ಹಿಟ್ಲರ್ ಕಲ್ಯಾಣ’ ಧಾರಾವಾಹಿಯಲ್ಲಿ ಲೀಲಾ, Aj ಮಧ್ಯೆ ಫೋಟೋ ಅಸ್ತ್ರ, ಇನ್ನಷ್ಟು ‘ಅಂತರ’ ಪಕ್ಕಾ?.

ಅಂತೂ ಎಜೆ ( ಅಭಿರಾಮ್ ಜಯರಾಮ್ ), ಲೀಲಾ ಒಂದಾಗಿದ್ದಾರೆ. ಆದರೆ ಇನ್ನೊಮ್ಮೆ ಲೀಲಾಗೆ ಎಜೆ ತಾಳಿ ಕಟ್ಟುವ ಶುಭಯೋಗ ಬಂದಿಲ್ಲ. ಇನ್ನೊಂದು ಕಡೆ ಅಜ್ಜಿ, ಮೊಮ್ಮಗು ಬರಬೇಕು ಎನ್ನುವ ಆಶಯದ ಜೊತೆಗೆ ಅಂತರಾಳ ಹೆದರಿಕೆಯಲ್ಲಿ ದಿನ ಕಳೆಯುತ್ತಿದ್ದಾರೆ. ಲೀಲಾ, ಎಜೆಯನ್ನು ಹೇಗಾದರೂ ಮಾಡಿ ದೂರ ಮಾಡಬೇಕು ಅಂತ ದುರ್ಗಾ ಒಂದಾದ ಮೇಲೆ ಒಂದು ಪ್ಲ್ಯಾನ್ ಹಾಕುತ್ತಿದ್ದಾಳೆ.ಈಗ ಎಜೆ, ಲೀಲಾಳನ್ನು ದೂರ ಮಾಡಲು ದುರ್ಗಾ ‘ಫೋಟೋ’ ಅಸ್ತ್ರ ಬಳಸಿದ್ದಾಳೆ. ಹುಡುಗನ ಜೊತೆ ಲೀಲಾ ಇರುವ ಫೋಟೋವನ್ನು ಮುಂದಿಟ್ಟುಕೊಂಡು ಲೀಲಾ ಮೇಲೆ ಎಜೆ ಇಟ್ಟಿರುವ ನಂಬಿಕೆಯನ್ನು ಒಡೆದು, ಇಬ್ಬರನ್ನು ದೂರ ಮಾಡಬೇಕು ಎನ್ನೋದು ದುಷ್ಟೆ ದುರ್ಗಾಳ ಮಹಾತಂತ್ರ.ಈ ಬಾರಿ ಕೂಡ ಎಜೆ ಸಿಟ್ಟಾಗಿ, ಲೀಲಾಳನ್ನು ಮನೆಯಿಂದ ದೂರ ಕಳಿಸುತ್ತಾನಾ ಅಂತ ಕಾದು ನೋಡಬೇಕಿದೆ. ಎಜೆ ಪದೇ ಪದೇ ಲೀಲಾಳನ್ನು ತಪ್ಪಾಗಿ ತಿಳಿದುಕೊಂಡಿದ್ದಾನೆ. ಸಾಕಷ್ಟು ಬಾರಿ ಲೀಲಾ ಮಾಡಿದ ಯಡವಟ್ಟನ್ನು ದೊಡ್ಡ ಅಪರಾಧ ಎಂಬಂತೆ ಪರಿಗಣಿಸಿದ್ದಾನೆ. ಇದರಿಂದ ಲೀಲಾ, ಎಜೆ ಸಾಕಷ್ಟು ಬಾರಿ ವಾದ ವಿವಾದ ಮಾಡಿಕೊಂಡಿದ್ದಾರೆ. ಈಗ ಲೀಲಾಳನ್ನು ಒಪ್ಪಿಕೊಂಡು, ಮನೆಗೆ ಮೂರು ಸೊಸೆ ಬಂದರೂ ಕೂಡ ಚಿರಯುವಕನ ರೀತಿ ಮೊದಲ ಬಾರಿಗೆ ಲವ್ ಆದಂತೆ ಎಜೆ ವರ್ತಿಸುತ್ತಿದ್ದಾನೆ. ಈಗ ದುರ್ಗಾ ಹೂಡಿರುವ ಫೋಟೋ ಅಸ್ತ್ರ ನೋಡಿ ಎಜೆ ಏನು ಹೇಳುತ್ತಾನೆ ಅಂತ ಕಾದು ನೋಡಬೇಕಿದೆ.ಎಜೆ, ಲೀಲಾ ಚೆನ್ನಾಗಿ ಬದುಕಿ ಬಾಳಬೇಕು ಅಂತ ಅಜ್ಜಿ ಕಾಯುತ್ತಿದ್ದಾಳೆ. ಆದರೆ ಈಗ ಅಂತರಾ ಬಂದಿದ್ದಾಳೆ. ನಿಜಕ್ಕೂ ಅಂತರಾ ರೀತಿ ಕಾಣುತ್ತಿರುವುದು ನಿಜಕ್ಕೂ ಅಂತರಾ? ಅಥವಾ ಬೇರೆ ಯಾರೋ ಎನ್ನೋದು ಬಹಿರಂಗ ಆಗಬೇಕಿದೆ. ನಿಜಕ್ಕೂ ಸತ್ತಿದ್ದರೆ ಅಂತರಾ ಸಾಯಲು ನಿಜವಾದ ಕಾರಣ ಏನು ಎಂಬುದು ಹೊರಗಡೆ ಬರುವುದು. ಮುಂದಿನ ದಿನಗಳಲ್ಲಿ ಹಿಂದಿನ ಕಥೆಗಳು ತೆರೆದಿಕೊಳ್ಳುವ ಸಾಧ್ಯತೆ ಜಾಸ್ತಿ ಇದೆ.ಲೀಲಾಳನ್ನು ದ್ವೇಷಿಸುವ ದುರ್ಗಾ ಮಾತ್ರ ಅಂತರಾಗೆ ಸಾಥ್ ಕೊಡುವ ಸಾಧ್ಯತೆ ಹೆಚ್ಚಿರುತ್ತದೆ. ಒಟ್ಟಿನಲ್ಲಿ ಮುಂದಿನ ದಿನಗಳಲ್ಲಿ ‘ಹಿಟ್ಲರ್ ಕಲ್ಯಾಣ’ ಧಾರಾವಾಹಿ ಎಪಿಸೋಡ್‌ಗಳು ಬಹಳ ರೋಚಕ ಆಗಿರಲಿವೆ.’ಹಿಟ್ಲರ್ ಕಲ್ಯಾಣ’ ಧಾರಾವಾಹಿಯಲ್ಲಿ ಮಲೈಕಾ ವಸುಪಾಲ್, ನಂದಿನಿ, ದೀಪಕ್ ರಾಜ್, ವಿದ್ಯಾ ಮೂರ್ತಿ, ನೇಹಾ ಪಾಟೀಲ್, ರವಿ ಭಟ್ ಮುಂತಾದವರು ನಟಿಸುತ್ತಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada


Please follow and like us:

Leave a Reply

Your email address will not be published. Required fields are marked *

Next Post

ಒಣ ಕಣ್ಣಿನ ಸಮಸ್ಯೆಗೆ ಇಲ್ಲಿದೆ ಆರ್ಯುವೇದದ ಪರಿಹಾರ!

Wed Mar 1 , 2023
ಒಣ ಕಣ್ಣಿನ ಸಮಸ್ಯೆಯನ್ನು ಶಮನಗೊಳಿಸಲು ಪ್ರಾಣ ಹೆಲ್ತ್​​ ಕೇರ್​ ಸೆಂಟರ್​​ ಆರೋಗ್ಯ ತಜ್ಞರಾದ ಡಿಂಪಲ್​​ ಜಂಗ್ಡಾರವರು ಕೆಲವು ಆರ್ಯುವೇದದ ಸಲಹೆಗಳನ್ನು ನೀಡುತ್ತಾರೆ. ಕೇವಲ ಮೂರು ಪದಾರ್ಥಗಳಿಂದ ನಿಮ್ಮ ಒಣ ಕಣ್ಣಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ. ​​ಇಂದಿನ ಬದಲಾದಜೀವನಶೈಲಿಯಿಂದಾಗಿ ಸಾಕಷ್ಟು ಹೊತ್ತು ಮೊಬೈಲ್​ ಫೋನ್​, ಲ್ಯಾಪ್​​ ಟಾಪ್​​ಗಳಲ್ಲಿ ಸಮಯ ಕಳೆಯುವುದು ಸಾಮಾನ್ಯವಾಗಿದೆ. ಇದು ಕಾಲಕ್ರಮೇಣ ಕಣ್ಣಿನ ಆರೋಗ್ಯವನ್ನು ಕೆಡಿಸಬಹುದು. ಕಣ್ಣಿನ ದೃಷ್ಟಿ ದೋಷದಿಂದ ಹಿಡಿದು, ತಲೆನೋವು, ಒನ ಕಣ್ಣಿನ ಮುಂತಾದ ಸಮಸ್ಯೆಗಳಿಗೆ […]

Advertisement

Wordpress Social Share Plugin powered by Ultimatelysocial