ಜೂನಿಯರ್ NTR, ನಾನು ಒಳ್ಳೆಯ ಫ್ರೆಂಡ್ಸ್;

 

ರಾಮ್ ಚರಣ್ ಹಾಗೂ ಜೂನಿಯರ್ ಎನ್ ಟಿ ಆರ್ ಉತ್ತಮ ಸ್ನೇಹಿತರಾಗಿದ್ದಾರೆ.RRR ಸಿನಿಮಾ ಮೂಲಕ ರಾಮ್ ಚರಣ್ ಹಾಗೂ ಜೂನಿಯರ್ ಎನ್ಟಿಆರ್ ಸ್ನೇಹ ಮತ್ತಷ್ಟು ಗಟ್ಟಿಯಾಗಿದೆ. ಇಬ್ಬರು ಅನೇಕ ಬಾರಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಇದೀಗ ಅಮೆರಿಕಾದಲ್ಲಿ ಇಬ್ಬರ ಸ್ನೇಹದ ಬಗ್ಗೆ ಚರ್ಚೆ ಆಗಿದೆ.ರಾಮ್ ಚರಣ್ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಬಗ್ಗೆ ಮೆಗಾಸ್ಟಾರ್ ಚಿರಂಜೀವಿ ಸೋಶಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ರು. ಈ ವಿಚಾರವನ್ನು ‘ಗುಡ್ ಮಾರ್ನಿಂಗ್ ಅಮೆರಿಕಾ’ ಟಾಕ್ ಶೋನಲ್ಲಿ ರಾಮ್ ಚರಣ್ ಪ್ರಸ್ತಾಪಿಸಿದ್ದಾರೆ.ಅಷ್ಟೇ ಅಲ್ಲದೇ ರಾಮ್ ಚರಣ್ ನಟ ಜೂನಿಯರ್ NTR ಜೊತೆಗಿನ ಸ್ನೇಹದ ಬಗ್ಗೆ ಕೂಡ ಮಾತಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಗುಡ್ ನ್ಯೂಸ್ ಹಂಚಿಕೊಳ್ಳುವ ಮೊದಲು ನಾನು ಜೂನಿಯರ್ NTRಗೆ ಕರೆ ಮಾಡಿ ಸಂತಸ ಹಂಚಿಕೊಂಡಿದ್ದಾಗಿ ಚೆರ್ರಿ ಹೇಳಿದ್ದಾರೆ. ರಾಮ್ ಚರಣ್ ಹಾಗೂ NTR ಆತ್ಮೀಯ ಸ್ನೇಹಿತರಾಗಿದ್ದಾರೆ.ಅನೇಕ ವಿಚಾರಗಳನ್ನು ಇಬ್ಬರೂ ಶೇರ್ ಮಾಡಿಕೊಳ್ಳಿವುದಾಗಿ ರಾಮ್ ಚರಣ್ ಹೇಳಿದ್ದಾರೆ. ಅಮೆರಿಕಾದಲ್ಲಿ ಸ್ನೇಹದ ಬಗ್ಗೆ ಮಾತಾಡಿದ ಜೂನಿಯರ್ ರಾಮ್ ಚರಣ್ ಬಗ್ಗೆ ಜೂನಿಯರ್ NTR ಅಭಿಮಾನಿಗಳು ಕೂಡ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.ಇನ್ನು ರಾಜಮೌಳಿ ಬಗ್ಗೆ ಮಾತಾಡಿದ ರಾಮ್ ಚರಣ್, ಅವರೊಬ್ಬ ಮಹಾನ್ ಬರಹಗಾರ ಎಂದಿದ್ದಾರೆ. ರಾಜಮೌಳಿ ಅವರನ್ನು ಇಂಡಿಯನ್ ಸ್ಟೀವನ್ ಸ್ಪೀಲ್ ಬರ್ಗ್ ಎಂದು ರಾಮ್ ಚರಣ್ ಕರೆದಿದ್ದಾರೆ. ಸದ್ಯದಲ್ಲೇ ರಾಜಮೌಳಿ ತಮ್ಮ ಮುಂದಿನ ಸಿನಿಮಾ ಮೂಲಕ ವಿಶ್ವದಾದ್ಯಂತ ತಮ್ಮ ಶಕ್ತಿ ತೋರಿಸಲಿದ್ದಾರೆ ಎಂದಯ ರಾಮ್ ಚರಣ್ ಹೇಳಿದ್ದಾರೆ.ಹಾಲಿವುಡ್ ಕ್ರಿಟಿಕ್ಸ್ ಅಸೋಸಿಯೇಷನ್ ಫಿಲ್ಮ್ ಅವಾರ್ಡ್ ಫಂಕ್ಷನ್ ಗಾಗಿ ರಾಮ್ ಚರಣ್ ಅಮೆರಿಕಕ್ಕೆ ತೆರಳಿದ್ದರು. ಅಲ್ಲಿ ಹಾಲಿವುಡ್ ಕ್ರಿಟಿಕ್ಸ್ ಅಸೋಸಿಯೇಷನ್ ಪ್ರಸ್ತುತಪಡಿಸುವ 6ನೇ ಹಾಲಿವುಡ್ ಕ್ರಿಟಿಕ್ಸ್ ಅಸೋಸಿಯೇಷನ್ ಫಿಲ್ಮ್ ಅವಾರ್ಡ್ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಫೆಬ್ರವರಿ 24, 2023 ರ ಸಂಜೆ ಬೆವರ್ಲಿ ಹಿಲ್ಸ್​ನಲ್ಲಿರುವ ಬೆವರ್ಲಿ ವಿಲ್ಶೈರ್ ಹೋಟೆಲ್​ನಲ್ಲಿ ನಡೆಯಲಿದೆ.ಜೂನಿಯರ್ ಎನ್ ಟಿ ಆರ್ ಮತ್ತು ರಾಮ್ ಚರಣ್ ಅಭಿನಯದ RRR ಚಿತ್ರ ವಿಶ್ವದಾದ್ಯಂತದ ಸೆಲೆಬ್ರಿಟಿಗಳ ಗಮನ ಸೆಳೆದಿದೆ. ಈ ಚಿತ್ರವು ಅನೇಕ ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ. ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿತು. ಹಾಲಿವುಡ್ ದಿಗ್ಗಜರು ಕೂಡ ರಾಜಮೌಳಿ ನಿರ್ದೇಶನದ RRR ಸಿನಿಮಾ ಬಗ್ಗೆ ಕೊಂಡಾಡುತ್ತಿದ್ದಾರೆ.ಈಗಾಗಲೇ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಪಡೆದಿರುವ ಆರ್ ಆರ್ ಆರ್ ಚಿತ್ರ ಆಸ್ಕರ್ ಪ್ರಶಸ್ತಿಗೆ ನಾಮಿನೇಟ್ ಆಗಿರುವುದು ಗೊತ್ತೇ ಇದೆ. ಮೂಲ ಹಾಡಿನ ವಿಭಾಗದಲ್ಲಿ, ಈ ಚಿತ್ರದ ಕೀರವಾಣಿ ಸಂಗೀತ ಸಂಯೋಜನೆಯ ನಾಟು ನಾಟು ಹಾಡು ಆಸ್ಕರ್ ನಾಮನಿರ್ದೇಶನಗಳನ್ನು ಪಡೆದುಕೊಂಡಿದೆ. ಮಾರ್ಚ್ 12 ರಂದು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

‘ಗೌಳಿ’ಯ ಗೌಜು ಇಂದಿನಿಂದ ಆರಂಭ ಇದು ಪಕ್ಕಾ ಕಲ್ಟ್‌ ಮತ್ತು ಮಾಸ್‌ ಎಂಟರ್‌ಟೇನರ್‌.

Fri Feb 24 , 2023
  ‘ಗೌಳಿ’  ಸಿನಿಮಾದ ಬಗ್ಗೆ ನಿರ್ಮಾಪಕ ರಘು ಸಿಂಗಂ ಲವಲವಿಕೆ ಜೊತೆ ಮಾತನಾಡಿದ್ದಾರೆ.ಬಿಡುಗಡೆಗೆ ಮುನ್ನವೇ ಹಲವು ಸಂಗತಿಗಳಿಂದ ಕುತೂಹಲ ಹುಟ್ಟಿಸಿದೆ ಶ್ರೀನಗರ ಕಿಟ್ಟಿ ಅಭಿನಯದ ‘ಗೌಳಿ’ ಸಿನಿಮಾ. ಇಂದಿನಿಂದ ಗೌಳಿಯ ಅಬ್ಬರ ತೆರೆಯ ಮೇಲೆ ಶುರುವಾಗಲಿದ್ದು, ಪ್ರೇಕ್ಷಕರಿಗೆ ಮನರಂಜನೆ ನೀಡಲಿದೆ. ಈ ಸಿನಿಮಾವನ್ನು ಸೋಹನ್‌ ಫಿಲ್ಮ್‌ ಫ್ಯಾಕ್ಟರಿ ಬ್ಯಾನರ್‌ನಡಿ ರಘು ಸಿಂಗಂ ನಿರ್ಮಾಣ ಮಾಡಿದ್ದಾರೆ. ‘ಶುಗರ್‌ಲೆಸ್‌’, ‘ವೀರಂ’ ಸಿನಿಮಾಗಳಿಗೆ ಕಾರ್ಯಕಾರಿ ನಿರ್ಮಾಪಕರಾಗಿದ್ದ ಅವರು ಮೊದಲ ಬಾರಿಗೆ ಸ್ವತಂತ್ರವಾಗಿ ನಿರ್ಮಾಣ ಮಾಡಿದ್ದಾರೆ.’ನಾನು […]

Advertisement

Wordpress Social Share Plugin powered by Ultimatelysocial