ಹರ ಗೋವಿಂದ ಖೊರಾನ ವಿಜ್ಞಾನಿ

ಭಾರತೀಯ ಮೂಲಸ್ಥ ಅಮೆರಿಕದ ಪ್ರಜೆಯಾಗಿ ನೊಬೆಲ್ ಪ್ರಶಸ್ತಿ ಗಳಿಸಿದ ವಿಜ್ಞಾನಿ ಹರ ಗೋವಿಂದ ಖೊರಾನ, ರಸಾಯನಶಾಸ್ತ್ರ ಮತ್ತು ಜೀವಶಾಸ್ತ್ರಗಳಲ್ಲಿ ಮಹತ್ವದ ಸಂಶೋಧನೆಗಳ ಮೂಲಕ ಜಗತ್ಪ್ರಸಿದ್ಧರಾದವರು.
ಖೊರಾನ ಅವರು 1922ರ ಜನವರಿ 9ರಂದು ಈಗಿನ ಪಾಕಿಸ್ತಾನದ ಭಾಗವಾಗಿರುವ ರಾಯಪುರದಲ್ಲಿ ಜನಿಸಿದರು. ಹರ ಗೋವಿಂದ ಖೊರಾನ ಅವರ ತಂದೆಯವರು ಪಟ್ವಾರಿ ಎಂಬ ಹಳ್ಳಿಯ ತೆರಿಗೆ ಅಧಿಕಾರ ಹೊಂದಿದ್ದು, ಖೊರಾನ ಅವರ ಹೈಸ್ಕೂಲುವರೆಗಿನ ಓದು ಮನೆಯಿಂದಲೇ ನಡೆಯುತ್ತಿತ್ತು. ಲಾಹೋರಿನ ಪಂಜಾಬ್ ವಿಶ್ವವಿದ್ಯಾಲಯದಿಂದ 1943ರಲ್ಲಿ ಬಿ.ಎಸ್ಸಿ ಮತ್ತು 1945ರಲ್ಲಿ ಎಂ.ಎಸ್ಸಿ ಪದವಿ ಪಡೆದ ಖೊರಾನ 1945ರಲ್ಲಿ ಬ್ರಿಟನ್ನಿನಲ್ಲಿರುವ ಲಿವರ್ಪೂಲ್ ವಿಶ್ವವಿದ್ಯಾಲಯಕ್ಕೆ ತೆರಳಿದರು. ಅಲ್ಲಿ 1948ರಲ್ಲಿ ಜೈವಿಕ ರಸಾಯನ ಶಾಸ್ತ್ರದಲ್ಲಿ ಪಿಎಚ್.ಡಿ ಪದವಿ ಗಳಿಸಿದ ಅವರು ಮುಂದೆ ಎರಡು ವರ್ಷಗಳ ಕಾಲ ಜ್ಯೂರಿಚ್ನಲ್ಲೂ, ಮತ್ತೆರಡು ವರ್ಷಗಳ ಕಾಲ ಕೆಂಬ್ರಿಡ್ಜಿನಲ್ಲೂ ಹೆಚ್ಚಿನ ಅಧ್ಯಯನದಲ್ಲಿ ನಿರತರಾದರು. ಮುಂದೆ ಅವರು ಬ್ರಿಟಿಷ್ ಕೊಲಂಬಿಯಾ, ವಿಸ್ಕಾನ್ಸಿನ್ ಮ್ಯಾಡಿಸನ್ ಮುಂತಾದ ವಿಶ್ವವಿದ್ಯಾಲಯಗಳಲ್ಲಿ ಕಾರ್ಯನಿರ್ವಹಿಸಿ, 1970ರಿಂದ 2007ರವರೆಗಿನ ಸುದೀರ್ಘ ಅವಧಿಯವರೆವಿಗೆ ಮಸ್ಸಾಚುಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಜೀವಶಾಸ್ತ್ರ ಮತ್ತು ರಸಾಯನಶಾಸ್ತ್ರಗಳ ಪ್ರಾಧ್ಯಾಪಕರಾಗಿ ದುಡಿದರು.
‘ಕೊ‌ಎಂಸೈಮ್ ಎ’ ಎಂಬ ರಾಸಾಯನಿಕ ವಸ್ತುಗಳನ್ನು ತಯಾರು ಮಾಡಿದ್ದು ರಸಾಯನಶಾಸ್ತ್ರದಲ್ಲಿನ ಹರಗೋವಿಂದ ಖೊರಾನ ಅವರ ಒಂದು ದೊಡ್ಡ ಸಾಧನೆ. ಮಾನವ ಶರೀರದಲ್ಲಿನ ಕೆಲವು ಕ್ರಿಯೆಗಳಿಗೆ ಅಗತ್ಯವಾದ ಈ ರಾಸಾಯನಿಕ ವಸ್ತುವನ್ನು ಅವರು ಕೆನಡಾದಲ್ಲಿನ ಬ್ರಿಟಿಷ್ ಕೊಲಂಬಿಯ ವಿಶ್ವವಿದ್ಯಾಲಯದಲ್ಲಿದ್ದಾಗ ತಯಾರಿಸಿದರು.
ಜೀವಗಳ ಉತ್ಪತ್ತಿಯಲ್ಲಿ ಬಹುಮುಖ್ಯವಾದ ಪಾತ್ರವಹಿಸುವ ಕೃತಕ ವಂಶವಾಹಿಯನ್ನು (ಜೀನ್) ಹರಗೋವಿಂದ ಖೊರಾನ ಮತ್ತು ಅವರ ತಂಡದವರು ಪ್ರಯೋಗಾಲಯದಲ್ಲಿ ತಯಾರು ಮಾಡಿ ಇಡೀ ಜಗತ್ತಿನ ಶ್ಲಾಘನೆಗೆ ಪಾತ್ರರಾದರು. ಇಂಥ ವಂಶವಾಹಿ ವಸ್ತು ಮನುಷ್ಯರ ಮತ್ತು ಪ್ರಾಣಿಗಳ ಕರುಳಿನಲ್ಲಿ ಇರುತ್ತದೆ. ಅವರು ಕೃತಕ ವಂಶವಾಹಿಯನ್ನು ಕರುಳಿನಲ್ಲಿರುವ ‘ಎಶ್ಚೆರೀಚಿಯ ಕೋಲಿ’ ಎಂಬ ಬ್ಯಾಕ್ಟೀರಿಯಕ್ಕೆ ಸೇರಿಸಿದರು. ಅದು ಸಹಜವಾದ ವಂಶವಾಹಿಯಂತೇಯೇ ಕಾರ್ಯ ಮಾಡಿತು. ಅವರ ಕ್ಲೋನಿಂಗ್ ತಂತ್ರಜ್ಞಾನ ಇಂದು ಸಸ್ಯ ಮತ್ತು ಪ್ರಾಣಿಶಾಸ್ತ್ರಗಳಲ್ಲಿ ಪ್ರಖ್ಯಾತಿ ಪಡೆದಿವೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ತ್ರಿವಿಕ್ರಮ ಕಥೆಗಾರ

Mon Jan 9 , 2023
ತ್ರಿವಿಕ್ರಮ ಅವರು ಕಥೆಗಾರರಾಗಿ, ಕಾದಂಬರಿಕಾರರಾಗಿ, ನಾಟಕಕಾರರಾಗಿ, ಸಂಗೀತ ಮತ್ತು ಸಂಸ್ಕೃತಿಗಳ ಬರಹಗಾರಾಗಿ ಮತ್ತು ಗಮಕಿಗಳಾಗಿ ಹೆಸರಾದವರು. ಇಂದು ಅವರ ಸಂಸ್ಮರಣಾ ದಿನ. ತ್ರಿವಿಕ್ರಮ ಅವರು 1920ರ ಜುಲೈ 19ರಂದು ತುಮಕೂರಿನಲ್ಲಿ ಜನಿಸಿದರು. ತಂದೆ ಕೆ.ಎಸ್. ಕೃಷ್ಣಮೂರ್ತಿ. ತಾಯಿ ಜಯಲಕ್ಷ್ಮಮ್ಮ. ತ್ರಿವಿಕ್ರಮ ಅವರು ಪ್ರಾಥಮಿಕದಿಂದ ಪ್ರೌಢಶಾಲೆಯವರೆಗೆ ಬೆಂಗಳೂರಿನಲ್ಲಿ ಓದಿ, ಮೈಸೂರು ವಿಶ್ವವಿದ್ಯಾಲಯದಿಂದ ಬಿ.ಎ. ಪದವಿ ಪಡೆದರು. ತ್ರಿವಿಕ್ರಮ ಅವರು ಉದ್ಯೋಗಕ್ಕೆ ಸೇರಿದ್ದು ಕರ್ನಾಟಕ ಸರ್ಕಾರದ ಕಂಟ್ರೋಲರ್ ಕಚೇರಿಯಲ್ಲಿ. ನಂತರ ಕೇಂದ್ರ ಸರ್ಕಾರದ […]

Advertisement

Wordpress Social Share Plugin powered by Ultimatelysocial