ಗರಂ ಮಸಾಲಾ ಪುಡಿ ಮನೆಯಲ್ಲೇ ಮಾಡುವ ವಿಧಾನ!!!!

 

 

ಬೇಕಾಗುವ ಪದಾರ್ಥಗಳು :
ದನಿಯಾ- ಮುಕ್ಕಾಲು ಬಟ್ಟಲು
ಜೀರಿಗೆ- ಅರ್ಧ ಬಟ್ಟಲು
ಕಪ್ಪು ಜೀರಿಗೆ- 1 ಚಮಚ
ಕಾಳುಮೆಣಸು-2 ಚಮಚ
ಒಣಗಿದ ಮೆಣಸಿನ ಕಾಯಿ-3
ಸ್ಟಾರ್ ಸೋಂಪು-5
ಚಕ್ಕೆ – ಸ್ವಲ್ಪ
ಜಾಯಿ ಪತ್ರೆ- 2
ಕಪ್ಪು ಏಲಕ್ಕಿ- 3
ಜಾಯಿಕಾಯಿ – 2
ಏಲಕ್ಕಿ- 3 ಚಮಚ
ಲವಂಗ- 1 ಚಮಚ
ಜೀರಿಗೆ- 1 ಚಮಚ
ಪಲಾವ್ ಎಲೆ- 5-6
ಶುಂಠಿ ಪುಡಿ- 1 ಚಮಚ
ಮಾಡುವ ವಿಧಾನ:
ಮೊದಲಿಗೆ ಒಂದು ದೊಡ್ಡ ಪ್ಯಾನ್ ತೆಗೆದುಕೊಂಡು ಒಲೆಯ ಮೇಲಿಟ್ಟು ಕಾದ ನಂತರ ಅದಕ್ಕೆ ದನಿಯಾ ಹಾಕಿ ಚೆನ್ನಾಗಿ ಕೆಂಪಗೆ ಹುರಿದಿಟ್ಟುಕೊಳ್ಳಿ.
ನಂತರ ಅದೇ ಪ್ಯಾನ್ ಒಲೆಯ ಮೇಲಿಟ್ಟು, ಅದಕ್ಕೆ ಜೀರಿಗೆ, ಕಪ್ಪು ಜೀರಿಗೆ, ಕಾಳುಮೆಣಸು, ಒಣಗಿದ ಮೆಣಸಿನ ಕಾಯಿ ಹಾಕಿ ಕೆಂಪಗೆ ಹುರಿಯಿರಿ.
ಮತ್ತೆ ಪ್ಯಾನ್ ಇಟ್ಟು, ಸ್ಟಾರ್ ಸೋಂಪು, ಚಕ್ಕೆ, ಜಾಯಿ ಪತ್ರೆ, ಕಪ್ಪು ಏಲಕ್ಕಿ, ಜಾಯಿಕಾಯಿ, ಏಲಕ್ಕಿ, ಲವಂಗ, ಜೀರಿಗೆ, ಪಲಾವ್ ಎಲೆ ಎಲ್ಲವನ್ನೂ ಹಾಕಿ ಕೆಂಪಗೆ ಹುರಿದುಕೊಂಡು, ಎಲ್ಲವೂ ತಣ್ಣಗಾಗಲು ಬಿಡಿ. ತಣ್ಣಗಾದ ಬಳಿಕ ಇದಕ್ಕೆ ಶುಂಠಿ ಪುಡಿ ಸೇರಿಸಿ ಮಿಕ್ಸಿ ಜಾರ್’ಗೆ ಹಾಕಿ ನುಣ್ಣಗೆ ಪುಡಿ ಮಾಡಿಕೊಂಡರೆ ಗರಂ ಮಸಾಲಾ ಪುಡಿ ಸಿದ್ಧ.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

 

 

Please follow and like us:

Leave a Reply

Your email address will not be published. Required fields are marked *

Next Post

ಇಂದು ಸಂಜೆ 7 ಗಂಟೆ ಬಳಿಕ ಶಬರಿಮಲೆ 'ಮಕರ ಜ್ಯೋತಿದರ್ಶನ'

Fri Jan 14 , 2022
ಇಂದು ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿಯ ಸನ್ನಿಧಾನದಲ್ಲಿ ಮಕರ ಸಂಕ್ರಮಣ ಪೂಜೆ ಜರುಗಲಿದೆ. ಈ ಬಳಿಕ ಮಹಾಮಂಗಳಾರತಿ ನಡೆಯಲಿದೆ. ಸಂಜೆ 7 ಗಂಟೆಗೆ ನಡೆಯುವಂತ ಮಹಾಮಂಗಳಾರತಿ ಬಳಿಕ, ಭಕ್ತರಿಗೆ ಶಬರಿಮಲೆಯಲ್ಲಿನ ಮಕರಜ್ಯೋತಿ ದರ್ಶನವಾಗಲಿದೆ. ಶಬರಿಮಲೆಗೆ ವಿರುದ್ಧ ದಿಕ್ಕಿನಲ್ಲಿರುವಂತ ಪೊನ್ನಂಬಲಮೇಡು ಗಿರಿಯಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಭಕ್ತರಿಗೆ ಮಕರ ಸಂಕ್ರಾಂತಿಯ ದಿನವಾದ ಇಂದು, ಮಕರ ಜ್ಯೋತಿಯ ದರ್ಶನವಾಗಲಿದೆ ಎಂಬುದಾಗಿ ಶಬರಿಮಲೆ ಆಡಳಿತ ಮಂಡಳಿ ತಿಳಿಸಿದ್ದಾರೆ ಇದರಂತೆಯೇ  ಇಂದು ಸಂಜೆ ಅಯ್ಯಪ್ಪ ಸ್ವಾಮಿಗೆ […]

Advertisement

Wordpress Social Share Plugin powered by Ultimatelysocial