ಕುಚೇಷ್ಟೆಯಲ್ಲಿ ಕತ್ತರಿಯನ್ನು ಎದೆಗೆ ಇರಿದ ಪರಿಣಾಮ ವ್ಯಕ್ತಿ ಮೃತ

ಸಲೂನ್‌ವೊಂದರಲ್ಲಿ ಗೆಳೆಯರೊಂದಿಗೆ ಕೂಡಿ ಕುಳಿತಾಗಿ ಒಬ್ಬರಿಗೊಬ್ಬರು ಮಾತಿನ ಕುಚೇಷ್ಟೆಯಲ್ಲಿ ಕತ್ತರಿಯನ್ನು ಎದೆಗೆ ಇರಿದ ಪರಿಣಾಮ ವ್ಯಕ್ತಿಯೋರ್ವ ಮೃತಪಟ್ಟ ಘಟನೆ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಆಸಂಗಿ ಗ್ರಾಮದಲ್ಲಿ ನಡೆದಿದೆ.ರಬಕವಿ-ಬನಹಟ್ಟಿ ತಾಲೂಕಿನ ಆಸಂಗಿ ಗ್ರಾಮದ ಸಲೂನ್ ಅಂಗಡಿ ಮಾಲಿಕ ಸದಾಶಿವ ಅಣ್ಣಪ್ಪ ನಾವಿ(19) ಎಂಬಾತನೊಂದಿಗೆ ದಿನಂಪ್ರತಿ ಆತನ ಗೆಳೆಯರು ಸಲೂನ್ ಅಂಗಡಿಯಲ್ಲಿ ಕುಳಿತು ಹರಟೆ, ಕುಚೇಷ್ಟೆ ಮಾಡುವದು ಸಹಜವಾಗಿತ್ತು. ವ್ಯಕ್ತಿಯೋರ್ವನ ಕಟಿಂಗ್ ಮಾಡುವ ಸಂದರ್ಭ ಆರೋಪಿ ಸದಾಶಿವನ ಗೆಳೆಯ ಸಾಗರ ಸೀನಪ್ಪ ಅವಟಿ(23) ಕುಚೇಷ್ಟೆ ಮಾಡುವ ಸಂದರ್ಭ ಕೈಯಲ್ಲಿದ್ದ ಕತ್ತರಿಯನ್ನೇ ಎದೆಗೆ ಇರಿದ ಪರಿಣಾಮ ಹೃದಯಭಾಗಕ್ಕೆ ತೀವ್ರ ಗಾಯಗೊಂಡು ಅಲ್ಲಿಯೇ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ.ನಂತರ ರಬಕವಿ-ಬನಹಟ್ಟಿ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ.ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ ಘಟನೆ ನಡೆದಿದೆ.ಮೃತ ದುರ್ದೈವಿ ಸಾಗರ ಉತ್ತಮ ಕಬ್ಬಡ್ಡಿ ಹಾಗು ಕ್ರಿಕೆಟ್ ಆಟಗಾರನಾಗಿದ್ದನು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಎ. ದೇವರಳ್ಳಿಯ ಸದಸ್ಯೆ ಮಮತ ಹಣಕ್ಕೆ ಬೇಡಿಕೆ ಇಟ್ಟು ನಂಬಿಕೆ ದ್ರೋಹ

Sat May 28 , 2022
ದಲಿತ ಗ್ರಾ. ಪಂ ಅಧ್ಯಕ್ಷೆಗೆ ಅನ್ಯಾಯ,ಸದಸ್ಯನ ಮನೆ ಮುಂದೆ ಧರಣಿ ಚಾಮರಾಜನಗರದ ಗೌಡಳ್ಳಿ ಗ್ರಾ. ಪಂ ಅಧ್ಯಕ್ಷೆ ಅಶ್ವಿನಿಗೆ ಅನ್ಯಾಯ ಸದಸ್ಯರ ಮನೆಮುಂದೆ ಧರಣಿ ನಡೆಸುತ್ತಿರುವ ಅಧ್ಯಕ್ಷೆ ಅಶ್ವಿನಿ ಎ. ದೇವರಹಳ್ಳಿ ಸದಸ್ಯೆ ಮಮತರವರ ಮನೆ ಮುಂದೆ 2ದಿನಗಳಿಂದ ಪ್ರತಿಭಟನೆ ಗ್ರಾ . ಪಂ ಅಧ್ಯಕ್ಷೆ ಅಶ್ವಿನಿ ರವರ ವಿರುದ್ದ ಸದಸ್ಯರು ಅವಿಶ್ವಾಸ ಮಂಡನೆ ಮಮತರವರು ಅಶ್ವಿನಿ ರವರ ಪರವಾಗಿರುವುದಾಗಿ ಹೇಳಿ ನಂಬಿಕೆ ದ್ರೋಹ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡನೆ […]

Advertisement

Wordpress Social Share Plugin powered by Ultimatelysocial