ಗುಸುಗುಸು ಮಾತಾಡಿದವರು ನಿಮ್ಮ ಪಟಾಲಂ ಅಲ್ವಾ?: ಸಿದ್ದರಾಮಯ್ಯಗೆ ಕುಮಾರಸ್ವಾಮಿ ಪ್ರಶ್ನೆ.?

ಕಾಂಗ್ರೆಸ್ ವಕ್ತಾರ ವಿ.ಎಸ್ ಉಗ್ರಪ್ಪ ಅವರೊಂದಿಗೆ ಮಾಧ್ಯಮ ಸಂಯೋಜಕ ಸಲೀಂ ಅವರು ಡಿ.ಕೆ ಶಿವಕುಮಾರ್ ನಡೆಸಿದ ಗುಸುಗುಸು ಮಾತು ರಾಜಕೀಯ ಸಂಚಲನವನ್ನೇ ಸೃಷ್ಟಿ ಮಾಡಿದೆ. ಈ ಘಟನೆ ಬಗ್ಗೆ ಸಿದ್ದರಾಮಯ್ಯ ಕಡೆಗೆ ಬೊಟ್ಟು ಮಾಡಿ ತೋರಿಸಿರುವ ಮಾಜಿ ಸಿಎಂ ಕುಮಾರಸ್ವಾಮಿ, ಗುಟ್ಟು ರಟ್ಟು ಮಾಡಿದವರು ನಿಮ್ಮ ಪಟಾಲಂ ಅಲ್ವಾ ಎಂದು ಪ್ರಶ್ನೆ ಮಾಡಿದ್ದಾರೆ. ಡಿ.ಕೆ ಶಿವಕುಮಾರ್ ಅವರ ಬಗ್ಗೆ ಒಂದು ವಿಡಿಯೋ ಬಂದಿದೆ. ಆ ವಿಡಿಯೋ ನೀವೇ ಬಿಟ್ಟಿದ್ದಾ? ಅಥವಾ ಅವರೇ ಹೇಳಿದ್ದಾ ಗೊತ್ತಿಲ್ಲ. ಅವರೆಲ್ಲ ನಿಮ್ಮ ಪಟಾಲಮ್ ಗಳೇ ಅಲ್ವಾ? ಡಿಕೆಶಿ ಪಕ್ಷ ಕಟ್ಟಲು ದುಡಿಯುತ್ತಿದ್ದಾರೆ. ಹಗಲು-ರಾತ್ರಿ ಓಡಾಡಿಕೊಂಡಿದ್ದಾರೆ. ಅವರನ್ನು ಸಿಎಂ ಮಾಡ್ತೀರಾ ನೀವೆಲ್ಲ? ಸಿದ್ದರಾಮಯ್ಯ ಅವರೇ..2013ರ ಚುನಾವಣೆಯೇ ನನ್ನ‌ ಕೊನೆ ಚುನಾವಣೆ ಎಂದು ತಾವು ಹೇಳಿದ್ರಿ. ಆದ್ರೆ ಈಗ ಇನ್ನೂ ತಮಗೆ ಅಧಿಕಾರದ ಆಸೆ ಹೋಗಿಲ್ಲ ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಬಾರಿ ಅಗ್ನಿ ದುರಂತ : 46 ಮಂದಿ ಸಜೀವ ದಹನ

Thu Oct 14 , 2021
ತೈವಾನ್: ತೈವಾನ್ ನಲ್ಲಿ ಬಾರಿ ದುರಂತ ಸಂಭವಿಸಿದೆ. ಗುರುವಾರ ಮುಂಜಾನೆ ಸಂಭವಿಸಿದ ಈ ಅಗ್ನಿ ದುರಂತದಲ್ಲಿ 46 ಜನರು ಸಜೀವವಾಗಿ ದಹನವಾಗಿದ್ದಾರೆ. 79 ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಈ ಪೈಕಿ 14 ಜನರ ಸ್ಥಿತಿ ಗಂಭೀರವಾಗಿದೆ. ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ. ತೈವಾನ್ ನ ಕೌಹ್ಸಿಯುಂಗ್ ನಗರದ 13 ಅಂತಸ್ತಿನ ಟವರ್ ಬ್ಲಾಕ್ ನಲ್ಲಿ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಬೆಂಕಿ ಹೊತ್ತಿಕೊಂಡಿದೆ ಎಂದು ಸ್ಥಳೀಯ ಅಗ್ನಿಶಾಮಕ ಇಲಾಖೆ ತಿಳಿಸಿದೆ. […]

Advertisement

Wordpress Social Share Plugin powered by Ultimatelysocial