ಮತಾಂತರ ನಿಷೇಧ ಕಾಯ್ದೆ  ಬಿಜೆಪಿ ಸಂಘಟನೆಗಳ ನಾಯಕರನ್ನು ಖುಷಿಪಡಿಸಲು ತರಲಾಗಿದೆ:ಹೆಚ್‌ .ಡಿ ಕುಮಾರಸ್ವಾಮಿ

ರಿಮೋಟ್‌ ಕಂಟ್ರೋಲ್‌ನಂತೆ ಬಿಜೆಪಿಯನ್ನು ನಿಯಂತ್ರಿಸುವ ಗರ್ಭಗುಡಿಯ ಸಂಘಟನೆಗಳ ಒತ್ತಡದಿಂದ ರಾಜ್ಯ ಸರ್ಕಾರ ಮತಾಂತರ ನಿಷೇಧ ಮಸೂದೆ ಮಂಡಿಸಿದೆ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಹೆಚ್‌.ಡಿ. ಕುಮಾರಸ್ವಾಮಿ ಆರೋಪಿಸಿದರು.ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಈ ಮಸೂದೆಯನ್ನು ಬಿಜೆಪಿ ಮೇಲೆ ಹಿಡಿತವುಳ್ಳ ಸಂಘಟನೆಗಳ ನಾಯಕರನ್ನು ಖುಷಿಪಡಿಸಲು ತರಲಾಗಿದೆ. ಇದರಲ್ಲಿ ಜನರ ಹಿತ ರಕ್ಷಿಸುವ ಉದ್ದೇಶವೂ ಇಲ್ಲ ಎಂದರು.ತರಾತುರಿಯಲ್ಲಿ ಏಕೆ ಮಂಡಿಸಿದ್ದಾರೆ? ಜನವರಿಯಲ್ಲಿ ನಡೆಯುವ ಅಧಿವೇಶನದಲ್ಲಿ ಮಂಡಿಸಲು ಅವಕಾಶವಿತ್ತು. ಮತಾಂತರ ನಿಷೇಧ ಮಸೂದೆಯನ್ನು ಜೆಡಿಎಸ್‌ ವಿರೋಧಿಸಲಿದೆ. ಇದರಲ್ಲಿ ಯಾವುದೇ ರಾಜಿ ಇಲ್ಲ’ ಎಂದರು.ಈ ಹಿಂದೆ ಬಿಜೆಪಿ ಸರ್ಕಾರ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೊಳಿಸಿತು. ಅದರಿಂದ ಜನರಿಗೆ ಏನು ಅನುಕೂಲವಾಗಿದೆ? ಗೋಶಾಲೆಗಳನ್ನು ಎಲ್ಲಿ ತೆರೆದಿದ್ದಾರೆ? ಗೋವುಗಳನ್ನು ಸಾಕುವ ರೈತರ ಬದುಕು ಏನಾಗಿದೆ? ಗೋರಕ್ಷಣೆಯ ಹೆಸರಿನಲ್ಲಿ ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದ್ದಾರೆ ಎಂದು ದೂರಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

'ಸಿದ್ದರಾಮಯ್ಯ ಗೊಬೆಲ್‌ ಇದ್ದಂತೆ':ಹೆಚ್.ಡಿ ಕುಮಾರಸ್ವಾಮಿ

Thu Dec 23 , 2021
ಹಿಟ್ಲರ್‌ ಆಸ್ಥಾನದಲ್ಲಿ ಸುಳ್ಳು ಹೇಳುವುದನ್ನೇ ಕಾಯಕ ಮಾಡಿಕೊಂಡಿದ್ದ ಗೊಬೆಲ್‌ನಂತೆಯೇ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಸುಳ್ಳು ಹೇಳುತ್ತಿದ್ದಾರೆ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಟೀಕಿಸಿದ್ದಾರೆ.ಸರಣಿ ಟ್ವೀಟ್‌ ಮಾಡಿರುವ ಅವರು, ‘ಜೆಡಿಎಸ್‌ ಜಟ್ಟಿಗಳನ್ನು ಸೃಷ್ಟಿಸುವ ಪಕ್ಷ. ಜಟ್ಟಿಗಳನ್ನು ಎಗರಿಸಿಕೊಂಡು ಹೋಗುವ ‘ಬ್ರೋಕರಪ್ಪ’ನ ಕುತಂತ್ರಕ್ಕೆ ಹೆದರುವ ಪ್ರಶ್ನೆಯೇ ಇಲ್ಲ. ಹಿಂದೆ ದೇವರಾಜ ಅರಸು ಅವರಿಗೆ ನರಕಯಾತನೆ ನೀಡಿದ್ದ ಕಾಂಗ್ರೆಸ್‌, ಈಗ ‘ಅಭಿನವ ಅರಸು’ ಎಂಬ ಪುಂಗಿ ಬಿಡುವ […]

Advertisement

Wordpress Social Share Plugin powered by Ultimatelysocial