ಮುಂದಿನ 24 ಗಂಟೆಗಳಲ್ಲಿ ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಮಳೆಯಾಗುವ ಸಾಧ್ಯತೆ ಇದೆಎಂದು ರಾಜ್ಯ ಹವಾಮಾನ ಇಲಾಖೆ ತಿಳಿಸಿದ್ದಾರೆ.
ಕರಾವಳಿ ಜಿಲ್ಲೆಗಳಾದಂತಹ ದಕ್ಷಿಣ ಕನ್ನಡ,ಉಡುಪಿ, ಉತ್ತರ ಕನ್ನಡ,ದಕ್ಷಿಣ ಒಳನಾಡು,ಬೆಂಗಳೂರು ಗ್ರಾಮಾಂತರ,ಬೆಂಗಳೂರು ನಗರ,ಚಿಕ್ಕಬಳ್ಳಾಪುರ,ಕೋಲಾರದಲ್ಲಿ ಭಾರೀ ಮಳೆಯಾಗಲಿದ್ದು
ರಾಜ್ಯದಲ್ಲಿ ಯಲ್ಲೋ ಅಲರ್ಟ್ ಘೋಷಣೆ ಮಾಡಿದ್ದಾರೆ..
ಇನ್ನೂ ಕರಾವಳಿ ಒಳನಾಡಿನ ಕೆಲವೆಡೆ ತಿವ್ರಸ್ವರೂಪದ ಗಾಳಿ ಬೀಸಲಿದ್ದು
ಗಾಳಿ ವೇಗ ಗಂಟೆಗೆ 40-50 ಕಿ.ಮೀ ತಲುಪುವ ಸಾಧ್ಯತೆ. ಮೀನುಗಾರರನ್ನು ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆ ಎಚ್ಚರಿಕೆಯನ್ನು ನೀಡಿದ್ದಾರೆ.
ಅಲ್ಲದೆ ಮೈಸೂರು,ಚಿಕ್ಕಮಗಳೂರು, ಶಿವಮೊಗ್ಗ,ಹಾಸನ ,ಕೊಡಗು,ರಾಮನಗರ,ಮಂಡ್ಯ
ಚಾಮರಾಜನಗರ,ವಿಜಯಪುರ,ಬಾಗಲಕೋಟೆಯಲ್ಲಿ ಸಾಧಾರಣ ಮಳೆಯಾಗಲಿದೆ.
ಹಾಗೆ ಮಂಗಳೂರು,ಕೊಲ್ಲೂರು, ಶಹಾಪುರ,ಕಾರವಾರ,ಶಿರಾಲಿ ಜಾನ್ಮನೆ,ಕುಂದಾಪುರ,
ಪನಂಬೂರುಹೊಸಕೋಟೆ,ಚನ್ನಪಟ್ಟಣ ,ಗೇರುಸೊಪ್ಪ,ಶಿರಹಟ್ಟಿ, ಕಡೂರು,ವಿರಾಜಪೇಟೆ,ಕುಕ್ಕೆ ಸುಬ್ರಹ್ಮಣ್ಯ,
ಉಪ್ಪಿನಂಗಡಿ,ಗೇರುಸೊಪ್ಪ ಹಲವೆಡೆ ಉತ್ತಮ ಮಳೆಯಾಗಿದೆ.
ಹವಾಮಾನ ಇಲಾಖೆ ಇನ್ನೂ ರಾಜ್ಯದಲ್ಲಿ 5 ದಿನ ಮಳೆಯಾಗುವ ಎಚ್ಚರಿಕೆಯನ್ನೂ ನೀಡಿದ್ದಾರೆ.
https://play.google.com/store/apps/details?id=com.speed.newskannada