ಕಾಂಗ್ರೆಸ್ ವಕ್ತಾರ ವಿ.ಎಸ್ ಉಗ್ರಪ್ಪ ಅವರೊಂದಿಗೆ ಮಾಧ್ಯಮ ಸಂಯೋಜಕ ಸಲೀಂ ಅವರು ಡಿ.ಕೆ ಶಿವಕುಮಾರ್ ನಡೆಸಿದ ಗುಸುಗುಸು ಮಾತು ರಾಜಕೀಯ ಸಂಚಲನವನ್ನೇ ಸೃಷ್ಟಿ ಮಾಡಿದೆ. ಈ ಘಟನೆ ಬಗ್ಗೆ ಸಿದ್ದರಾಮಯ್ಯ ಕಡೆಗೆ ಬೊಟ್ಟು ಮಾಡಿ ತೋರಿಸಿರುವ ಮಾಜಿ ಸಿಎಂ ಕುಮಾರಸ್ವಾಮಿ, ಗುಟ್ಟು ರಟ್ಟು ಮಾಡಿದವರು ನಿಮ್ಮ ಪಟಾಲಂ ಅಲ್ವಾ ಎಂದು ಪ್ರಶ್ನೆ ಮಾಡಿದ್ದಾರೆ. ಡಿ.ಕೆ ಶಿವಕುಮಾರ್ ಅವರ ಬಗ್ಗೆ ಒಂದು ವಿಡಿಯೋ ಬಂದಿದೆ. ಆ ವಿಡಿಯೋ ನೀವೇ ಬಿಟ್ಟಿದ್ದಾ? ಅಥವಾ ಅವರೇ ಹೇಳಿದ್ದಾ ಗೊತ್ತಿಲ್ಲ. ಅವರೆಲ್ಲ ನಿಮ್ಮ ಪಟಾಲಮ್ ಗಳೇ ಅಲ್ವಾ? ಡಿಕೆಶಿ ಪಕ್ಷ ಕಟ್ಟಲು ದುಡಿಯುತ್ತಿದ್ದಾರೆ. ಹಗಲು-ರಾತ್ರಿ ಓಡಾಡಿಕೊಂಡಿದ್ದಾರೆ. ಅವರನ್ನು ಸಿಎಂ ಮಾಡ್ತೀರಾ ನೀವೆಲ್ಲ? ಸಿದ್ದರಾಮಯ್ಯ ಅವರೇ..2013ರ ಚುನಾವಣೆಯೇ ನನ್ನ ಕೊನೆ ಚುನಾವಣೆ ಎಂದು ತಾವು ಹೇಳಿದ್ರಿ. ಆದ್ರೆ ಈಗ ಇನ್ನೂ ತಮಗೆ ಅಧಿಕಾರದ ಆಸೆ ಹೋಗಿಲ್ಲ ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಗುಸುಗುಸು ಮಾತಾಡಿದವರು ನಿಮ್ಮ ಪಟಾಲಂ ಅಲ್ವಾ?: ಸಿದ್ದರಾಮಯ್ಯಗೆ ಕುಮಾರಸ್ವಾಮಿ ಪ್ರಶ್ನೆ.?
Please follow and like us: