ಮಾಲೂರು, ಬಿಜೆಪಿ ಪಕ್ಷದಲ್ಲಿ ಕಳ್ಳರಿಗೆ ಕಾಕರಿಗೆ ರೌಡಿಗಳಿಗೆ ಟಿಕೆಟ್ ನೀಡಿದ್ದಾರೆ ಮಾಲೂರಿನಲ್ಲಿ ಬಿಜೆಪಿ ಅಭ್ಯರ್ಥಿ ಕೆ ಎಸ್ ಮಂಜುನಾಥ್ ಗೌಡ ಗೆಲ್ಲಲ್ಲ ನಾಲ್ಕನೇ ಸ್ಥಾನಕ್ಕೆ ಹೋಗ್ತಾರೆ ಎಂದು ಜೆಡಿಎಸ್ ಅಭ್ಯರ್ಥಿ ಜಿ ಇ ರಾಮೇಗೌಡ ಸಂಸದ ಎಸ್ ಮುನಿಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು, ಮಾಲೂರು ಪಟ್ಟಣದ ರಾಜೀವ್ ನಗರದಲ್ಲಿ ಜೆಡಿಎಸ್ ಅಭ್ಯರ್ಥಿ ಜಿ ರಾಮೇಗೌಡರು ಮನೆ ಮನೆಗೆ ತೆರಳಿ ಮತ ಯಾಚನೆ ಮಾಡಿ ಸುದ್ದಿಗಾರರೊಂದಿಗೆ ಮಾತನಾಡಿ.
ನರೇಂದ್ರ ಮೋದಿಯವರು, ಯಡಿಯೂರಪ್ಪನವರು ಮುನಿಸ್ವಾಮಿಯವರು ಬಂದ್ರು ಈ ಭಾರಿ ಮಾಲೂರಿನಲ್ಲಿ ಬಿಜೆಪಿ ಅಭ್ಯರ್ಥಿ ಮಂಜುನಾಥಗೌಡರು ಗೆಲ್ಲುವುದಿಲ್ಲ ಅವರು ನಾಲ್ಕನೇ ಸ್ಥಾನ ಪಡೆದುಕೊಳ್ಳತ್ತಾರೆ,
ಬಿ ಫಾರಂ ಹರಿದು ಹಾಕಿದ ಕೃಷ್ಣಯ ಶೆಟ್ಟರು ನ್ಯಾಷಿನಲ್ ಪಾರ್ಟಿ ಬೆಂಬಲ ಪಡೆದುಕೊಂಡ್ರು, ಬಿಜೆಪಿ ಪಕ್ಷಕ್ಕೆ ಯಾವುದೇ ಮಾನ ಮರ್ಯಾದೆ ಇಲ್ಲದೇ ಕಳ್ಳರಿಗೆ ಕಾಕರಿಗೆ ರೌಡಿಗಳಿಗೆ ಟಿಕೆಟ್ ನೀಡಿದ್ದಾರೆ, ಮಂಜುನಾಥ್ ಗೌಡರು ನಾಲ್ಕು ವರ್ಷ ಎಲ್ಲಿಗೆ ಹೋಗಿದ್ರು ರಾಜಕಾರಣಿಗಳಿಗೆ ರಜೆ ಕೊಡ್ತರ ಎಂದು ಮಂಜುನಾಥ್ ಗೌಡ ವಿರುದ್ಧ ಲೇವಡಿ ಮಾಡಿದರು,
ಐದು ವರ್ಷಗಳ ಶಾಸಕರಾಗಿ ಅಧಿಕಾರ ಅನುಭವಿಸಿದ ಮಂಜುನಾಥ್ ಗೌಡರಿಗೆ ಕನಿಕರ ಇಲ್ಲದೇ ಕೋವಿಡ್ ಸಂದರ್ಭದಲ್ಲಿ ರಜೇ ತೆಗೆದುಕೊಂಡಿದ್ರು, ನಾನು ಸೋತರೂ ಮಾಲೂರು ಕ್ಷೇತ್ರದಲ್ಲಿ ಜನರ ಸೇವೆ ಮಾಡಿಕೊಂಡು ಬಂದಿದ್ದೇನೆ ಮಾಲೂರಿನಲ್ಲಿ ಈ ಭಾರಿ ಜೆಡಿಎಸ್ ಪಕ್ಷ ಗೆಲ್ಲುತೆ ಎಂದು ಜೆಡಿಎಸ್ ಅಭ್ಯರ್ಥಿ ಜಿ ರಾಮೇಗೌಡ ವಿಶ್ವಾಸ ವ್ಯಕ್ತಪಡಿಸಿದರು,
ಈ ಸಂದರ್ಭದಲ್ಲಿ ಜೆಡಿಎಸ್ ರಾಜ್ಯ ಕಾರ್ಯದರ್ಶಿ ಎಚ್.ವಿ.ಚಂದ್ರೇಗೌಡ, ತಾಲ್ಲೂಕು ಅಧ್ಯಕ್ಷ ಬಲ್ಲಹಳ್ಳಿ ನಾರಾಯಣಸ್ವಾಮಿ ಮುಖಂಡರಾದ ಗಂಗಪ್ಪ, ಎನ್.ವೆಂಕಟರಾಮ್, ತುರುಗಲೂರುಆಂಜಿನಪ್ಪ, ಯಶವಂತಪುರ ಡಿಎಂಎನ್ ನಾಗರಾಜ್, ಅಲ್ಲ ಬಕಾಶ್, ಚೋಟುಸಾಬ್, ನವೀನ್, ಸುಮ, ಲವ , ಕುಶ ಸೇರಿದಂತೆ ಇನ್ನಿತರರು ಇದ್ದರು.
https://play.google.com/store/apps/details?id=com.speed.newskannada