ಹೋಂಡಾ ದ್ವಿಚಕ್ರ ವಾಹನಗಳ ಮಾರಾಟ!

ಮಂಗಳೂರು, ಫೆ.14: ಹೋಂಡಾ ದ್ವಿಚಕ್ರ ವಾಹನಗಳ ಮಾರಾಟ ಹಾಗೂ ಸೇವೆಯಲ್ಲಿ ಕರಾವಳಿಯಾದ್ಯಂತ ಮುಂಚೂಣಿಯಲ್ಲಿರುವ ಹಾಗೂ ಹಲವು ವರ್ಷಗಳಿಂದ ಗ್ರಾಹಕರಿಗೆ ತೃಪ್ತಿದಾಯಕ ಸೇವೆ ನೀಡುತ್ತ್ತಿರುವ ಕಾಂಚನ ಮೋಟಾರ್ಸ್‌ನಲ್ಲಿ ಹೊಚ್ಚ ಹೊಸ ಆಯಕ್ಟಿವಾ H-Smart ದ್ವಿಚಕ್ರ ವಾಹನ ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಯಿತು.

ಈ ಸಂದರ್ಭದಲ್ಲಿ ಹೊಸ ದ್ವಿಚಕ್ರ ವಾಹನದ ಮೊದಲ ಗ್ರಾಹಕರಿಗೆ ಕೀಲಿ ಕೈಯನ್ನು ಹಸ್ತಾಂತರಿಸಲಾಯಿತು.

ಆಯಕ್ಟಿವಾ H-Smart ದ್ವಿಚಕ್ರ ವಾಹನವು ಹೊಸ ಟೆಕ್ನಾಲಜಿ ಹಾಗೂ ತಂತ್ರಜ್ಞಾನದಿಂದ ತಯಾರಿಸಲ್ಪಟ್ಟಿದ್ದು, ಇದು ಸ್ಮಾರ್ಟ್ ಕೀಯನ್ನು ಹೊಂದಿದ್ದು ಇದರ ಪ್ರಮುಖ ವೈಶಿಷ್ಟ. ದ್ವಿಚಕ್ರ ವಾಹನ ಸವಾರರಿಗೆ ಸುಲಭ ರೀತಿಯಲ್ಲಿ ವಾಹನ Start/ Stop, ಸೀಟ್, ಫ್ಯೂಲ್‌ಕಾಪ್ ಹಾಗೂ ಹ್ಯಾಂಡಲ್ ಲಾಕ್‌ಅನ್ನು ಸ್ಮಾರ್ಟ್ ಕೀಯ ಮೂಲಕ ಅನ್‌ಲಾಕ್ ಮಾಡಬಹುದಾಗಿದೆ. ಈ ದ್ವಿಚಕ್ರ ವಾಹನದ ಸಂಪೂರ್ಣ ಸುರಕ್ಷತೆಗಾಗಿ ಆಯಂಟಿ ತೆಫ್ಟ್ ಸಿಸ್ಟಮ್ ಅಳವಡಿಸಲಾಗಿದ್ದು, ಇದು 6ವಿವಿಧ ಬಣ್ಣಗಳಲ್ಲಿ ಲಭ್ಯವಿರುತ್ತದೆ. ಇದರ ಶೋರೂಂ ಬೆಲೆ 82,477 ರೂ. ನಿಂದ ಆರಂಭವಾಗುತ್ತದೆ.

ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರಿಗೆ ವಿಶೇಷ ಕೊಡುಗೆ: ಡಾ. ಬಿ.ಆರ್.ಅಂಬೇಡ್ಕರ್‌ಅಭಿವೃದ್ಧಿ ನಿಗಮದಿಂದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಸಮುದಾಯದ ಜನರ ಅಭಿವೃದ್ಧಿಗಾಗಿ ದ್ವಿಚಕ್ರ/ತ್ರಿಚಕ್ರ ವಾಹನವನ್ನು 50,000 ರೂ. ಸಬ್ಸಿಡಿ ಹಾಗೂ 20,000 ರೂ. ಸಾಲದ ಮೂಖಾಂತರ ನೀಡಲಾಗುವುದು. ಈ ಯೋಜನೆಗೆ ಸಂಬಂಧಿಸಿದಂತೆ ಕಾಂಚನಾ ಹೋಂಡಾದಿಂದ ವಾಹನಗಳ ಮೇಲೆ ಹೆಚ್ಚುವರಿ ರಿಯಾಯಿತಿ ಹಾಗೂ ಆಫರ್‌ಗಳನ್ನು ನೀಡಲಾವುದು.

ಪ್ಯಾಬ್ಯುಲೆಸ್ ಫೆಬ್ರವರಿ ಫಂಡಾ ಆಫರ್: ಕಾಂಚನ ಹೋಂಡಾ ಸಂಸ್ಥೆಯು ತಮ್ಮ ಗ್ರಾಹಕರಿಗೆ ಪ್ರತೀ ತಿಂಗಳು ಹಲವಾರು ರೀತಿಯ ಆಫರ್‌ಗಳನ್ನು ಪರಿಚಯಿಸುತ್ತಾ ಬಂದಿದ್ದು, ಇದೀಗ ಫೆಬ್ರವರಿ ತಿಂಗಳಲ್ಲಿ ‘ಪ್ಯಾಬ್ಯುಲೆಸ್ ಫೆಬ್ರವರಿ ಫಂಡಾ’ ಎಂಬ ಆಫರ್‌ನ್ನು ಪರಿಚಯಿಸಿದೆ.

ಈ ಆಫರ್‌ನ ಪ್ರಕಾರ ಗ್ರಾಹಕರು ಯಾವುದೇ ಹೋಂಡಾ ದ್ವಿಚಕ್ರ ವಾಹನಗಳನ್ನು ಖರೀದಿಸಿದಲ್ಲಿ ದುಬೈ/ಗೋವಾ/ಮುನ್ನಾರ್‌ಗೆ ಹಾಲಿಡೇ ಟ್ರಿಪ್ ಗೆಲ್ಲಬಹುದಾಗಿದೆ. ಪ್ರತೀ ವಾರದ ಡ್ರಾದಲ್ಲಿ ಮಡಿಕೇರಿ/ ಚಿಕ್ಕಮಗಳೂರಿಗೆ ಟ್ರಿಪ್ ಗೆಲ್ಲಬಹುದಾಗಿದೆ.

ಗ್ರಾಹಕರಿಗೆ ವಿಶೇಷ ರಿಯಾಯತಿಯ ಬಡ್ಡಿದರ, ಅತೀ ಕಡಿಮೆ ದಾಖಲಾತಿಗಳೊಂದಿಗೆ ಸ್ಥಳದಲ್ಲೇ ಸಾಲ ಮಂಜೂರಾತಿ ಮಾಡಿಕೊಡಲಾಗುವುದು ಹಾಗೂ ಸ್ಪಾಟ್ ಬುಕ್ಕಿಂಗ್ ಮಾಡಿದಲ್ಲಿ ಫುಲ್‌ಟ್ಯಾಂಕ್ ಪೆಟ್ರೋಲ್/ಬ್ರಾಂಡೆಡ್ ಶರ್ಟ್/ಬ್ರಾಂಡೆಡ್ ರೈನ್‌ಕೋಟ್ ಗೆಲ್ಲಬಹುದಾಗಿದೆ. ಹೋಂಡಾ ದ್ವಿಚಕ್ರ ವಾಹನಗಳನ್ನು ಖರೀದಿಸಿದ ಎಲ್ಲಾ ಗ್ರಾಹಕರಿಗೆ ಖಚಿತ ಉಡುಗೊರೆಯಾಗಿ ಹೆಲ್ಮೆಟ್, ಟಿ-ಶರ್ಟ್, ಮಗ್ ಹಾಗೂ 15 ಲಕ್ಷ ರೂ.ನ ರೈಡರ್ಸ್‌ ಇನ್ಶೂರೆನ್ಸ್ ನೀಡಲಾಗುವುದು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕ್ಷುಲ್ಲಕ ಕಾರಣಕ್ಕೆ ಮಚ್ಚಿನಿಂದ ಕೊಚ್ಚಿ ಕೊಲೆ.

Tue Feb 14 , 2023
ಬೆಂಗಳೂರು :ವರ್ತೂರ್​ ಬಾರ್​​​​​ನ ಕೊಲೆ ದೃಶ್ಯ ಭಯಾನಕವಾಗಿದ್ದು, ಬಾರ್​​ನಲ್ಲಿ ನಡೆದ ಮರ್ಡರ್​​ CCTVಯಲ್ಲಿ ಸೆರೆಯಾಗಿದೆ. SSS ಬಾರ್​​ನಲ್ಲಿ ಮುನಿಯಪ್ಪ ಎಂಬಾತನ ಕೊಲೆಯಾಗಿದೆ. ಕುಡಿದ ಅಮಲಿನಲ್ಲಿ ಮುನಿಯಪ್ಪ ಮತ್ತು ಶ್ರೀಧರ್​ ನಡುವೆ ಗಲಾಟೆ ನಡೆದಿದೆ. ಗಲಾಟೆ ವಿಕೋಪಕ್ಕೆ ತಿರುಗಿ ಶ್ರೀಧರ್​​​ ಮಚ್ಚಿನಿಂದ ಬೀಸಿದ್ದಾನೆ. ಅಲಸಹಳ್ಳಿ ಮುಖ್ಯ ರಸ್ತೆಯ SSS ಬಾರ್​​ನಲ್ಲಿ ಹಲ್ಲೆ ನಡೆದಿದೆ. ಮುನಿಯಪ್ಪ, ಶ್ರೀಧರ್​​ ಒಂದೇ ಏರಿಯಾದಲ್ಲಿ ವಾಸವಿದ್ದರು. ವರ್ತೂರು ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು ಮಾಡಲಾಗಿದೆ. ಪೊಲೀಸರು ಸಿಸಿಟಿವಿ […]

Advertisement

Wordpress Social Share Plugin powered by Ultimatelysocial