ಕೊಪ್ಪಳ: ಕಡಿಮೆ ದರಕ್ಕೆ ಚಿನ್ನ ಕೊಡುವುದಾಗಿ ನಂಬಿಸಿ ಹಣ ದೋಚುವ ಖತರ್ನಾಕ್ ಗ್ಯಾಂಗ್ ಅನ್ನು ಪೊಲೀಸರು ಬಂಧಿಸಿದ್ದಾರೆ.ಕೊಪ್ಪಳ ತಾಲೂಕಿನ ಅಳವಂಡಿ ಪೊಲೀಸರು ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ಮೂಲದ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.ಅಡಿಪಾಯ ತೆಗೆಯುವಾಗ ಚಿನ್ನ ಸಿಕ್ಕಿದೆ. ಅದನ್ನು ಕಡಿಮೆ ದರಕ್ಕೆ ಮಾರಾಟ ಮಾಡುತ್ತಿದ್ದೇವೆ ಎಂದು ನಂಬಿಸಿ ಆರೋಪಿಗಳು ವಂಚನೆ ಮಾಡುತ್ತಿದ್ದರು.ಯಲಬುರ್ಗಾ ತಾಲೂಕಿನ ವಣಗೇರಿಯ ವೆಂಕಟೇಶ ಎಂಬುವರನ್ನ ನಂಬಿಸಿ 5 ಲಕ್ಷ ಹಣ ದೋಚಿದ್ದರು. ನನ್ನ ಹೆಸರು ರಮೇಶ. ಚಿಕ್ಕಮಗಳೂರಿನ ನಿವಾಸಿ ಎಂದು ಹೇಳಿ ವೆಂಕಟೇಶ್ಗೆ ಆರೋಪಿಗಳು ಫೋನು ಮಾಡಿದ್ದರು. ಹಲಗೇರಿ ಬಳಿ ಹಣ ತಂದರೆ ನಿಮಗೆ ಚಿನ್ನವನ್ನು ಕೊಡುತ್ತೇವೆ ಎಂದು ಹೇಳಿದ್ದರು.ಆರೋಪಿಗಳ ಮಾತನ್ನು ನಂಬಿ ವೆಂಕಟೇಶ್ ಹಲಗೇರಿಗೆ ಬಂದಾಗ ಅವರಿಂದ 5 ಲಕ್ಷ ರೂ. ಹಣವನ್ನು ದೋಚಿ ಆರೋಪಿಗಳು ಪರಾರಿಯಾಗಿದ್ದರು. ಫೆ.1 ರಂದು 6 ಜನರ ಗ್ಯಾಂಗ್ನಿಂದ ಈ ಕೃತ್ಯ ನಡೆದಿತ್ತು. ಪರಾರಿಯಾಗಿದ್ದ 6 ಜನರ ಪೈಕಿ 4 ಆರೋಪಿಗಳನ್ನು ಇದೀಗ ಬಂಧಿಸಲಾಗಿದೆ. ಕೊಪ್ಪಳ ತಾಲೂಕು ಅಳವಂಡಿ ಪೊಲೀಸರಿಂದ ಮಿಂಚಿನ ಕಾರ್ಯಾಚರಣೆ ನಡೆದಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada