ಧಾರವಾಡ: ಗಿರೀಶ ಕಾರ್ನಾಡ್ ಓರ್ವ ಡುಪ್ಲಿಕೇಟ್ ಎಂದು ಧಾರವಾಡದಲ್ಲಿ ಮೈಸೂರು ರಂಗಾಯನ ನಿರ್ಧೆಶಕ ಅಡ್ಡಂಡ ಕಾರ್ಯಪ್ಪ ಹೇಳಿದ್ದಾರೆ.ಟಿಪ್ಪು ನಿಜ ಕನಸುಗಳು ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗಿರೀಶ ಕಾರ್ನಾಡ್ ನಮಗೆ ಭಾವ ಆಗಬೇಕು.ಅವರ ಪತ್ನಿ ನಮ್ಮೂರಿನ ಕಡೆಯವರು ಹೀಗಾಗಿ ಕಾರ್ನಾಡ್ ನಮಗೆ ಭಾವ ನಮ್ಮ ಭಾವನವರ ಬಗ್ಗೆ ನಾನು ಏನಾದರೂ ಮಾತನಾಡಬಹುದು ಡಾ.ಕೀರ್ತಿನಾಥ ಕುರ್ತಕೋಟಿಯವರು ಬರೆದಿದ್ದಕ್ಕೆ ಹೆಸರು ಡಾ. ಗೀರಿಸ್ ಕಾರ್ನಾಡರದ್ದು ಗೋಪಾಲ ವಾಜಪೇಯಿಯವರ ಹಾಡಿಗೂ ತಮ್ಮ ಹೆಸರು ಹಾಕಿದ್ದರು.ಆದರೆ ಕೋರ್ಟ್ಗೆ ಹೋದ ಮೇಲೆ ವಾಪಸ್ ತಗೊಂಡರು ಕೃತಿ ಚೌರ್ಯ ಮಾಡುವುದರಲ್ಲಿ ಫೇಮಸ್ ಡಾ.ಗಿರೀಶ್ ಕಾರ್ನಾಡ್ ಎಂದು ದೂರಿದರು.25 ವರ್ಷದ ಹಿಂದೆ ಡಾ ಗಿರೀಶ್
ಕಾರ್ನಾಡ್ ಟಿಪ್ಪು ಕಂಡ ಕನಸು ನಾಟಕ ಮಾಡಿದ್ದಾರೆ.ಅದರಲ್ಲಿ ಸತ್ಯದ ತಲೆಗೆ ಹೊಡೆದಂತೆ ಸುಳ್ಳು ತುಂಬಿದ್ದಾರೆ.ಅವರು ಕೇವಲ ಪ್ರಶಸ್ತಿಯ ಮೇಲೆ ಕಣ್ಣು ಇಟ್ಟು ಅವರು ಬರೆಯುವುದು ಇಂತಹ ಡುಪ್ಲಿಕೇಟ್ ಕಾರ್ನಾಡ್ ಎಂದು ಗಂಭೀರ ಆರೋಪ ಮಾಡಿದರು.ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಟಿಪ್ಪು ನಿಜ ಕನಸುಗಳು ಕೃತಿ ಬಿಡುಗಡೆಗೊಳಿಸಿದರು.ಸಾಹಿತಿಗಳು, ವಿದ್ವಾಂಸರು, ಸಾಹಿತ್ಯಾಶಕ್ತರು ಭಾಗವಹಿಸಿದ್ದರು.ಹಿಂದುಗಳಿಗೆ ಅನ್ಯಾಯದರೆ ಬಿಡಲ್ಲ; ನಾನು ಹಿಂದುಗಳಿಗೆ ಅನ್ಯಾಯದರೆ ಯಾವುದೇ ಕಾರಣಕ್ಕೋ ಬಿಡಲ್ಲ ಆದ್ದರಿಂದ ಸದಾ ಹಿಂದುಗಳ ಶ್ರೇಯಸ್ಸಿಗೆ ಎಲ್ಲರೂ ಚಿಂತನೆ ಮಾಡಬೇಕು ಆದ್ದರಿಂದ ಟಿಪ್ಪು ಯ ನಿಜ ಕನಸುಗಳು ಪುಸ್ತಕ ಟೀಪು ಸುಲ್ತಾನ್ ನಿಜ ಬಣ್ಣ ಬಯಲು ಮಾಡಲಾಗಿದೆ ಎಂದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/de…