ಮುಂಬೈ:ಬಾಲಿವುಡ್ನಲ್ಲಿ ರಾಮಾಯಣ ಅದಾರಿತ ಸಿನಿಮಾ ಬರಲಿದೆ ಎನ್ನುವ ಸುದ್ದಿ ಹಲವು ತಿಂಗಳಿಂದ ಹರಿದಾಡುತ್ತಲೇ ಇದೆ.ಇದೊಂದು ದೊಡ್ದ ಬಜೆಟ್ನ ಸಿನಿಮಾ ವಾಗಿದ್ದು , ಈ ಸಿನಿಮಾದಲ್ಲಿ ಭಾರತೀಯ ಸಿನಿಮಾದ ಹೆಸರಾಂತ ನಟರು ಇದರಲ್ಲಿ ಇದ್ದಾರೆ.ಅಧಿಕೃತವಾಗಿ ಸಿನಿಮಾ ಕುರಿತು ಯಾವುದೇ ಮಾಹಿತಿ ನೀಡದಿದ್ದರೂ , ತಾರಗಣದ ಗುಂಪು ಮಾತ್ರ ಹೊರಬಿದ್ದಿದೆ.ಈ ಸಿನಿಮಾದಲ್ಲಿ ರಾಮನಾಗಿ ರಣಬೀರ್ ಕಪೂರ್ ಕಾಣಿಸಿಕೊಂಡರೆ, ಸೀತೆಯಾಗಿ ಆಲಿಯಾ ಭಟ್ ನಟಿಸಲಿದ್ದಾರೆ ಎನ್ನುವ ಸುದ್ದಿ ಇದೆ.ಇನ್ನೂ ನಿಜ ಜೀವನದಲ್ಲಿ ಜೋಡಿಯಾಗಿರುವ ರಣಬೀರ್, ಆಲಿಯಾತರೆಯಮೇಲೂ ಅಂತದ್ದೆ ಪಾತ್ರ ಮಾಡಲಿದ್ದಾರೆ ಎನ್ನುವುದನ್ನ ಬಿಟೌನ್ ಮಾತನಾಡಿಕೊಳ್ಳುತ್ತಿದೆ.
ಇದರ ಜೊತೆ ನಮ್ಮ ಕನ್ನಡದ ನಟ ರಾಕಿಂಗ್ ಸ್ಟಾರ್ ಯಶ್ಕೂಡ ಈ ಚಿತ್ರದಲ್ಲಿ ನಟನೆ ಮಾಡಲಿದ್ದಾರೆ ಎನ್ನುವ ಸುದ್ದಿಯೂ ಒಡಾಡುತ್ತಿದೆ. ಇದೀಗ ಈ ಬಾಲಿವುಡ್ ಸ್ಟಾರ್ ನಟರ ವಿರುದ್ಧ ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಕಂಗನಾ ರಾಣಾವತ್ ಟೀಕೆ ಮಾಡಿದ್ದಾರೆ. ಅದರಲ್ಲೂ ಪರೊಕ್ಷವಾಗಿ ರಣಬೀರ್ನ ಬಗ್ಗೆ ಟೀಕಿಸಿದ್ದಾರೆ.ರಣಬೀರ್ ಕಪೂರ್ರನ್ನ ಮಾದಕ ವ್ಯಸನಿ, ಬಿಳಿ ಇಲಿ ಅಂತೆಲ್ಲಾ ಕೆರೆದಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘವಾಗಿ ಬರೆದುಕೊಂಡಿರುವ ಕಂಗನಾ ರಾಣಾವತ್ ʻನಾನು ಇತ್ತೀಚಿನ ದಿನದಲ್ಲಿ ರಾಮಾಯಣ ಸಿನಿಮಾ ನಡೆಯುದರ ಬಗ್ಗೆ ಕೇಳುತ್ತಿರುವೆ.ಅದರಲ್ಲಿ ಮಾಧಕ ವ್ಯಸನಿಯೊಬ್ಬ ರಾಮನ ಪಾತ್ರ ಮಾಡಲಿದ್ದಾನಂತೆ . ತೆಳ್ಳಗಿನ ಬಿಳಿ ಇಲಿಯು ಕೆಟ್ಟ ರೀತಿಯಲ್ಲಿ ಬೇರೆಯವರ ಬಗ್ಗೆ ಟಿ.ಆರ್.ಪಿ ಮಾಡಿಕೊಂಡು ಓಡಾಡುವುದರಲ್ಲೇ ಕುಖ್ಯಾತಿ ಪಡೆದಿದ್ದವನು. ಇವನು ಕೇವಲ ನಟನಲ್ಲ, ಹೆಣ್ಣುಬಾಕ ಕೂಡ ಹೌದು.ಇಂಥವನು ರಾಮನಾಗಲು ಬೆಳೆದು ನಿಂತಿದ್ದಾನೆ ಎಂದು ರಣಬೀರ್ ಕಪೂರ್ಗೆ ಜರಿದಿದ್ದಾರೆ.
ಇನ್ನೂ ಯಶ್ ಅವರಿಗೆ ರಾವಣನ ಪಾತ್ರ ನೀಡಲಾಗಿದೆ ಎನ್ನುದನ್ನ ಕೇಳಿದ್ದೇನೆ. ರಾವಣನ ಪಾತ್ರಕಿಂತ ಅವರಿಗೆ ರಾಮನ ಪಾತ್ರ ಸರಿಯಾಗಿ ಹೊಂದಿಕೆ ಯಾಗುತ್ತದೆ. ಎಂದು ಪರೋಕ್ಷವಾಗಿ ಯಶ್ಗೆ ಬೆಂಬಲ ನೀಡಿದರು.ಈ ಮಧ್ಯ ಯಲ್ಲಾ ಹೇಳಿಕೆಯ ನಡುವೆಯೂ ಅವರು ರಣಬೀರ್ ಕಪೂರ್ಗೆ ಎಚ್ಚರಿಕೆಯನ್ನೂ ನೀಡಿದ್ದಾರೆ.ʻನೀನು ಒಮ್ಮೆ ಹೊಡೆದರೆ ನಾನು ಸಾಯೋತನಕ ಹೊಡೆಯುತ್ತೇನೆ. ಗಲಾಟೆ ಮಾಡದೆ ದೂರ ಇರು ಎಂದು ಅವರು ಬರೆದು ಕೊಂಡಿದ್ದಾರೆ.
https://play.google.com/store/apps/details?id=com.speed.newskannada