ಜೆಡಿಎಸ್ ಅಭ್ಯರ್ಥಿ ಕಡಬೂರು ಮಂಜುನಾಥ್ ಗೆ ರೈತ ಸಂಘ ಬೆಂಬಲ…

ಗುಂಡ್ಲುಪೇಟೆ : 2023 ರ ಸಾರ್ವತ್ರಿಕ ಚುನಾವಣೆಗೆ ಗುಂಡ್ಲುಪೇಟೆ ವಿಧಾನ ಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿರುವ ಕಡಬೂರು ಮಂಜುನಾಥ್ ಅವರಿಗೆ ತಾಲೂಕು ರೈತ ಸಂಘದ ಸಂಪೂರ್ಣ ಬೆಂಬಲವಿದೆ ಎಂದು ಜಿಲ್ಲಾ ರೈತ ಸಂಘ ಕಾರ್ಯಾಧ್ಯಕ್ಷ ಮಾಡ್ರಹಳ್ಳಿ ಮಹದೇವಪ್ಪ ತಿಳಿಸಿದರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.15 ವರ್ಷಗಳಿಂದ ರೈತ ಸಂಘಟನೆಯಲ್ಲಿ ತೊಡಗಿಸಿಕೊಂಡು ಹೋರಾಟದ ಮೂಲಕ ಜನಪರ ಕೆಲಸಗಳನ್ನು ಮಾಡುತ್ತ ರೈತಪರ ಹೋರಾಟಗಾರ ಕಡಬೂರು ಮಂಜುನಾಥ್ ಅವರನ್ನ ಜೆಡಿಎಸ್ ಪಕ್ಷದ ಎಚ್.ಡಿ.ಕುಮಾರ ಸ್ವಾಮಿಯವರು ಪಕ್ಷದ ಟಿಕೆಟ್ ನೀಡುವ ಮೂಲಕ ಜನರ ಸೇವೆಗೈಯಲು ಮುಂದಾಗಿರುವುದು ಸಂತಸಕರ ಸಂಗತಿಯಾಗಿದೆ. ರೈತ ಸಂಘದವರನ್ನ ಕಡೆಗಣಿಸುತ್ತಿದ್ದ ಇಂತಹ ಸಂಧರ್ಭದಲ್ಲಿ ಕುಮಾರಸ್ವಾಮಿ ಮತ್ತು ಸಾರಾ ಮಹೇಶ್ ಅವರು ಆದ್ಯತೆಯನ್ನು ನೀಡುವ ಮೂಲಕ ರೈತ ಸಂಘಕ್ಕೆ ಶಕ್ತಿಯನ್ನ ತುಂಬಲು ಮುಂದಾಗಿದ್ದಾರೆ ಈ ಹಿನ್ನೆಲೆಯಲ್ಲಿ ನಮ್ಮ ಕಾರ್ಯಕರ್ತ ಮಂಜುನಾಥ್ ಅವರನ್ನ ಬೆಂಬಲಿಸುವುದಾಗಿ ಒಮ್ಮತದಿಂದ ನಿರ್ದಾರ ಮಾಡಿದ್ದೇವೆ ಎಂದು ಮಾಡ್ರಹಳ್ಳಿ ಮಹದೇವಪ್ಪ ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾರ್ಯಾಧ್ಯಕ್ಷ ಮಾಡ್ರಹಳ್ಳಿ ಮಹದೇವಪ್ಪ, ಹಾಲಹಳ್ಳಿ ಮಹೇಶ್ ಜಿಲ್ಲಾ ಸಂಚಾಲಕ, ಕುಂದಕೆರೆ ಸಂಪತ್ತು ಜಿಲ್ಲಾ ಉಪಾಧ್ಯಕ್ಷ, ಹಕ್ಕಲಪುರ ಮಹೇಶ್, ತಾಲೂಕು ಅಧ್ಯಕ್ಷ ಮಹೇಶ್, ಷಣ್ಮುಖಸ್ವಾಮಿ, ಸದಸ್ಯರುಗಳು ಉಪಸ್ಥಿತರಿದ್ದರು….

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬಂಗಾರದ ದರದಲ್ಲಿ 330 ರೂ. ಏರಿಕೆ

Mon Jan 9 , 2023
ಬಂಗಾರದ ದರದದಲ್ಲಿ ಸೋಮ ವಾರ 330 ರೂ. ಏರಿಕೆಯಾಗಿದೆ. (Gold Price) 24 ಕ್ಯಾರಟ್‌ನ ಪ್ರತಿ 10 ಗ್ರಾಮ್ ಚಿನ್ನದ ದರ 56340 ರೂ.ಗೆ ವೃದ್ಧಿಸಿದೆ.‌22 ಕ್ಯಾರಟ್‌ನ ಪ್ರತಿ 10 ಗ್ರಾಮ್‌ ಚಿನ್ನದ ದರದಲ್ಲಿ 300 ರೂ.ಏರಿಕೆಯಾಗಿದ್ದು, 51,650 ರೂ.ಗೆ ಹೆಚ್ಚಳವಾಗಿದೆ. ಒಂದು ಕೆ.ಜಿ ಬೆಳ್ಳಿಯ ದರದಲ್ಲಿ 500 ರೂ. ಹೆಚ್ಚಳವಾಗಿದ್ದು, 74,900 ರೂ.ಗೆ ವೃದ್ಧಿಸಿದೆ. ಪ್ಲಾಟಿನಮ್‌ನ ಪ್ರತಿ 10 ಗ್ರಾಮ್‌ ದರದಲ್ಲಿ 30 ರೂ. ಇಳಿಕೆಯಾಗಿದ್ದು, 28,800 ರೂ.ಗೆ […]

Advertisement

Wordpress Social Share Plugin powered by Ultimatelysocial