ಉಡುಪಿಯ ಮಲ್ಪೆ ಕಡಲ ತೀರದಲ್ಲಿ ನಡೆದ ರಾಷ್ಟ್ರಮಟ್ಟದ ಓಪನ್ ವಾಟರ್ ಈಜು ಸ್ಪರ್ಧೆಯ 5 ಕಿ.ಮೀ.,ಗ್ರೂಪ್ 2 ವಿಭಾಗದಲ್ಲಿ 49.41 ನಿ. ದಲ್ಲಿ ಗುರಿ ತಲುಪುವುದರೊಂದಿಗೆ ಬೆಳ್ಳಿಯ ಪದಕ ವಿಜೇತರಾಗಿರುವ ಕಲಬುರಗಿಯ ಈಜುಪಟು ರೇಣುಕಾಚಾರ್ಯ ಹೊಡಮನಿ ಅಂತರರಾಷ್ಟ್ರೀಯ ಈಜು ಸ್ಪರ್ಧೆಗೂ ಆಯ್ಕೆಯಾಗಿದ್ದಾರೆ. ಫಿಲಿಫೈನ್ಸ್ ನಲ್ಲಿ ನೆಡೆಯುವ ಅಂತರರಾಷ್ಟ್ರೀಯ ಜೂನಿಯರ್ ಓಪನ್ ವಾಟರ್ ಈಜು ಸ್ಪರ್ಧೆಗೆ ಆಯ್ಕೆಯಾಗಿ ಗಮನ ಸೆಳೆದಿದ್ದಾರೆ.
ಈ ಸ್ಪರ್ಧೆಯನ್ನು ಸ್ವಿಮ್ಮಿಂಗ್ ಫೆಡರೇಷನ್ ಆಫ್ ಇಂಡಿಯಾ, ಕರ್ನಾಟಕ ಸ್ವಿಮ್ಮಿಂಗ್ ಅಸೋಸಿಯೇಷನ್ ಸಹಯೋಗದೊಂದಿಗೆ ಆಯೋಜಿಸಿತ್ತು. ರೇಣುಕಾಚಾರ್ಯ ಅವರು ಬೆಂಗಳೂರಿನ ಈಜು ಕೊಳದಲ್ಲಿ ವಿಶೇಷ ತರಬೇತಿ ಪಡೆಯುತ್ತಿದ್ದಾರೆ. ಈ ಮೊದಲು ಕಲಬುರ್ಗಿಯಲ್ಲಿ ಬೇಸಿಕ್ ಈಜು ತರಬೇತಿ ಪಡೆದಿದ್ದರು.
https://play.google.com/store/apps/details?id=com.speed.newskannada