ಹೆಚ್‌ಡಿಕೆ ಹಾವಿನ ತರಹ: ಜಮೀರ್ ಕಿಡಿ.

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಾವಿನ ತರಹ. ಅವನು ಯಾವಾಗ ಕಚ್ಚುತ್ತಾನೋ ಗೊತ್ತಿಲ್ಲ ಎಂದು ಕಾಂಗ್ರೆಸ್ ಶಾಸಕ ಜಮೀರ್ ಅಹಮದ್ ಖಾನ್ ಕುಮಾರಸ್ವಾಮಿ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದರು.
ಬೀದರ್‌ನ ಹುಮನಾಬಾದ್‌ನಲ್ಲಿ ನಡೆದ ಪ್ರಜಾಧ್ವನಿ ಯಾತ್ರೆಯಲ್ಲಿ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಬುಸ್ ಬುಸ್ ತರಹ ಎಂದು ಕೈಯಿಂದ ಹಾವಿನ ಎಡೆ ತೋರಿಸಿ ಹೇಳಿದ ಜಮೀರ್ ಅಹಮದ್ ಖಾನ್, ಯಾವಾಗ ಕಚ್ಚುತ್ತಾನೋ ಗೊತ್ತಿಲ್ಲ ಎಂದು ಏಕವಚನದಲ್ಲೇ ಕಿಡಿಕಾರಿದರು.ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಜತೆ ಈ ಹಿಂದೆ ನಾನು ದಿನದ ೨೪ ಗಂಟೆಯಲ್ಲಿ ೧೬ ಗಂಟೆ ಇರುತ್ತಿದ್ದೆ. ಅವನು ಏನು ಎಂಬುದು ನನಗೆ ಗೊತ್ತಿದೆ ಎಂದರು.ಕುಮಾರಸ್ವಾಮಿ ಇವತ್ತು ಸಿ.ಎಂ. ಇಬ್ರಾಹಿಂ ಮತ್ತು ಅವರ ಪುತ್ರನನ್ನು ಮುಗಿಸಲು ಹೊರಟ್ಟಿದ್ದಾರೆ. ಇಬ್ರಾಹಿಂಗೆ ಕಿವಿಯಲ್ಲಿ ಹೂವು ಇಟ್ಟಿದ್ದು, ಅವರ ಪುತ್ರ ಫಯಾಜ್‌ಗೆ ಹುಮನಾಬಾದ್ ಜೆಡಿಎಸ್ ಟಿಕೆಟ್ ಕೊಟ್ಟು ಬಲಿಕಾ ಭಕ್ರಾ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು.ಜೆಡಿಎಸ್ ಅಧ್ಯಕ್ಷ ಸಿ.ಎಂ. ಇಬ್ರಾಹಿಂ ಪುತ್ರನಿಗೆ ರಾಮನಗರ, ಹಾಸನ, ಹೊಳೆನರಸೀಪುರ, ಮಂಡ್ಯ ಬಿಟ್ಟು ಕೊಡಲಿ. ಫಯಾಜ್ ಪಾಪ ಒಳ್ಳೆಯ ಹುಡುಗ. ಇಬ್ರಾಹಿಂ ಕೂಡ ತಮ್ಮ ಮಗನನ್ನು ಚುನಾವಣೆಯಲ್ಲಿ ನಿಲ್ಲಿಸಿ ಬಲಿಕಾ ಭಕ್ರಾ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸರಕಾರ ಕುಡಿಯುವ ನೀರಿಗಾಗಿ 15ನೇ ಹಣಕಾಸಿನಲ್ಲಿ ಕೋಟಿ ಕೋಟಿ ಹಣ ಮೀಸಲಿಟ್ಟರು.

Mon Feb 6 , 2023
ಗಣದಿನ್ನಿ ಗ್ರಾಮದಲ್ಲಿ ಕೆರೆಯಲ್ಲಿ ಕುಡಿಯುವ ನೀರು ಕಲುಷಿತವಾದರೂ ಕೆರೆಯ ನೀರನ್ನು ಹೊರ ಹಾಕದೆ ಅದೇ ನೀರಿನಲ್ಲಿ ಮತ್ತೆ ಕೆರೆಯನ್ನು ತುಂಬಿ ಜನರ ಆರೋಗ್ಯದ ಜೊತೆ ಚೆಲ್ಲಾಟವಾಡುತ್ತಿರುವ ಪಿಡಿಒ ರಾಯಚೂರು ಜಿಲ್ಲೆ ಸಿರವಾರ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಗಣ ದಿನ್ನಿ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಇದ್ದರು ಅದೇ ಗಣದಿನ್ನಿ ಗ್ರಾಮದಲ್ಲಿ ಬಹುದಿನಗಳಿಂದ ಕುಡಿಯುವ ನೀರು ಕೆರೆಯಲ್ಲಿ ನಿಂತಿರುವುದರಿಂದ ಕೆರೆಯ ನೀರು ಹಸಿರು ಬಣ್ಣಕ್ಕೆ ತಿರುಗಿದ್ದು ಇಂತಹ ಕಲುಷಿತ ನೀರನ್ನು ಕುಡಿದು ಗ್ರಾಮದ […]

Advertisement

Wordpress Social Share Plugin powered by Ultimatelysocial