ಪತ್ನಿಯು 2 ತಿಂಗಳ ಹಸುಗೂಸ್ಸನ್ನು ಕೈಯಲ್ಲಿ ಎತ್ತಿಕೊಂಡಿರುವಾಗಲೇ ಪತಿಯಿಂದ ಚಾಕು ಇರಿತ. ಹುಬ್ಬಳ್ಳಿ ನಗರದ ಸೆಟಲ್ಮೆಂಟ್ ಪ್ರದೇಶದ ಗಂಗಾಧರ್ ಕಾಲೋನಿಯಲ್ಲಿ ಘಟನೆ ನಡೆದಿದ್ದು, ಪ್ರತಿದಿನ ಹಣಕಾಸಿನ ವಿಷಯವಾಗಿ ನಡೆಯುತ್ತಿದ್ದ ಜಗಳ ವಿಕೋಪಕ್ಕೆ ಹೋಗಿ ಪತಿ ಸುನಿಲ್ ಎಂಬಾತನು ಪತ್ನಿ ಸಂಗೀತಾಳನ್ನು ಚಾಕುವಿಂದ ಇರಿದು ಪರಾರಿಯಾಗಿದ್ದಾನೆ. ಇನ್ನು ಈ ಪ್ರಕರಣವು ಹುಬ್ಬಳ್ಳಿಯ ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಸದ್ಯ ಪತ್ನಿಯ ಸ್ಥಿತಿ ಚಿಂತಾಜನಕವಾಗಿದ್ದು ಮಗುವನ್ನು ಸಂಬಂಧಿಕರು ಪೋಶಿಸುತ್ತಿದ್ದಾರೆ.
ಇದನ್ನೂ ಓದಿ:ವೈದ್ಯರ ನಿರ್ಲಕ್ಷ್ಯ ಗರ್ಭಿಣಿ ಮಗು ಸಾವು