ಪ್ರೀತಿಸಿ ಮದುವೆಯಾಗಿ ಈಗ ಮತಾಂತರ ನಾಟಕವಾಡುತ್ತಿರುವ ಪತ್ನಿ;

ಹುಬ್ಬಳ್ಳಿ: ಅವರಿಬ್ಬರೂ ಕಳೆದ 11 ವರ್ಷಗಳ ಪ್ರೀತಿಸಿ ಮದುವೆಯಾಗಿದ್ದರು. ಈಗ ಅವರಿಬ್ಬರ ನಡುವೆ ಬಿರುಗಾಳಿ ಎದ್ದಿದೆ. ಪತ್ನಿ ಬೇರೊಬ್ಬನ ಜೊತೆ ಲವ್ವಡವ್ವಿ ಆರಂಭ ಮಾಡಿದ್ದಾಳೆ. ಇದು ಪತಿಗೆ ಗೊತ್ತಾಗಿದ್ದರಿಂದ ಅದನ್ನ ಮುಚ್ಚಿ ಹಾಕಲು ಹೆಂಡತಿ ಮತಾಂತರ ಕಾಯ್ದೆಯನ್ನ ಬಂಡವಾಳ ಮಾಡಿಕೊಂಡಿದ್ದಾಳೆ. ಇದರಿಂದ ಗಂಡ-ಹೆಂಡಿರ ಜಗಳದಲ್ಲಿ ಕೂಸು ಬಡವಾಯಿತು ಎನ್ನುವ ಗಾದೆ ಮಾತು ಇಲ್ಲಿ ನಿಜವಾಗಿದೆ..

ಪ್ರೀತಿಸಿ ಮದುವೆಯಾಗಿ ಈಗ ಮತಾಂತರದ ನಾಟಕವಾಡುತ್ತಿರುವ ಪತ್ನಿ. ಇದರಿಂದ ನೊಂದು ನ್ಯಾಯಕ್ಕಾಗಿ ಪತಿಯ ಅಲೆದಾಟ. ಮತಾಂತರ ಎಂದು ಹೇಳಿ ತಂದೆಯಿಂದ ಮಕ್ಕಳನ್ನ ದೂರ ಮಾಡಿದ ಪತ್ನಿ. ಮಕ್ಕಳ‌ ಮುಖ ನೋಡಲು ಅಂಗಲಾಚುತ್ತಿರುವ ಪತಿ‌.
ಹೌದು 11 ವರ್ಷಗಳ ಹಿಂದೆ ಗದಗ ಮೂಲದ ಸುಕನ್ಯಾ ಎನ್ನುವ ಯುವತಿ, ಹುಬ್ಬಳ್ಳಿ ಮ‌ೂಲದ ಜೀವನ ಕುಮಾರ ಜೊತೆ ಪ್ರೀತಿಸಿ ಮದುವೆಯಾಗಿದ್ದಳು. ಮದುವೆಯಾದ ಮೇಲೆ ಒಂದು ಗಂಡು ಹಾಗೂ ಒಂದು ಹೆಣ್ಣು ಮಗು ಜನನವಾಗಿದೆ. ನಾಲ್ಕು ವರ್ಷದಿಂದ ಸುಕನ್ಯಾ ಬೇರೆ ಯುವಕನೊಂದಿಗೆ ಅನೈತಿಕ ಸಂಬಂಧ ಬೆಳೆಸಿದ್ದಾಳೆ. ಈ ವಿಷಯ ಐದು ತಿಂಗಳು ಹಿಂದೆ ಪತಿ ಜೀವನಕುಮಾರಗೆ ಪತ್ನಿಯ ಅನೈತಿಕ ಸಂಬಂಧ ಗೊತ್ತಾಗಿದೆ. ಪತಿಗೆ ವಿಷಯ ತಿಳಿಯುತ್ತದಂತೆ ಪತ್ನಿ ಸುಕನ್ಯಾ ಹೊಸ ವರಸೆ ಶುರು ಮಾಡಿದ್ದಾಳೆ. ಅನೈತಿಕ ಸಂಬಂಧ ಮುಚ್ಚಿಡಲು ಪತ್ನಿ ಪತಿಯ ಮೇಲೆ ಸುಳ್ಳು ಸುಳ್ಳು ಕೇಸ್ ಹಾಕಲು ಮುಂದಾಗಿದ್ದಾಳಂತೆ.

ಕ್ರೈಸ್ತ ಧರ್ಮಕ್ಕೆ ಆಚಾರ ವಿಚಾರ ಪಾಲನೆ ಮಾಡುವಂತೆ ಪತಿ ಜೀವನಕುಮಾರ ಕಿರುರುಳ ನೀಡುತ್ತಿದ್ದಾರೆಂದು ಆರೋಪಿಸಿದ್ದಾಳಂತೆ. ಆದ್ರೆ ಯುವಕ ಮಾತ್ರ ನಾನು ಕ್ರೈಸ್ತ ಸಮುದಾಯಕ್ಕೆ ಸೇರಿದವನ್ನಲ್ಲ. ಅಪ್ಪಟ ಹಿಂದು ಹುಡುಗನ ಮೇಲೆ ಮತಾಂತರ ಅಸ್ತ್ರ ಬಳಸುತ್ತಿದ್ದಾಳೆ. ನಾನು ಕ್ರೈಸ್ತ ಸಮುದಾಯಕ್ಕೆ ಸೇರದವನಲ್ಲವೆಂದು ಪತ್ನಿಯ ಅನೈತಿಕ ಸಂಬಂಧದ ದಾಖಲೆಯನ್ನು ಹಿಡಿದುಕೊಂಡು ಜೀವನಕುಮಾರ ನೇರವಾಗಿ ಆರೋಪ ಮಾಡುತ್ತಿದ್ದಾನೆ.

ಜೀವನಕುಮಾರ, ನೊಂದ ಪತಿ

ಇನ್ನು ಜೀವನಕುಮಾರ ಪತ್ನಿಯು ಇಲ್ಲದೆ, ಮಕ್ಕಳು ಇಲ್ಲದೆ ಏಕಾಂಗಿಯಾಗಿದ್ದಾನೆ. ಈಗ ಮಕ್ಕಳು ಬೇಕೆಂದು ಕೋರ್ಟ್ ‌ಮೆಟ್ಟಲು ಹತ್ತಲು ಜೀವನಕುಮಾರ ತೀರ್ಮಾನ ಮಾಡಿದ್ದಾನೆ. ಆದ್ರೆ ಇಲ್ಲಿ ಗಂಡ ಹೆಂಡತಿ ಜಗಳ ನಡುವೆ ಇಬ್ಬರೂ ಮಕ್ಕಳಿಗೆ ಮಾತ್ರ ಎತ್ತ ಹೋಗಬೇಕೆನ್ನುವುದು ಮಾತ್ರ ತಿಳಿಯುತ್ತಿಲ್ಲ. ಪ್ರಪಂಚದ ಬಗ್ಗೆ ಏನೂ ಅರಿಯದ ಮಕ್ಕಳು ಅಪ್ಪ-ಅಮ್ಮನ ಜಂಜಾಟದಲ್ಲಿ ಸಿಲುಕಿಗೊಂಡು ಮೂಖ ವಿಶ್ಮಿತರಾಗಿದ್ದಾರೆ..

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ತಂದೆಯಿಂದಲೇ ಮಗನಿಗೆ ಚಾಕು ಇರಿತ!

Tue Jul 12 , 2022
ತಾಯಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ಮಗನಿಗೆ ಚಾಕು ಇರಿತ ತಂದೆಯಿಂದಲೇ ಮಗನಿಗೆ ಚಾಕು ಇರಿತ ಹಳೇಹುಬ್ಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಹೆಗ್ಗೆರಿಯಲ್ಲಿ ಘಟನೆ ಶಂಕರ ರಾಮಕೃಷ್ಣ ಸೂಗೂರ ಎಂಬ ತಂದೆಯಿಂದ ಮಗ ಜಗದೀಶ್ ಶಂಕರ ಸೂಗೂರ (31) ಗೆ ಚಾಕು ಇರಿತ ತಂದೆ ಹಾಗೂ ತಾಯಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಕೈಗೆ ಸಿಕ್ಕ ವಸ್ತುಗಳನ್ನ ಎಸೆಯುತ್ತಿದ್ದ ಮಗ ಕೈಗೆ ಸಿಕ್ಕ ಸಿಕ್ಕ ವಸ್ತುಗಳಿಂದ ತಂದೆ ತಾಯಿಗೆ ಕಿರುಕುಳ‌ ನೀಡುತ್ತಿದ್ದ ಮಗ […]

Advertisement

Wordpress Social Share Plugin powered by Ultimatelysocial