ಹಾಲಿನ ಪ್ಯಾಕೆಟ್‌ ಮೇಲೆ ಅಪ್ಪು ಚಿತ್ರ:

ನಟ ಪುನೀತ್ ರಾಜ್‌ಕುಮಾರ್ ಯಾವುದೇ ಸರ್ಕಾರಿ ಜಾಹೀರಾತಿನಲ್ಲಿ ನಟಿಸಲು ಹಣ ಪಡೆಯುತ್ತಿರಲಿಲ್ಲ. ಸರ್ಕಾರಿ ಜಾಹೀರಾತೆ ಎಂದಲ್ಲ, ರೈತರಿಗೆ, ಸಾರ್ವಜನಿಕರಿಗೆ ಸಹಾಯವಾಗುವಂಥಹಾ ಜಾಹೀರಾತಿನಲ್ಲಿ ನಟಿಸಲು ಎಂದೂ ಹಣ ಪಡೆದವರಲ್ಲ ಪುನೀತ್ ರಾಜ್‌ಕುಮಾರ್.

ಅದರಲ್ಲಿಯೂ ಕರ್ನಾಟಕ ಹಾಲು ಒಕ್ಕೂಟದ ಜಾಹೀರಾತಿನಲ್ಲಿ ಹಲವು ವರ್ಷಗಳಿಂದಲೂ ಪುನೀತ್ ರಾಜ್‌ಕುಮಾರ್ ನಟಿಸುತ್ತಾ ಬಂದಿದ್ದಾರೆ ಎಂದೂ ಅದಕ್ಕಾಗಿ ಹಣ ಪಡೆದವರಲ್ಲ.

ನಂದಿನಿ ಜನಪ್ರಿಯವಾಗುವಲ್ಲಿ ಪುನೀತ್ ರಾಜ್‌ಕುಮಾರ್ ಪಾತ್ರ ದೊಡ್ಡದು. ನಟ ರಾಜ್‌ಕುಮಾರ್ ಸಹ ಕೆಎಂಎಫ್ ಉತ್ಪನ್ನ ಜಾಹೀರಾತಿಗೆ ಹಣ ಪಡೆದಿರಲಿಲ್ಲ. ಅದನ್ನೇ ಪುನೀತ್ ಸಹ ಪಾಲಿಸಿದ್ದರು.

ಹಠಾತ್ತನೆ ಎಲ್ಲರನ್ನೂ ಬಿಟ್ಟು ಅಗಲಿರುವ ಪುನೀತ್ ರಾಜ್‌ಕುಮಾರ್ ಅವರಿಗೆ ಗೌರವ ಸಲ್ಲಿಸುವ ಕಾರ್ಯವನ್ನು ಕೆಎಂಎಫ್ ಮಾಡಿದೆ. ತನ್ನ ಬಹು ಜನಪ್ರಿಯ ಉತ್ಪನ್ನವಾದ ನಂದಿನಿ ಹಾಲಿನ ಪ್ಯಾಕೆಟ್‌ ಮೇಲೆ ಅಪ್ಪುವಿನ ಚಿತ್ರವನ್ನು ಪ್ರಕಟಿಸಿದೆ. ಆ ಮೂಲಕ ಪುನೀತ್ ರಾಜ್‌ಕುಮಾರ್ ಅವರಿಗೆ ಗೌರವ ಸಲ್ಲಿಸಿದೆ.

ಪುನೀತ್ ರಾಜ್‌ಕುಮಾರ್ ನಿಧನ ಹೊಂದಿದಾಗಲೂ ಕೆಎಂಎಫ್ ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಲಾಗಿತ್ತು. ಇದೀಗ ಹಾಲಿನ ಪ್ಯಾಕೆಟ್‌ ಮೇಲೆ ನಟನ ಚಿತ್ರ ಪ್ರಕಟಿಸುವ ಮೂಲಕ ದೊಡ್ಡ ಮಟ್ಟದಲ್ಲಿ ಗೌರವ ಸಲ್ಲಿಸಿದೆ ಕೆಎಂಎಫ್.

ಪುನೀತ್ ರಾಜ್‌ಕುಮಾರ್ ಅವರು ಬದುಕಿದ್ದಾಗ ಹಲವು ಜನೋಪಯೋಗಿ ಜಾಹೀರಾತುಗಳಲ್ಲಿ ಚಿಕ್ಕಾಸು ಪಡೆಯದೆ ಉಚಿತವಾಗಿ ನಟಿಸಿದ್ದರು. ಕೆಎಂಎಫ್ ಜಾಹೀರಾತಿನ ಜೊತೆಗೆ ಚಾಮರಾಜ ನಗರ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ರಾಯಭಾರಿಯಾಗಿದ್ದರು ನಟ ಪುನೀತ್ ರಾಜ್‌ಕುಮಾರ್. ಇದಕ್ಕಾಗಿಯೂ ಅವರು ಚಿಕ್ಕಾಸು ಪಡೆದಿರಲಿಲ್ಲ. ಸ್ವತಃ ನಿಸರ್ಗ ಪ್ರೇಮಿಯಾಗಿದ್ದ ಪುನೀತ್ ಈ ಕಾರ್ಯವನ್ನು ಉಚಿತವಾಗಿ ಮಾಡಿದ್ದರು. ಕೌಶಲ್ಯ ಕರ್ನಾಟಕ ಯೋಜನೆಯ ರಾಯಭಾರಿಯೂ ಆಗಿದ್ದರು ಪುನೀತ್. ಉದ್ಯಮಶೀಲತೆ, ಎಫಿಷಿಯಂಟ್ ಲೈಂಟಿಂಗ್ ಪ್ರೋಗ್ರಾಂಗೂ ಪುನೀತ್ ರಾಯಭಾರಿ ಆಗಿದ್ದರು. ಸಬ್ಸಿಡಿ ದರದಲ್ಲಿ ಎಲ್‌ಇಡಿ ಬಲ್ಬ್ ವಿತರಣೆ ಯೋಜನೆ ಹೊರತಂದಾಗ ಅದಕ್ಕೆ ಜಾಹೀರಾತು ನೀಡಿದ್ದು ಪುನೀತ್ ರಾಜ್‌ಕುಮಾರ್. ಅವರೊಟ್ಟಿಗೆ ನಟಿ ರಮ್ಯಾ ಸಹ ಇದ್ದರು. ಆಗ ಡಿ.ಕೆ.ಶಿವಕುಮಾರ್ ಇಂಧನ ಸಚಿವರಾಗಿದ್ದರು.

ಬಿಎಂಟಿಸಿ ಬಸ್ ಆದ್ಯತಾ ಪಥ ಕಾರ್ಯಕ್ರಮಕ್ಕೂ ಪುನೀತ್ ರಾಜ್‌ಕುಮಾರ್ ಅಂಬಾಸಿಡರ್ ಆಗಿದ್ದರು. ಪುನೀತ್ ನಿಧನ ಹೊಂದಿದಾಗ ಬಿಎಂಟಿಸಿಯು ಅದೇ ಜಾಹೀರಾತನ್ನು ಟ್ವಿಟ್ಟರ್‌ನಲ್ಲಿ ಪ್ರಕಟಿಸಿ ಪುನೀತ್ ಅಗಲಿಕೆಗೆ ಸಂತಾಪ ಸೂಚಿಸಿತು. ಕಿಮ್ಮನೆ ರತ್ನಾಕರ್ ಶಿಕ್ಷಣ ಮಂತ್ರಿಗಳಾಗಿದ್ದಾಗ ಸಂಭಾವನೆ ಪಡೆಯದೆ ಆರ್‌ಟಿಇ ಕಾರ್ಯಕ್ರಮಕ್ಕೆ ಪ್ರಚಾರ ನೀಡಿದ್ದರು ಪುನೀತ್ ರಾಜ್‌ಕುಮಾರ್. ಪುನೀತ್ ಧನ್ಯವಾದ ಸಲ್ಲಿಸುತ್ತಾ, ”ನೀವು ರಾಜಕುಮಾರನೇ ಮಗನೇ ಹೆಸರಲ್ಲೇ ಅಲ್ಲ ಗುಣದಲ್ಲೂ” ಎಂದಿದ್ದರಂತೆ ಕಿಮ್ಮನೆ. ಆಗ ನಗುತ್ತಾ, ”ಅಪ್ಪಾಜಿಯ ಆಶೀರ್ವಾದ” ಎಂದಿದ್ದರಂತೆ. ಈ ವಿಷಯವನ್ನು ಕಿಮ್ಮನೆ ಕೆಲ ದಿನಗಳ ಹಿಂದೆ ನೆನಪಿಸಿಕೊಂಡಿದ್ದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮೊದಲ ಮಗುವಿನ ಸಂತಸದಲ್ಲಿ ಗಲ್ರಾನಿ ದಂಪತಿ

Sun Jan 2 , 2022
ಇತ್ತೀಚಿಗಷ್ಟೆ ಡ್ರಗ್ಸ್‌ ವಿಚಾರವಾಗಿ ಜೈಲು ಸೇರಿದ್ದ ಸಂಜನ ಗಲ್ರಾನಿ, ಜಾಮೀನು ಸಿಕ್ಕದ ನಂತರ ಹೊರಬಂದಿದ್ದರು. ಹೊರಬಂದ ನಂತರ ತಾನು ದಪ್ಪಗಾಗಿರೋದಾಗಿ ಒಂದು ವೀಡಿಯೋ ಮೂಲಕ ತಿಳಿಸಿದ್ದರು, ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್‌ ಕೂಡ ಆಗಿತ್ತು. ಸಂಜನ ಸೋಶಿಯಲ್‌ ಮೀಡಿಯಾದಲ್ಲಿ ಇತ್ತೀಚೆಗೆ ತುಂಬಾ ಕಾಲ ಕಳೆಯುತ್ತಿದ್ದು, ತನ್ನ ಅಭಿಮಾನಿಗಳಿಗೆ ಸಂತಸದ ವಿಷಯವೊಂದನ್ನ ತಿಳಿಸಿದ್ದಾರೆ. ಹೌದು “ನಾನು ತಾಯಿ ಆಗುತಿದ್ದೇನೆ, ನನಗೀಗ ಐದು ತಿಂಗಳು, ನನಗೆ ಇದೊಂದು ಅದ್ಭುತ ಜರ್ನಿ” […]

Advertisement

Wordpress Social Share Plugin powered by Ultimatelysocial