂದ್ರಶೇಖರ್ಗಿದೆ. ಹೀಗಾಗಿ, ಚಂದ್ರಶೇಖರ್ಗೆ ಶಕುಂತಲಾ ದೇವಿ ಸವಾಲು ಹಾಕಿದ್ದಾರೆ. ‘’ಒಂದ್ವೇಳೆ ನಕ್ಷತ್ರ ಗೆದ್ದರೆ ನಾನು ಆಕೆಯನ್ನ ಸೊಸೆ ಅಂತ ಒಪ್ಪಿಕೊಳ್ಳುತ್ತೇನೆ. ಒಂದ್ವೇಳೆ ನಕ್ಷತ್ರ ಗೆಲ್ಲದೇ ಹೋದರೆ.. ಆಕೆ ಶಾಶ್ವತವಾಗಿ ಮನೆ ಬಿಟ್ಟು ಹೋಗಬೇಕು’’ ಎಂದು ಚಂದ್ರಶೇಖರ್ಗೆ ಶಕುಂತಲಾ ದೇವಿ ತಿಳಿಸಿದ್ದಾರೆ. ಶಕುಂತಲಾ ದೇವಿ ಕಂಡೀಷನ್ಗೆ ಚಂದ್ರಶೇಖರ್ ಕೂಡ ಒಪ್ಪಿಗೆ ನೀಡಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada