ʼಪ್ಯಾನ್‌ ಇಂಡಿಯಾʼ ಪರಿಕಲ್ಪನೆ ಹೊಸತಲ್ಲ, ಅದು ಹಿಂದೆಯೇ ಇತ್ತು:

 

ಮುಂಬೈ: ಪುಷ್ಪ – ದಿ ರೈಸ್, RRR ಮತ್ತು KGF 2 ನಂತಹ ದಕ್ಷಿಣ ಭಾರತೀಯ ಚಲನಚಿತ್ರಗಳು ಭಾರತೀಯ ಗಲ್ಲಾಪೆಟ್ಟಿಗೆಯಲ್ಲಿ ದಾಖಲೆಯನ್ನು ಸೃಷ್ಟಿಸುತ್ತಿದ್ದಂತೆ, ಪ್ಯಾನ್‌ ಇಂಡಿಯಾ ಚಿತ್ರಗಳು, ಉತ್ತರ ಭಾರತ ಚಿತ್ರ vs ದಕ್ಷಿಣ ಭಾರತದ ಚಿತ್ರಗಳು ಎಂಬಂತ ವಿಷಯಗಳು ಚರ್ಚೆಯ ಮುನ್ನೆಲೆಗೆ ಬರತೊಡಗಿದೆ.

ಸದ್ಯ, ತನ್ನ ಬಹುನಿರೀಕ್ಷಿತ ʼವಿಕ್ರಮ್‌ʼ ಚಿತ್ರದ ಬಿಡುಗಡೆ ತಯಾರಿಯಲ್ಲಿರುವ ಕಮಲ್‌ ಹಾಸನ್‌ ಇವೆರಡೂ ಚರ್ಚೆಗಳ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ವಿಕ್ರಮ್ ಚಿತ್ರದ ಪ್ರಚಾರ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಕಮಲ್‌ ಹಾಸನ್‌, ಪ್ಯಾನ್-ಇಂಡಿಯಾ ಪರಿಕಲ್ಪನೆಯು ಹೊಸತೇನಲ್ಲ, ಅದು ಈ ಹಿಂದೆಯೂ ಇಲ್ಲಿ ಇತ್ತು ಎಂದು ಹೇಳಿದ್ದಾರೆ.

‘ಪ್ಯಾನ್‌ ಇಂಡಿಯಾ (ಚಲನಚಿತ್ರಗಳು) ಯಾವಾಗಲೂ ಇದ್ದವು. ಶಾಂತಾರಾಮ್ ಜಿ (ವಿ ಶಾಂತಾರಾಮ್) ಪ್ಯಾನ್-ಇಂಡಿಯಾ ಚಲನಚಿತ್ರಗಳನ್ನು ಮಾಡಿದ್ದಾರೆ. ಪಡೋಸನ್ ಒಂದು ಪ್ಯಾನ್-ಇಂಡಿಯನ್ ಚಲನಚಿತ್ರವಾಗಿದೆ. ಮೊಘಲ್-ಎ-ಅಜಮ್ ನನ್ನ ಮಟ್ಟಿಗೆ ಪ್ಯಾನ್‌ ಇಂಡಿಯಾ ಚಿತ್ರವಾಗಿದೆ. ಇದೇನು ಹೊಸ ವಿಷಯವಲ್ಲ. ನಮ್ಮ ದೇಶ ವಿಶಿಷ್ಟವಾಗಿದೆ ಎಂದು ಹೇಳಿದ್ದಾರೆ.

ಯುನೈಟೆಡ್ ಸ್ಟೇಟ್ಸ್‌ಗಿಂತ ಭಿನ್ನವಾಗಿ, ನಾವು ವಿಭಿನ್ನ ಭಾಷೆಗಳನ್ನು ಮಾತನಾಡುತ್ತೇವೆ ಆದರೆ ನಾವು ಒಗ್ಗಟ್ಟಾಗಿದ್ದೇವೆ ಮತ್ತು ಅದು ನಮ್ಮ ದೇಶದ ಸೌಂದರ್ಯವಾಗಿದೆ ಎಂದು ಅವರು ಹೇಳಿದ್ದಾರೆ. ʼಪ್ಯಾನ್-ಇಂಡಿಯಾ ಚಲನಚಿತ್ರಗಳು ಯಾವಾಗಲೂ ಇರುತ್ತವೆ. ಇದು ಚಲನಚಿತ್ರವು ಎಷ್ಟು ಉತ್ತಮ ಮತ್ತು ಎಷ್ಟು ಸಾರ್ವತ್ರಿಕವಾಗಿದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆʼ ಎಂದು ಹೇಳಿದ್ದಾರೆ. .

ಮಲಯಾಳಂ ಚಲನಚಿತ್ರ ʼಚೆಮ್ಮೀನ್ʼ ಪ್ಯಾನ್-ಇಂಡಿಯಾ ಚಲನಚಿತ್ರವಾಗಿತ್ತು. ಅವರು ಅದನ್ನು ಡಬ್ ಮಾಡಿಲ್ಲ, ಯಾವುದೇ ಉಪಶೀರ್ಷಿಕೆಗಳಿಲ್ಲ, ಆದರೂ ಜನರು ಅದನ್ನು ಆನಂದಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

ಉತ್ತರ ಮತ್ತು ದಕ್ಷಿಣ ಸಿನಿಮಾ ಚರ್ಚೆಯ ಬಗ್ಗೆ ಪ್ರತಿಕ್ರಿಯಿಸುವಂತೆ ಕೇಳಿದಾಗ, “ನಾನು ಭಾರತೀಯ. ನೀವು ಏನು? ತಾಜ್ ಮಹಲ್ ನನ್ನದು, ಮಧುರೈ ದೇವಸ್ಥಾನ ನಿಮ್ಮದು. ಕನ್ಯಾಕುಮಾರಿ ನಿಮ್ಮದಾಗಿರುವಂತೆ ಕಾಶ್ಮೀರವೂ ನನ್ನದು’ ಎಂದು ಚರ್ಚೆಗೆ ಪೂರ್ಣ ವಿರಾಮ ಹಾಕಲು ಪ್ರಯತ್ನಿಸಿದ್ದಾರೆ.

ಲೋಕೇಶ್ ಕನಕರಾಜ್ ನಿರ್ದೇಶನದ ʼವಿಕ್ರಮ್ʼ ಜೂನ್ 3 ರಂದು ಚಿತ್ರಮಂದಿರಗಳಿಗೆ ಬರಲಿದೆ. ಈ ಚಿತ್ರದಲ್ಲಿ ಕಮಲ್‌ ಹಾಸನ್‌ ಜೊತೆಗೆ ಫಹದ್‌ ಫಾಸಿಲ್‌, ವಿಜಯ್‌ ಸೇತುಪತಿ, ಚೆಂಬನ್‌ ವಿನೋದ್‌ ಜೋಸ್‌ ಮೊದಲಾದವರು ನಟಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

'ಅಂಬಿ' ಹುಟ್ಟು ಹಬ್ಬಕ್ಕೆ 'ಅಭಿಷೇಕ್ ಅಂಬರೀಶ್' 3ನೇ ಸಿನಿಮಾ ಲಾಂಚ್!

Sat May 28 , 2022
ರೆಬೆಲ್ ಸ್ಟಾರ್ ಅಂಬರೀಶ್ ಪುತ್ರ ನಟ ಅಭಿಷೇಕ್ ಅಂಬರೀಶ್ ಸಿನಿಮಾ ರಂಗದಲ್ಲಿ ನಾಯಕ ನಟನಾಗಿ ಅದೃಷ್ಟ ಪರೀಕ್ಷೆಗೆ ಇಳಿದು ಬಹು ಸಮಯವಾಗಿದೆ. ಈಗಾಗಲೇ ‌ಮೊದಲ ಸಿನಿಮಾದ ಮೂಲಕ ಬೆಳ್ಳಿ ಪರದೆ ಮೇಲೆ ರಾರಾಜಿಸಿದ್ದಾರೆ. ‘ಅಮರ್’ ಸಿನಿಮಾದೊಂದಿಗೆ ಅಭಿಷೇಕ್ ಒಂದು ಮಟ್ಟಿಗೆ ಅಭಿನಯದ ಮೂಲಕ ಜನ ಮನ ಗೆದ್ದಿದ್ದಾರೆ. ‘ಅಮರ್’ ಸಿನಿಮಾದ ಬಳಿಕ ಈಗ ‘ಬ್ಯಾಡ್ ಮ್ಯಾನರ್ಸ್’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದ ಶೂಟಿಂಗ್ ಭರದಿಂದ ಸಾಗಿದೆ. ಸದ್ಯ ಮೈಸೂರಿನಲ್ಲಿ ಚಿತ್ರೀಕರಣ […]

Advertisement

Wordpress Social Share Plugin powered by Ultimatelysocial