ಅಲ್ಲಾಹು ಅಕ್ಬರ್​ ಘೋಷಣೆ ಕೂಗಿದ ವಿದ್ಯಾರ್ಥಿನಿಗೆ ಗಿಫ್ಟ್‌ ವಿಚಾರಕ್ಕೆ ಪ್ರತಿಕ್ರಿಯಿಸಿದ ಮಾಜಿ ಸಚಿವ ಸಿ.ಎಂ ಇಬ್ರಾಹಿಂ ‘

ಮಂಡ್ಯ : ಅಲ್ಲಾಹು ಅಕ್ಬರ್​ ಘೋಷಣೆ ಕೂಗಿದ ವಿದ್ಯಾರ್ಥಿನಿಗೆ ಗಿಫ್ಟ್‌ ವಿಚಾರಕ್ಕೆ ಪ್ರತಿಕ್ರಿಯಿಸಿದ ಮಾಜಿ ಸಚಿವ ಸಿ.ಎಂ ಇಬ್ರಾಹಿಂ ‘ ವಿದ್ಯಾರ್ಥಿನಿ ಮುಸ್ಕಾನ್‌ಗೆ ಉಡುಗೊರೆ ಕೊಟ್ಟರೆ ತಪ್ಪೇನು? ಆಕೆಯನ್ನ ಮೆಚ್ಚಿ ಉಡುಗೊರೆ ಕೊಟ್ಟರೇ ಯಾವುದೇ ತಪ್ಪಿಲ್ಲ.ನಾನು ಕೂಡ ವಿದ್ಯಾರ್ಥಿನಿಯನ್ನ ಭೇಟಿಯಾಗುತ್ತೇನೆ’ ಎಂದಿದ್ದಾರೆ.ಮಂಡ್ಯ ಜಿಲ್ಲೆ ಹೊಳಲು ಗ್ರಾಮದಲ್ಲಿ ಮಾತನಾಡಿದ ಸಿ.ಎಂ ಇಬ್ರಾಹಿಂ, ‘ ವಿದ್ಯಾರ್ಥಿನಿ ಮುಸ್ಕಾನ್‌ ಅಷ್ಟು ಹುಡುಗರ ನಡುವೆ ಏಕಾಂಗಿಯಾಗಿ ಎದುರಿಸಿದ್ದಾಳೆ. ಆಕೆಯನ್ನ ಮೆಚ್ಚಿ ಉಡುಗೊರೆ ಕೊಟ್ಟರೇ ಯಾವುದೇ ತಪ್ಪಿಲ್ಲ.ಜೈ ಶ್ರೀರಾಮ್‌ ಘೋಷಣೆ ಕೂಗಿದ್ರೆ ಪ್ರಚೋದನೆ ಆಗಲ್ಲ. ಅಲ್ಲಾಹು ಅಕ್ಬರ್​ ಘೋಷಣೆ ಕೂಗಿದ್ರೆ ಪ್ರಚೋದನೆ ಆಗುತ್ತಾ? ನಾನು ಕೂಡ ಹರಹರ ಮಹದೇವ ಎಂದು ಹೇಳ್ತೇನೆ ಅದು ಪ್ರಚೋದನೆಯಾ? ಮುಸ್ಕಾನ್‌ ಭಾರತದ, ಕರ್ನಾಟಕದ ಮಗಳು. ನಾನು ಕೂಡ ವಿದ್ಯಾರ್ಥಿನಿ ಮುಸ್ಕಾನ್‌ಳನ್ನು ಭೇಟಿಯಾಗುತ್ತೇನೆ’ ಎಂದಿದ್ದಾರೆ.ಇನ್ನು ‘ಮುಂದಿನ ಚುನಾವಣೆಗೆ ಹೋಗಲು ಬಿಜೆಪಿಯವರಿಗೆ ಯಾವ ವಿಚಾರವು ಇರಲಿಲ್ಲ. ರಾಮಮಂದಿರ, ಗೋಹತ್ಯೆ ವಿಚಾರಗಳು ಮುಗಿದವು. ಪೆಟ್ರೋಲ್ ದರ ನೂರು ರೂಪಾಯಿ ದಾಟಿದೆ. ಹೀಗಾಗಿ ಹಿಜಾಬ್ ವಿಚಾರ ದೊಡ್ಡದು ಮಾಡಿದ್ದಾರೆ’ ಎಂದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಜಸ್ಪ್ರೀತ್ ಬುಮ್ರಾ ಸ್ಪಷ್ಟ ಕ್ರಮವನ್ನು ಏಕೆ ತೆಗೆದುಕೊಂಡಿದ್ದಾರೆ ಮತ್ತು ಪಾಕಿಸ್ತಾನದ ವೇಗಿ ಮೊಹಮ್ಮದ್ ಹಸ್ನೇನ್ ಅವರನ್ನು ಏಕೆ ನಿಷೇಧಿಸಲಾಗಿದೆ?

Fri Feb 11 , 2022
ಭಾರತದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಪ್ರಸ್ತುತ ಎಲ್ಲಾ ಫಾರ್ಮ್ಯಾಟ್‌ಗಳಲ್ಲಿ ವಿಶ್ವದ ಅತ್ಯುತ್ತಮ ಬೌಲರ್‌ಗಳಲ್ಲಿ ಒಬ್ಬರು. ಆದರೆ ಅವರ ಬೌಲಿಂಗ್ ಮಾತ್ರ ಸುದ್ದಿ ಮಾಡಿಲ್ಲ. ಬುಮ್ರಾ ಅವರ ಈ ಕ್ರಮವು ಅನೇಕ ಮಾಜಿ ಕ್ರಿಕೆಟಿಗರನ್ನು ಆಶ್ಚರ್ಯಚಕಿತಗೊಳಿಸಿದೆ, ಕೆಲವರು ಅಂತಹ ಕ್ರಿಯೆಯೊಂದಿಗೆ ದೀರ್ಘಕಾಲ ಆಡುವುದನ್ನು ಮುಂದುವರಿಸುವುದು ಕಷ್ಟ ಎಂದು ಕೆಲವರು ಭವಿಷ್ಯ ನುಡಿದಿದ್ದಾರೆ, ಅದು ಗಾಯಕ್ಕೆ ಒಳಗಾಗುತ್ತದೆ ಮತ್ತು ದೇಹವು ಟೆಸ್ಟ್‌ನ ಕೆಲಸದ ಹೊರೆಯನ್ನು ಉಳಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಭವಿಷ್ಯದಲ್ಲಿ ವಿಶೇಷವಾಗಿ ಕ್ರಿಕೆಟ್. […]

Advertisement

Wordpress Social Share Plugin powered by Ultimatelysocial