ಮಂಡ್ಯ : ಅಲ್ಲಾಹು ಅಕ್ಬರ್ ಘೋಷಣೆ ಕೂಗಿದ ವಿದ್ಯಾರ್ಥಿನಿಗೆ ಗಿಫ್ಟ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಮಾಜಿ ಸಚಿವ ಸಿ.ಎಂ ಇಬ್ರಾಹಿಂ ‘ ವಿದ್ಯಾರ್ಥಿನಿ ಮುಸ್ಕಾನ್ಗೆ ಉಡುಗೊರೆ ಕೊಟ್ಟರೆ ತಪ್ಪೇನು? ಆಕೆಯನ್ನ ಮೆಚ್ಚಿ ಉಡುಗೊರೆ ಕೊಟ್ಟರೇ ಯಾವುದೇ ತಪ್ಪಿಲ್ಲ.ನಾನು ಕೂಡ ವಿದ್ಯಾರ್ಥಿನಿಯನ್ನ ಭೇಟಿಯಾಗುತ್ತೇನೆ’ ಎಂದಿದ್ದಾರೆ.ಮಂಡ್ಯ ಜಿಲ್ಲೆ ಹೊಳಲು ಗ್ರಾಮದಲ್ಲಿ ಮಾತನಾಡಿದ ಸಿ.ಎಂ ಇಬ್ರಾಹಿಂ, ‘ ವಿದ್ಯಾರ್ಥಿನಿ ಮುಸ್ಕಾನ್ ಅಷ್ಟು ಹುಡುಗರ ನಡುವೆ ಏಕಾಂಗಿಯಾಗಿ ಎದುರಿಸಿದ್ದಾಳೆ. ಆಕೆಯನ್ನ ಮೆಚ್ಚಿ ಉಡುಗೊರೆ ಕೊಟ್ಟರೇ ಯಾವುದೇ ತಪ್ಪಿಲ್ಲ.ಜೈ ಶ್ರೀರಾಮ್ ಘೋಷಣೆ ಕೂಗಿದ್ರೆ ಪ್ರಚೋದನೆ ಆಗಲ್ಲ. ಅಲ್ಲಾಹು ಅಕ್ಬರ್ ಘೋಷಣೆ ಕೂಗಿದ್ರೆ ಪ್ರಚೋದನೆ ಆಗುತ್ತಾ? ನಾನು ಕೂಡ ಹರಹರ ಮಹದೇವ ಎಂದು ಹೇಳ್ತೇನೆ ಅದು ಪ್ರಚೋದನೆಯಾ? ಮುಸ್ಕಾನ್ ಭಾರತದ, ಕರ್ನಾಟಕದ ಮಗಳು. ನಾನು ಕೂಡ ವಿದ್ಯಾರ್ಥಿನಿ ಮುಸ್ಕಾನ್ಳನ್ನು ಭೇಟಿಯಾಗುತ್ತೇನೆ’ ಎಂದಿದ್ದಾರೆ.ಇನ್ನು ‘ಮುಂದಿನ ಚುನಾವಣೆಗೆ ಹೋಗಲು ಬಿಜೆಪಿಯವರಿಗೆ ಯಾವ ವಿಚಾರವು ಇರಲಿಲ್ಲ. ರಾಮಮಂದಿರ, ಗೋಹತ್ಯೆ ವಿಚಾರಗಳು ಮುಗಿದವು. ಪೆಟ್ರೋಲ್ ದರ ನೂರು ರೂಪಾಯಿ ದಾಟಿದೆ. ಹೀಗಾಗಿ ಹಿಜಾಬ್ ವಿಚಾರ ದೊಡ್ಡದು ಮಾಡಿದ್ದಾರೆ’ ಎಂದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada