ಕಳೆದ ಕೆಲ ದಿನಗಳಿಂದ ವಿಪಕ್ಷ ನಾಯಕ ಸಿದ್ದರಾಮಯ್ಯು ಮತ್ತು ಮಾಜಿ ಮುಖ್ಯಮಂತ್ರಿ ಹೆಚ್. ಡಿ ಕುಮಾರಸ್ವಾಮಿ ಮಧ್ಯ ಮಾತಿನ ಸಮರ ನಡೆಯುತ್ತಿದೆ. ಅದರ ನಡುವೆ ಇಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕಾಂಗ್ರೆಸ್ ಸೇರಲು ಮುಂದಾಗಿದ್ದಾರೆ ಎಂದು ಹೆಚ್.ಡಿ. ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ. ಹೆಚ್.ಡಿ. ಕುಮಾರಸ್ವಾಮಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನವರ ಕುರಿತು ಗಂಭೀರ ಆರೋಪ ಮಾಡಿದ್ದಾರೆ. ಸಿದ್ದರಾಮಯ್ಯ ದಿಢೀರ್ ಅಂತ ಸೋನಿಯಾ ಗಾಂಧಿ ಭೇಟಿ ಆಗಿದ್ದೇಕೆ.? ಯಡಿಯೂರಪ್ಪ–ಸಿದ್ದರಾಮಯ್ಯ ಭೇಟಿಯ ರಹಸ್ಯವೇನು.? ಯಡಿಯೂರಪ್ಪ ಜೊತೆಗಿನ ಮಾತುಕತೆ ಸೋನಿಯಾ ಗಾಂಧಿಗೆ ತಿಳಿಸಲು ಸಿದ್ದರಾಮಯ್ಯ ದೆಹಲಿಗೆ ತೆರಳಿದ್ದು ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೇ, ಸಿದ್ದರಾಮಯ್ಯ ಮತ್ತು ಬಿಎಸ್ವೈ ಭೇಟಿಯಿಂದಲೇ ರಾಜ್ಯದಲ್ಲಿ ಐಟಿ ರೇಡ್ ಆಯ್ತಾ? ಬಿಎಸ್ವೈ ಆಪ್ತರ ಮೇಲೆ ಐಡಿ ರೇಡ್ ಆಗಿದ್ದೇ ಈ ಕಾರಣಕ್ಕಾ.? ಎಂಬ ಅನುಮಾನ ಹುಟ್ಟಿಕೊಂಡಿವೆ. ಹಾಗೂ, ಬಿ.ಎಸ್ ಯಡಿಯೂರಪ್ಪ ಸಿದ್ದರಾಮಯ್ಯ ಜೊತೆಗಿನ ಮಾತುಕತೆಯ ಬಗ್ಗೆ ಬಿಜೆಪಿ ಹೈಕಮಾಂಡ್ಗೆ ಮಾಹಿತಿ ಸಿಕ್ಕಿದೆ. ಹೀಗಾಗಿಯೇ ಬಿಎಸ್ವೈ ಆಪ್ತರ ಮೇಲೆ ಐಟಿ ರೇಡ್ ಆಗಿದೆ ಎಂದು ಮೈಸೂರಲ್ಲಿ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಸ್ಪೋಟಕ ಹೇಳಿಕೆ ನೀಡಿದ್ದಾರೆ.
ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಕಾಂಗ್ರೆಸ್ ಸೇರಲು ಮುಂದಾಗಿದ್ದಾರೆ;ಹೆಚ್.ಡಿ.ಕೆ
Please follow and like us: