ಅವನ ಮಾತಿಗೆ ನಾನು ಉತ್ತರ ಕೊಡಲ್ಲ.

ಮೈಸೂರು: ಬಚ್ಚಲು ಬಾಯಿಗೆ ಉತ್ತರ ಕೊಡುವಷ್ಟು ಮಟ್ಟಿಗೆ ನಾನು ಕೆಳ ಮಟ್ಟಕ್ಕೆ ಇಳಿಯಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಚಿವ ಅಶ್ವಥ್ ನಾರಾಯಣ್ ವಿರುದ್ಧ ಕಿಡಿ ಕಾರಿದ್ದಾರೆ.

ನಗರದಲ್ಲಿಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಸಿದ್ದರಾಮಯ್ಯ ಬಗ್ಗೆ ವಿವಾದಾತ್ಮಕ ಹೇಳಿಕೆ ಕೊಟ್ಟಿರುವ ಅಸ್ವತ್ಥನಾರಾಯಣ ವಿರುದ್ಧ ಕೆಂಡವಾದರು.

ಅವನ ಮಾತಿಗೆ ನಾನು ಉತ್ತರ ಕೊಡಲ್ಲ. ಇದಕ್ಕೆ ಸಿಎಂ ಬೊಮ್ಮಾಯಿ ಮತ್ತು ಯಡಿಯೂರಪ್ಪ ಅವರೆ ಉತ್ತರ ಕೊಡಬೇಕು ಅಂತ ಏಕವಚನದಲ್ಲಿ ವಾಗ್ದಾಳಿ ನಡೆಸಿದರು.

ಸುದೀಪ್ ನನ್ನ ಸ್ನೇಹಿತ..

ಸುದೀಪ್ ನನ್ನ ಒಬ್ಬ ಸ್ನೇಹಿತ, ಅವರೂ ಕೂಡ ಸಮಾಜದಲ್ಲಿ ಒಂದೊಳ್ಳೆ ಸಾಧನೆ ಮಾಡಿದ್ದಾರೆ. ಸಾಮಾಜಿಕ ಕ್ಷೇತ್ರಗಳಲ್ಲೂ ಕೆಲಸ ಮಾಡುತ್ತಿದ್ದಾರೆ. ನಾನು ಅವರನ್ನು ಭೇಟಿ ಮಾಡಿದ್ದೆ ನನ್ನ 35 ವರ್ಷಗಳ ಅನುಭವದಲ್ಲಿ ಅವರ ಜೊತೆ ಒಂದಷ್ಟು ಚರ್ಚೆ ಮಾಡಿದ್ದೇನೆ. ರಾಜಕಾರಣಕ್ಕೆ ಬನ್ನಿ ಎಂದು ಬಲವಂತ ಮಾಡಿಲ್ಲ ಎಂದು ಶಿವಕುಮಾರ್ ತಿಳಿಸಿದರು.

ಪ್ಯಾರಿಸ್ ಮಾಡೋದು ಬೇಡ, ಪ್ಯಾರಿಸ್ ರೀತಿ ರಸ್ತೆ ಮಾಡಿಸಿ ಸಾಕು

ಪ್ಯಾರಿಸ್ ಮಾದರಿಯಲ್ಲಿ ಅಭಿವೃದ್ಧಿ ಮಾಡುತ್ತೇನೆ ಎಂದಿರುವ ಮೋದಿ ಜೀ ದಯಮಾಡಿ ಪ್ಯಾರಿಸ್ ಮಾಡೋದು ಬೇಡ ಪ್ಯಾರಿಸ್ ತರ ಒಂದೇ ಒಂದು ರೋಡ್ ಮಾಡಿಸಿ ಸಾಕು. ಈ ಸರ್ಕಾರ ವಚನ ಭ್ರಷ್ಟ ಸರ್ಕಾರ ಎಂದು ಕಿಡಿಕಾರಿದ ಡಿಕೆಶಿ, ಬಿಜೆಪಿಯವರಿಗೆ ಆಡಳಿತ ಮಾಡಲು ಬರಲ್ಲ ಅವರಿಗೆ ಅನುಭವ ಇಲ್ಲ ಬರಿ ಭ್ರಷ್ಟಾಚಾರ ಅಷ್ಟೇ. ಭ್ರಷ್ಟಾಚಾರ ಮಾಡುವುದರಲ್ಲಿ ನಿಸ್ಸೀಮರು ಎಂದು ವ್ಯಂಗ್ಯವಾಡಿದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಜೆಡಿಎಸ್‌, ಕಾಂಗ್ರೆಸ್‌ ಭದ್ರಕೋಟೆ ಮೇಲೆ ಬಿಜೆಪಿ ಕಣ್ಣು ನೆಟ್ಟಿದೆ.

Thu Feb 16 , 2023
ಜೆಡಿಎಸ್‌, ಕಾಂಗ್ರೆಸ್‌ ಭದ್ರಕೋಟೆ ಮೇಲೆ ಬಿಜೆಪಿ ಕಣ್ಣು ನೆಟ್ಟಿದೆ. ಫೆಬ್ರವರಿ 20ಕ್ಕೆ ಮಂಡ್ಯದಲ್ಲಿ ಯುವ ಮೋರ್ಚಾ ಸಮಾವೇಶಕ್ಕೆ ಸಿದ್ಧತೆ ಆರಂಭವಾಗಿದೆ.. ಹಳೇ ಮೈಸೂರು ಭಾಗವನ್ನೇ ಕೇಂದ್ರೀಕರಿಸಿ ಈ ದಾಳ ಉರುಳಿಸಲಾಗಿದೆ.. ಈ ಮೋರ್ಚಾಗಳ ಸಮಾವೇಶಕ್ಕೆ ವಿಜಯೇಂದ್ರ ಇನ್​ಚಾರ್ಜ್​ ಆಗಿದ್ದಾರೆ. ಕರ್ನಾಟಕ ಕುರುಕ್ಷೇತ್ರ ಅಖಾಡದಲ್ಲಿ ಎಲ್ಲಾ ಪಕ್ಷಗಳು ತಮ್ಮದೇ ಆದ ಅಸ್ತ್ರಗಳ ಮೂಲಕ ಮತ ರಣಬೇಟೆಗೆ ಇಳಿದಿವೆ. ಕರ್ನಾಟಕ ಗೆಲ್ಲಲು ಎಲ್ಲಾ ರೀತಿಯ ತಂತ್ರ-ಪ್ರತಿತಂತ್ರ ರಣತಂತ್ರಗಳನ್ನ ಬಿಜೆಪಿ ಹೊಸೆಯುತ್ತಿದೆ.. ದಕ್ಷಿಣದ ಹೆಬ್ಬಾಗಿಲು […]

Advertisement

Wordpress Social Share Plugin powered by Ultimatelysocial