ದೇಶವನ್ನು ಸತ್ಯನಾಶ ಮಾಡಿದ್ದು ಗಾಂಧಿ, ಗೋಡ್ಸೆಗೆ ನಮಸ್ಕಾರ ಎಂದ ಸಂತ: ಧರ್ಮ ಸಂಸದ್‌ನಲ್ಲಿ ಚಪ್ಪಾಳೆಗಳ ಸುರಿಮಳೆ

VIDEO: ದೇಶವನ್ನು ಸತ್ಯನಾಶ ಮಾಡಿದ್ದು ಗಾಂಧಿ, ಗೋಡ್ಸೆಗೆ ನಮಸ್ಕಾರ ಎಂದ ಸಂತ: ಧರ್ಮ ಸಂಸದ್‌ನಲ್ಲಿ ಚಪ್ಪಾಳೆಗಳ ಸುರಿಮಳೆ

ರಾಯ್ಪುರ್‌ (ಛತ್ತೀಸ್‌ಗಢ): ಭಾರತ ದೇಶವನ್ನು ಹಾಳು ಮಾಡಿದವರೇ ಗಾಂಧಿ. 1947ರಲ್ಲಿ ದೇಶ ವಿಭಜನೆಯಾಗಲು ಅವರೇ ಕಾರಣ, ಇಲ್ಲದಿದ್ದರೆ ದೇಶ ಸುಭೀಕ್ಷವಾಗಿರುತ್ತಿತ್ತು ಎನ್ನುವ ಮೂಲಕ ಗಾಂಧಿಯನ್ನು ನಿಂದಿಸಿ, ಅವರ ಹಂತಕ ನಾಥೂರಾಮ್ ಗೊಡ್ಸೆಯನ್ನು ಮಹಾರಾಷ್ಟ್ರದ ಸಂತ ಕಾಲಿಚರಣ್‌ ಹಾಡಿ ಹೊಗಳಿರುವ ಘಟನೆ ರಾಯ್ಪುರದಲ್ಲಿ ನಡೆದ ಧರ್ಮ ಸಂಸತ್ತಿನಲ್ಲಿ ನಡೆದಿದೆ.

ಗಾಂಧಿ ದೇಶವನ್ನು ಸತ್ಯನಾಶ ಮಾಡಿದರು. ಅವರನ್ನು ಕೊಂದ ಗೋಡ್ಸೆಗೆ ನಾನು ದೊಡ್ಡ ನಮಸ್ಕಾರ ಮಾಡುತ್ತೇನೆ ಎಂದರು. ಇದರ ಜತೆಗೆ, ‘ದೇಶದ ಆಡಳಿತದ ಚುಕ್ಕಾಣಿ ಹಿಡಿಯುವ ವ್ಯಕ್ತಿ ಕಟ್ಟಾ ಹಿಂದೂ ಧರ್ಮೀಯನೇ ಆಗಿರಬೇಕು, ಶಾಸಕ, ಸಂಸದ ಎಲ್ಲರೂ ಹಿಂದೂ ಧರ್ಮಿಯಾಗಿರಬೇಕು. ದೇಶದಲ್ಲಿ ಯಾರು ಮತ ಚಲಾಯಿಸುವುದಿಲ್ಲವೋ ಅಂಥವರು ಪರೋಕ್ಷವಾಗಿ ಇಸ್ಲಾಂಗೆ ಬೆಂಬಲ ನೀಡಿದ ಹಾಗೆಯೇ ಆಗುತ್ತದೆ. ಈ ಮೂಲಕ ಇಸ್ಲಾಂ ಪ್ರಬಲಗೊಳ್ಳಲು ದಾರಿ ಮಾಡಿ ಕೊಡುತ್ತೀರಿ ಎಂದು ಹೇಳಿದರು.

ಈ ಮಾತು ಇಡೀ ಸಭೆಯಲ್ಲಿ ಭಾರಿ ಅಲ್ಲೋಲ ಕಲ್ಲೋಲವನ್ನೇ ಸೃಷ್ಟಿಸಿ, ಭಾರಿ ವಿವಾದದ ಅಲೆಯನ್ನೂ ಹುಟ್ಟುಹಾಕಿದೆ. ಈ ಹೇಳಿಕೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ರಾಜ್ಯ ಗೋಸೇವಾ ಆಯೋಗದ ಅಧ್ಯಕ್ಷರಾದ ಮಹಾಂತ್ ರಾಮಸುಂದರ್ ದಾಸ್‌ ವೇದಿಕೆ ಬಿಟ್ಟು ಹೋದ ಘಟನೆಯೂ ನಡೆಯಿತು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಡಿ.ಕೆ. ಶಿವಕುಮಾರ್​ಗೆ ಬ್ರೇಕ್ ಹಾಕಲು ದೆಹಲಿಯಲ್ಲಿ ಯತ್ನ: ಹೈಕಮಾಂಡ್​ಗೆ ದೂರಿತ್ತ ಮಾಜಿ ಸಿಎಂ ಸಿದ್ದರಾಮಯ್ಯ ಆಪ್ತ ಶಾಸಕರು

Mon Dec 27 , 2021
ಚುನಾವಣೆ ವರ್ಷ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್​ನಲ್ಲಿ ನಾಯಕತ್ವದ ಪೈಪೋಟಿ ತೀವ್ರಗೊಂಡಿದ್ದು, ಈ ಬೆಳವಣಿಗೆ ಪಕ್ಷದ ಹೈಕಮಾಂಡ್​ಗೆ ಕಸಿವಿಸಿ ತಂದಿದೆ. ರಾಜ್ಯದ ರಾಜಕೀಯ ಇತಿಹಾಸದಲ್ಲಿ ಪಾದಯಾತ್ರೆಗಳು ರಾಜಕೀಯ ನಾಯಕರ ಇಮೇಜ್ ಹೆಚ್ಚಿಸಿದ ಉದಾಹರಣೆ ಇದೆ. ಇದೇ ಹಾದಿಯಲ್ಲಿ ಚುನಾವಣೆಗೆ ಮುನ್ನ ನಾಯಕತ್ವ ಚಹರೆ ಕಟ್ಟಿಕೊಳ್ಳಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪಾದಯಾತ್ರೆ ಸಂಘಟಿಸಿದ್ದಾರೆ. ಇದು ಸಿದ್ದರಾಮಯ್ಯ ಆಪ್ತ ಶಾಸಕರಿಗೆ ಸಹ್ಯವೆನಿಸಿಲ್ಲ. ಹಳೇ ಮೈಸೂರು ಭಾಗವನ್ನು ಗಮನದಲ್ಲಿಟ್ಟುಕೊಂಡು ಶಿವಕುಮಾರ್ ಪಾದಯಾತ್ರೆಗೆ ವೇಳಾಪಟ್ಟಿ ಸಿದ್ಧಮಾಡಿಕೊಂಡು ಪೂರ್ವಭಾವಿ ಸಿದ್ಧತಾ […]

Advertisement

Wordpress Social Share Plugin powered by Ultimatelysocial