ಇಂದು ದೆಹಲಿ ರೈತರ ಹೋರಾಟ ಬೆಂಬಲಿಸಿ ರಾಜ್ಯದಲ್ಲಿಯೂ ಸಹ ಹಲವು ರೈತ ಸಂಘಟನೆಗಳು ಹೆದ್ದಾರಿ ತಡೆ ಮಾಡಲು ಸಜ್ಜಾಗಿವೆ. ವಿವಿಧ ರೈತ ಸಂಘಟನೆಗಳು ಮತ್ತು ಇತರೆ ಸಂಘಟನೆಗಳು ಈ ಹೆದ್ದಾರಿ ತಡೆಗೆ ಬೆಂಬಲ ನೀಡಿವೆ. ಮಧ್ಯಾಹ್ನ 12ರಿಂದ 3 ಗಂಟೆವರೆಗೆ ಹೆದ್ದಾರಿ ತಡೆದು ಬಂದ್ ಮಾಡಲಿದ್ದಾರೆ. ಹೀಗಾಗಿ ರಾಜ್ಯ ರಾಜಧಾನಿಯಲ್ಲಿ ಖಾಕಿ ಪಡೆ ನಿಗಾ ವಹಿಸಿದೆ. ದೆಹಲಿಯಲ್ಲಿ ನಡೆದ ರೈತರ ದಂಗೆಯಂತೆ ಇಲ್ಲಿ ಯಾವುದೇ ಸಣ್ಣ ಘಟನೆಯೂ ನಡೆಯದಂತೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಾಲಾಗಿದೆ.. ರೈತರ ರಾಷ್ಟ್ರೀಯ ಹೆದ್ದಾರಿ ತಡೆ ಹೋರಾಟ ಹಿನ್ನೆಲೆ, ಯಲಹಂಕ ಪೊಲೀಸ್ ಠಾಣೆ ಮುಂಭಾಗದ ವೃತ್ತದಲ್ಲಿ ಬಿಗಿ ಬಂದೋ ಬಸ್ತ್ ಮಾಡಲಾಗಿದೆ. ಕೆಎಸ್ಆರ್ಪಿ ನಿಯೋಜಿಸಿ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿರುವ ಪೊಲೀಸ್ ಇಲಾಖೆ, ಯಲಹಂಕ ನ್ಯೂ ಟೌನ್ ಬಳಿಯ ನಾಗೇನಹಳ್ಳಿ ಗೇಟ್ ಬಳಿಯೂ ಟೈಟ್ ಸೆಕ್ಯೂರಿಟಿ ನೀಡಿದೆ. ರಸ್ತೆ ತಡೆಗೆ ಅನುಮತಿ ಕೊಡಲ್ಲ ಎಂದು ಪೊಲೀಸರು ಹೇಳುತ್ತಿದ್ದರೆ, ರಸ್ತೆ ತಡೆ ಮಾಡೇ ಮಾಡ್ತೀವಿ ಅಂತ ರೈತರು ಪಟ್ಟು ಹಿಡಿದು ಕುಳಿತಿದ್ದಾರೆ. ಯಲಹಂಕ ಖಒZ ಗ್ಯಾಲರಿ ಮಾಲ್ ಮುಂಭಾಗದ ರಸ್ತೆಯನ್ನೇ ತಡೆಯಲು ರೈತರು ನಿರ್ಧಾರ ಮಾಡಿದ್ದಾರೆ.
ಇದನ್ನೂ ಓದಿ :20 ಲಕ್ಷ ಲಂಚ ಸ್ವೀಕರಿಸಿ ಎಸಿಬಿ ಕೈಗೆ ಸಿಕ್ಕಿಬಿದ್ದ